Tuesday, 31 January 2017

ಜ್ಞಾನ ದೀಪ

ಶ್ರೀನಿವಾಸ್ ಹೆಚ್ ಎನ್

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?

A). ಪಂಪ
B). ರನ್ನ
C). ಜನ್ನ
D). ಪೊನ್ನ

Correct Ans: (A)
Description:

ಪಂಪ

ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾಣ ಮತ್ತೊಂದು ವಿಕ್ರಮಾರ್ಜುನ ವಿಜಯ (ಪಂಪ ಭಾರತ). "ಆದಿಕವಿ", "ಕನ್ನಡದ ಕಾವ್ಯ ಪಿತಾಮಹ" ಮತ್ತು "ಕನ್ನಡದ ರತ್ನಾತ್ರಯ" ಎಂಬ ಬಿರುದುಗಳು ಇವೆ.

2.)

"ಪಂಪನು ಕನ್ನಡದ ಕಾಳಿದಾಸ" ಎಂದು ಕರೆದವರು ಯಾರು?

A). ದ.ರಾ.ಬೇಂದ್ರೆ
B). ಕುವೆಂಪು
C). ತಿ.ನಂ.ಶ್ರೀಕಂಠಯ್ಯ
D). ಬಿ.ಎಂ.ಶ್ರೀ.

Correct Ans: (C)
Description:

ತಿ.ನಂ.ಶ್ರೀಕಂಠಯ್ಯ

"ಪಂಪನು ಕನ್ನಡದ ಕಾಳಿದಾಸ" ಎಂದು ಕರೆದವರು ತಿ.ನಂ.ಶ್ರೀಕಂಠಯ್ಯ. ಪಂಪನಿಗೆ "ಕವಿತಾಗುಣಾರ್ಣವ ಸರಸ್ವತಿ ಮಣಿಹಾರ" ಮತ್ತು "ಕನ್ನಡದ ವ್ಯಾಸ" ಎಂಬ ಬಿರುದುಗಳಿವೆ. ಶತ್ರುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರಾಜನನ್ನು ಪಂಪ "ಪಗರಣದರಸ" ಎಂದು ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾನೆ.

3.)

'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಪಂಪ
B). ಪೊನ್ನ
C). ರನ್ನ
D). ಕುವೆಂಪು

Correct Ans: (B)
Description:

ಪೊನ್ನ

ಕವಿ ರತ್ನಾತ್ರಯರಲ್ಲಿ ಪೊನ್ನ ಎರಡನೆಯವನು. ರಾಷ್ಟ್ರಕೂಟರ 3ನೇ ಕೃಷ್ಣನ ಆಸ್ಥಾನದ ಕವಿ. ಇವರ ಪ್ರಮುಖ ಕೃತಿಗಳು ಶಾಂತಿ ಪುರಾಣ, ಜಿನಾಕ್ಷರ ಮಾಲೆ. ಇವರಿಗೆ 'ಕವಿಚಕ್ರವರ್ತಿ', 'ಉಭಯ ಚಕ್ರವರ್ತಿ' ಮತ್ತು 'ಕುರುಳ್ಗಳ್ ಸವಣ' ಎಂಬ ಬಿರುದುಗಳಿವೆ.

4.)

'ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?

A). ಅತ್ತಿಮಬ್ಬೆ
B). ಅಬ್ಬಲಬ್ಬೆ
C). ಶಾಂತಿ
D). ಜಿನವಲ್ಲಭ

Correct Ans: (A)
Description:

ಅತ್ತಿಮಬ್ಬೆ

ಕವಿ ರನ್ನ ತನ್ನ ಅಜಿತ ಪುರಾಣದ ಪೀಠಿಕಾ ಭಾಗದಲ್ಲಿ ಅತ್ತಿಮಬ್ಬೆಯ ಜಿನ ಭಕ್ತಿಯನ್ನು 'ಜಿನಧರ್ಮಪಾತಕೆ' ಎಂದು ಕೊಂಡಾಡಿದ್ದಾನೆ. ರನ್ನನ ಗುರುವಿನ ಹೆಸರು ಅಜಿತಸೇನಾಚಾರ್ಯರು. ಕನ್ನಡದ ರತ್ನಾತ್ರಯರಲ್ಲಿ ಕವಿ ರನ್ನನ್ನು ಸಹ ಒಬ್ಬರಾಗಿದ್ದಾರೆ.

5.)

'ಕವಿಕುಲ ಚಕ್ರವರ್ತಿ' ಮತ್ತು 'ಕವಿತಿಲಕ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಜನ್ನ
B). ಪೊನ್ನ
C). ರನ್ನ
D). ಪಂಪ

Correct Ans: (C)
Description:

ರನ್ನ

ರನ್ನ ಒಬ್ಬ ಶ್ರೇಷ್ಟ ಕವಿ. ಇವರ ಪ್ರಮುಖ ಕೃತಿಗಳು ಅಜಿತ ಪುರಾಣ, ಚಕ್ರೇಶ್ವರ ಚರಿತೆ (ದೊರೆತಿಲ್ಲ), ಸಾಹಸ ಭೀಮ ವಿಜಯ ಮತ್ತು ಪರಶುರಾಮ ಚರಿತೆ. ಕವಿ ರನ್ನ ಇವರಿಗೆ ಇರುವ ಬಿರುದುಗಳು ಹೀಗಿವೆ: 'ಕವಿಕುಲಚಕ್ರವರ್ತಿ' 'ಕವಿಜನಚೂಡಾರತ್ನ', ಕವಿತಿಲಕ ಮತ್ತು ಕವಿ ಚರ್ತುಮುಖ.

6.)

'ವೀರ ಮಾರ್ತಾಂಡ ದೇವ' ಎಂಬ ಬಿರುದನ್ನು ಹೊಂದಿದವರು ಯಾರು?

A). ಒಂದನೇ ನಾಗವರ್ಮ
B). ಪೊನ್ನ
C). ನಯನಸೇನ
D). ಚಾವುಂಡರಾಯ

Correct Ans: (D)
Description:

ಚಾವುಂಡರಾಯ

ಚಾವುಂಡರಾಯ ಗಂಗ ದೊರೆ ರಾಜಮಲ್ಲನ ಮಂತ್ರಿ. ಇವರ ಪ್ರಮುಖ ಗ್ರಂಥ 'ತ್ರಿಷಷ್ಟಿಲಕ್ಷಣ ಮಹಾ ಪುರಾಣ'. ಚಾವುಂಡರಾಯನು 'ವೀರ ಮಾರ್ತಾಂಡ ದೇವ' ಮತ್ತು 'ಸಮ್ಯಕ್ತ್ವ ರತ್ನಾಕರ' ಎಂಬ ಬಿರುದ್ದನ್ನು ಹೊಂದಿದ್ದನ್ನು.



7.)

'ಅಭಿನವ ಪಂಪ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ
B). ನಯನಸೇನ
C). ದುರ್ಗಸಿಂಹ
D). ಕುವೆಂಪು

Correct Ans: (A)
Description:

ನಾಗಚಂದ್ರ

'ಹಿತಮಿತವಪ್ಪ ಲಲಿತ ಶೈಲಿಯಲ್ಲಿ ಕಾವ್ಯರಚಿಸಿರುವನೆಂದು ತನ್ನನ್ನು ಪಂಪನೊಂದಿಗೆ ಹೋಲಿಸಿಕೊಂಡು 'ಅಭಿನವ ಪಂಪ' ಎಂದು ಕೊಂಡಿದ್ದಾನೆ. ನಾಗಚಂದ್ರನ ಪ್ರಮುಖ ಗ್ರಂಥಗಳು 'ಮಲ್ಲಿನಾಥ ಪುರಾಣ' ಮತ್ತು 'ರಾಮಚಂದ್ರ ಚರಿತ ಪುರಾಣ (ಪಂಪ ರಾಮಾಯಣ)'.

8.)

'ವಿಡಂಬನಾ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ
B). ನಾಗವರ್ಮ
C). ನಯನಸೇನ
D). ದುರ್ಗಸಿಂಹ

Correct Ans: (C)
Description:

ನಯನಸೇನ

'ಧರ್ಮಾಮೃತ' ನಯಸೇನ ರಚಿಸಿದ ಕೃತಿಯಾಗಿದೆ. ಧರ್ಮಾಮೃತದಲ್ಲಿ ಕವಿ ಸ್ವಧರ್ಮ ಮಂಡನೆಗಾಗಿ ಅನ್ಯ ಧರ್ಮವನ್ನು ಕಟುವಾಗಿ ಟೀಕಿಸಿದ್ದಾನೆ. ಈ ಕಾವ್ಯದಲ್ಲಿನ ವಿಡಂಬನೆಯಿಂದ ಇವನನ್ನು 'ವಿಡಂಬನಾ ಕವಿ' ಎಂದು ಕರೆಯಲಾಗಿದೆ. ಧರ್ಮಾಮೃತ ಸರಳ ಚಂಪೂ ಮಾರ್ಗದಲ್ಲಿ ರಚಿತವಾದ ಮೊದಲ ಜೈನ ಪುರಾಣ ಎಂದು ಪ್ರಸಿದ್ಧಿಯಾಗಿದೆ.

9.)

ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?

A). ರಮಾದೇವಿ
B). ನಿರ್ಮಲ
C). ಅಕ್ಕ ಮಹಾದೇವಿ
D). ಸುಮತಿ

Correct Ans: (C)
Description:

ಅಕ್ಕಮಹಾದೇವಿ

ಅಕ್ಕಮಹಾದೇವಿಯವರನ್ನು ದಕ್ಷಿಣ ಭಾರತದ ಮೀರಾದೇವಿ ಎಂದು ಕರೆಯುವರು. ಇವರು ಕನ್ನಡ ಸಾಹಿತ್ಯದ ಮೊದಲ ಕವಯತ್ರಿ ಮತ್ತು ವಚನಕಾರ್ತಿ. ಚೆನ್ನಮಲ್ಲಿಕಾರ್ಜುನ ಎಂಬುದು ಇವರ ಅಂಕಿತನಾಮ. 'ಯೋಗಾಂಗ ತ್ರಿವಿಧಿ' ಎಂಬುದು ಅಕ್ಕಮಹಾದೇವಿಯವರ ತ್ರಿಪದಿಯಲ್ಲಿ ರಚಿತವಾಗಿರು ಕೃತಿ.

10.)

'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ರಾಘವಾಂಕ
B). ಹರಿಹರ
C). ಸಿದ್ಧರಾಮ
D). ಚೆನ್ನ ಬಸವಣ್ಣ

Correct Ans: (B)
Description:

ಹರಿಹರ

ಶಿವ ಕವಿ, ಭಕ್ತಿ ಕವಿ, ಕ್ರಾಂತಿ ಕವಿ ಮತ್ತು ರಗಳೆ ಕವಿ ಎಂದು ಪ್ರಸಿದ್ಧವಾದ ಕವಿ ಹರಿಹರ. ವೀರಶೈವ/ಸಾಹಿತ್ಯದಲ್ಲಿ ಹಿರಿಯನೂ ಪ್ರಮುಖನು ಆದ ಪ್ರಾಚೀನ ಕವಿ. ಕನ್ನಡ ಸಾಹಿತ್ಯಕ್ಕೆ ಮೊದಲು ರಗಳೆಗಳನ್ನು ಪರಿಚಯಿಸಿದವನು ಹರಿಹರ. ಗಿರಿಜಾ ಕಲ್ಯಾಣ, ಪಂಪಶತಕ, ರಕ್ಷಾ ಶತಕ, ಮುಡಿಗೆಯ ಅಷ್ಟಕ ಶಿವಶರಣರ ರಗಳೆಯನ್ನು ರಚಿಸಿದ್ದಾರೆ.

11.)

'ಷಟ್ಪದಿ ಬ್ರಹ್ಮ' ಎಂದು ಯಾರನ್ನು ಕರೆಯುತ್ತಾರೆ?

A). ರಾಘವಾಂಕ
B). ಕುಮಾರ ವ್ಯಾಸ
C). ಹರಿಹರ
D). ಜನ್ನ

Correct Ans: (A)
Description:

ರಾಘವಾಂಕ

ರಾಘವಾಂಕನು ತನ್ನ ಕೃತಿಗಳನ್ನು ವಾರ್ಧಕ ಷಟ್ಪಧಿಯಲ್ಲಿ ರಚಿಸಿ "ಷಟ್ಪದಿ ಬ್ರಹ್ಮ" ಎಂದು ಪ್ರಸಿದ್ಧಿಯನ್ನು ಹೊಂದಿದ್ದಾನೆ. ಉಭಯ ಕವಿ, ಕಮಲ ಕವಿ, ಕವಿ ಶರಭ ಭೇರುಂಡ, ಷಟ್ಪದಿಗಳ ಬ್ರಹ್ಮ ಎಂಬ ಬಿರುದುಗಳನ್ನು ಹೊಂದಿದ್ದಾನೆ. ಇವರ ಪ್ರಮುಖ ಕೃತಿಗಳು : ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತೆ, ಸಿದ್ಧರಾಮ ಚರಿತೆ, ವೀರೇಶ ಚರಿತೆ, ಶರಭಚಾರಿತ್ರ್ಯ.



12.)

'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಪ್ರಸಿದ್ಧಿ ಪಡೆದ ಕವಿ ಯಾರು?

A). ಜನ್ನ
B). ರಾಘವಾಂಕ
C). ಕುಮಾರವ್ಯಾಸ
D). ಲಕ್ಷ್ಮೀಶ

Correct Ans: (C)
Description:

ಕುಮಾರ ವ್ಯಾಸ

ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಹೆಚ್ಚು ರೂಪಕಗಳನ್ನು ಬಳಸಿದ್ದಾನೆ, ಆದ್ದರಿಂದ 'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಕರೆಯುತ್ತಾರೆ. ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂದು ಪ್ರಸಿದ್ಧವಾಗಿರುವ "ಕರ್ಣಾಟಕ ಭಾರತ ಕಥಾಮಂಜರಿ" ಎಂಬ ಭಾಮಿನಿ ಷಟ್ಪದಿಯ ಕಾವ್ಯವನ್ನು ರಚಿಸಿದವರು ಕುಮಾರವ್ಯಾಸ.

13.)

'ಶೃಂಗಾರ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ಚಾಮರಸ
B). ರತ್ನಾಕರವರ್ಣಿ
C). ಅಂಡಯ್ಯ
D). ಮಲ್ಲಿಕಾರ್ಜುನ

Correct Ans: (B)
Description:

ರತ್ನಾಕರವರ್ಣಿ

'ಶೃಂಗಾರ ಕವಿ' ಎಂದು ಪ್ರಸಿದ್ಧರಾಗಿರುವ ರತ್ನಾಕರವರ್ಣಿಯವರು ಮೂಡಬಿದರೆಯವರು. ಇವರ ಪ್ರಮುಖ ಕೃತಿಗಳೆಂದರೆ : ಭರತೇಶ ವೈಭವ (ಸಾಂಗತ್ಯ), ತ್ರಿಲೋಕ ಶತಕ (ಕಂದ ಪದ್ಯ), ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರ ಶತಕ. ಇವರು ಕಾರ್ಕಳದ ಅರಸು ಭೈರವ ರಾಜನ ಆಸ್ಥಾನದ ಕವಿ.

14.)

'ನಾದಲೋಲ' ಮತ್ತು 'ಉಪಮಾ ಲೋಲ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಲಕ್ಷ್ಮೀಶ
B). ನಂಜುಂಡ ಕವಿ
C). ಕೇಶಿರಾಜ
D). ಶಿಶುಮಾಯಣ

Correct Ans: (A)
Description:

ಲಕ್ಷ್ಮೀಶ

ಲಕ್ಷ್ಮೀಶನು ಭಾರದ್ವಾಜ ಗೋತ್ರದ ಬ್ರಾಹ್ಮಣನಾಗಿದ್ದವನು. ಇವನಿಗಿದ್ದ ಪ್ರಮುಖ ಬಿರುದುಗಳೆಂದರೆ: 'ಕರ್ಣಾಟಕ ಚೂತವನ ಚೈತ್ರ', 'ನಾದಲೋಲ' ಮತ್ತು 'ಉಪಮಾಲೋಲ'. ಲಕ್ಷೀಶನು ರಚಿಸಿದ ಪ್ರಮುಖ ಕೃತಿಗಳು 'ಜೈಮಿನಿ ಭಾರತ'(ವಾರ್ದಕ ಷಟ್ಪದಿಯಲ್ಲಿ ರಚನೆಯಾಗಿದೆ),

15.)

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ
B). ಪಾಲ್ಕುರಿಕೆ ಸೋಮ
C). ಕುಮದೇಂದು
D). ಚೌಂಡರಸ

Correct Ans: (B)
Description:

ಪಾಲ್ಕುರಿಕೆ ಸೋಮ

ಪಾಲ್ಕುರಿಕೆ ಸೋಮ ತೆಲುಗು ಕವಿಯಾಗಿದ್ದ, ಸಂಸ್ಕೃತ ಪ್ರಾಕೃತ, ಕನ್ನಡ ಭಾಷೆಗಳಲ್ಲಿಯೂ ಗ್ರಂಥ ರಚನೆ ಮಾಡಿದ್ದಾನೆ ಈತನಿಗಿರುವ ಬಿರುದುಗಳು: ಕವಿತಾಸಾರ, ತತ್ವ ವಿದ್ಯಾಕಲಾಪ ಮತ್ತು ಅನ್ಯದೇವ ಕೋಲಾಹಲ.



16.)

'ಕವಿರಾಜಹಂಸ' ಎಂಬ ಬಿರುದು ಹೊಂದಿರುವ ಕವಿ ಯಾರು?

A). ಕುಮಾರ ವಾಲ್ಮೀಕಿ
B). ಭೀಮಕವಿ
C). ಷಡಕ್ಷರಿ
D). ತಿರುಮಲಾರ್ಯ

Correct Ans: (A)
Description:

ಕುಮಾರ ವಾಲ್ಮೀಕಿ

ಕುಮಾರ ವಾಲ್ಮೀಕಿ ಇವನ ನಿಜನಾಮ ನರಹರಿ. ಈತನಿಗೆ ಕವಿರಾಜಹಂಸ ಎಂಬ ಬಿರುದು ಇದೆ. ಈತನು ತೊರೆವ ರಾಮಾಯಣ (ಭಾಮಿನಿ ಷಟ್ಪದಿಯಲ್ಲಿದ್ದು ರಾಮಾಯಣದ ಕಥಾ ಅಂಧರವನ್ನು ಒಳಗೊಂಡಿದೆ) ಮತ್ತು ಐರಾವಣ ಕಾಳಗ ಎಂಬ ಕಾವ್ಯಗಳನ್ನು ರಚಿಸಿದ್ದಾನೆ.

17.)

'ಕರ್ನಾಟಕ ಸಂಗೀತ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?

A). ಕನಕದಾಸ
B). ವಾದಿರಾಜ
C). ಬಸವಣ್ಣ
D). ಪುರಂದರ ದಾಸ

Correct Ans: (D)
Description:

ಪುರಂದರ ದಾಸ

ಗಣಪತಿಯ ಸ್ತುತಿಯಾದ ಪಿಳ್ಳಾರಿಗೀತೆಗಳ ಮೂಲಕ 'ಕರ್ನಾಟಕ ಸಂಗೀತ ಪಿತಾಮಹ' ಎಂದು ಜನಪ್ರಿಯರಾದರು. ಇವರ ಕೀರ್ತನೆಗಳ ಅಂಕಿತ 'ಪುರಂದರ ವಿಠಲ'.ಪುರಂದರ ದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಇವರ ಕೀರ್ತನೆಗಳು ಶ್ರೀ ಕೃಷ್ಣನ ಬಾಲಲೀಲೆಗಳನ್ನು, ವಾತ್ಸಲ್ಯ ಭಾವದ ಗೀತೆಗಳನ್ನು ಮುಂತಾದವುಗಳ ಬಗ್ಗೆ ತಿಳಿಸಿದ್ದಾರೆ.

18.)

'ಸರಸ ಸಾಹಿತ್ಯದ ವರದೇವತೆ' ಎಂದು ಯಾರನ್ನು ಕರೆಯುತ್ತಾರೆ?

A). ಅತ್ತಿಮಬ್ಬೆ
B). ಸಂಚಿಯಹೊನ್ನಮ್ಮ
C). ಅಕ್ಕಮಹಾದೇವಿ
D). ಮಂಜುಳಾ

Correct Ans: (B)
Description:

ಸಂಚಿಯಹೊನ್ನಮ್ಮ

'ಸರಸ ಸಾಹಿತ್ಯದ ವರದೇವತೆ' ಎಂಬ ಬಿರುದಿಗೆ ಪಾತ್ರವಾಗಿರುವ ಸಂಚಿಯಹೊನ್ನಮ್ಮ ಕನ್ನಡ ಸಾಸಸತ್ವ ಲೋಕದ ಕವಿಯತ್ರಿಯರಲ್ಲಿ ಪ್ರಮುಖರು. ಇವರು ರಚಿಸಿದ ಪ್ರಮುಖ ಗ್ರಂಥ 'ಹದಿಬದೆಯ ಧರ್ಮ'(ಸಾಂಗತ್ಯ). ಹದಿಬದೆಯ ಧರ್ಮ ಕಾವ್ಯದಲ್ಲಿ ಪತಿವೃತಾ ಸ್ತ್ರೀಯ ಧರ್ಮವು ವಿಶದವಾಗಿ ರೂಪಿತವಾಗಿದೆ.

19.)

'ಕನ್ನಡದ ವರ್ಡ್ಸ್‌ವರ್ತ್' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಕುವೆಂಪು
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.

Correct Ans: (A)
Description:

ಕುವೆಂಪು

ಕುವೆಂಪು ಇವರ ಪೂರ್ಣ ಹೆಸರು ಕುಪ್ಪಳ್ಲಿ ವೆಂಕಟ್ಟಪ್ಪ ಪುಟ್ಟಪ್ಪ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ(1967) ಪಡೆದವರು ಮತ್ತು ಎರಡನೇ ರಾಷ್ಟ್ರಕವಿ (1964). ಇವರಿಗೆ ಕನ್ನಡದ ವರ್ಡ್ಸ್‌ವರ್ತ್ ಮತ್ತು ರಸ ಋಷಿ ಎಂಬ ಬಿರುದುಗಳಿವೆ. ಇವರ ಪ್ರಮುಖ ಕೃತಿಗಳು ಶ್ರೀ ರಾಮಾಯಣ ದರ್ಶನಂ, ನೆನಪಿನ ದೋಣಿಯಲ್ಲಿ (ಆತ್ಮಕಥನ).

20.)

'ಕನ್ನಡದ ವರಕವಿ' ಎಂಬ ಬಿರುದನ್ನು ಪಡೆದ ಕವಿ ಯಾರು?

A). ಕುವೆಂಪು
B). ವಿ.ಕೃ.ಗೋಕಾಕ್
C). ಶಿವರಾಮ ಕಾರಂತ
D). ದ.ರಾ.ಬೇಂದ್ರೆ

Correct Ans: (D)
Description:

ದ.ರಾ.ಬೇಂದ್ರೆ

ದ.ರಾ.ಬೇಂದ್ರೆ ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಇವರ ಕಾವ್ಯನಾಮ ಅಂಬಿಕಾತನಯ ದತ್ತ. ಇವರ ನಾಕುತಂತಿ ಎಂಬ ಕೃತಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇವರನ್ನು ಕನ್ನಡದ ವರಕವಿ ಎಂದು ಕರೆಯುತ್ತಾರೆ. ಇವರ ಪ್ರಮುಖ ಕೃತಿಗಳು ಮೇಘದೂತ, ನಾದ ಲೀಲೆ, ಅರಳು ಮರಳು, ಉಯ್ಯಾಲೆ ಇತ್ಯಾದಿ.

21.)

'ಕಡಲ ತೀರ ಭಾರ್ಗವ' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಶಿವರಾಮ ಕಾರಂತ
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.

Correct Ans: (A)
Description:

ಶಿವರಾಮ ಕಾರಂತ

ಶಿವರಾಮ ಕಾರಂತರು ಮೊದಲು ಪ್ರಕಟಿಸಿದ ಪುಸ್ತಕ 'ರಾಷ್ಟ್ರಗೀತೆ ಸುಧಾಕರ' ಎಂಬ ಕವನ ಸಂಕಲನ. ಶಿವರಾಮ ಕಾರಂತರು 10 ಅಕ್ಟೋಬರ್ 1902ರಂದು ಜನಿಸಿದರು. "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ಪಂಪ ಪ್ರಶಸ್ತಿ, ಪದ್ಮಭೂಷಣ, ಜ್ಞಾನಪೀಠ (ಮೂಕಜ್ಜಿಯ ಕನಸು ಎಂಬ ಕೃತಿಗೆ) ಮತ್ತು ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.

22.)

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?

A). ಕನ್ನಡದ ಶ್ರೀನಿವಾಸ
B). ಕನ್ನಡದ ಆಸ್ತಿ
C). ಕನ್ನಡದ ಮೇಸ್ಟ್ರು
D). ಕವಿ ವಲ್ಲಭ

Correct Ans: (B)
Description:

ಕನ್ನಡದ ಆಸ್ತಿ

ಮಾಸ್ತಿ ಕನ್ನಡದ ಆಸ್ತಿ ಎಂದೇ ಜನಪ್ರಿಯವಾಗಿದ್ದವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು. ಇವರು ಚಿಕ್ಕವೀರ ರಾಜೇಂದ್ರ ಎಂಬ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ರಚಿಸಿದ ಪ್ರಮುಖ ಕೃತಿಗಳು ಶ್ರೀ ರಾಮ ಪಟ್ಟಾಭಿಷೇಕ, ಗೌಡರ ಮಲ್ಲಿ, ರಾಮನವಮಿ, ತಾವರೆ ಮಲಾರ ನವರಾತ್ರಿ, ಒಂದು ಹಳೆಯ ಕಥೆ.

23.)

'ಕನ್ನಡದ ಕಣ್ವ' ಎಂದು ಯಾರನ್ನು ಕರೆಯುತ್ತಾರೆ?

A). ತ್ರೀ.ನಂ.ಶ್ರೀ.
B). ಬಿ.ಎಂ.ಶ್ರೀ
C). ಗೋವಿಂದ ಪೈ
D). ವಾಸುದೇವಚಾರ್ಯ

Correct Ans: (B)
Description:

ಬಿ.ಎಂ.ಶ್ರೀ.

ಬಿ.ಎಂ.ಶ್ರೀ ಇವರ ಪೂರ್ಣ ಹೆಸರು ಬೆಳ್ಳಾವೆ ಮೈಲಾರಯ್ಯ ಶ್ರೀಕಂಠಯ್ಯ. ಇವರ ಕಾವ್ಯನಾಮ ಶ್ರೀ. ಇವರನ್ನು ಕನ್ನಡದ ಕಣ್ವ ಎಂಉದ ಕರೆಯುತ್ತಾರೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 'ರಾಜ ಸೇವಾಸಕ್ತ' ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. 1941 ರಲ್ಲಿ ಶಷ್ಯರು ಹಾಗೂ ಮಿತ್ರರಿಗೆ 'ಸಂಭಾವನೆ' ಎಂಬ ಅಭಿನಂದನಾ ಗ್ರಂಥ ಅರ್ಪಿಸಿದರು. ಇದು ಕನ್ನಡದ ಮೊದಲ ಅಭಿನಂದನಾ ಗ್ರಂಥವಾಗಿದೆ.

24.)

ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?

A). ಅಭಿನವ ಕವಿ
B). ಅಭಿನವ ಕಾಳಿದಾಸ
C). ಅಭಿನಯ ತಾರೆ
D). ಕನ್ನಡ ತಾರೆ

Correct Ans: (B)
Description:

ಅಭಿನವ ಕಾಳಿದಾಸ

ಬಸವಪ್ಪ ಶಾಸ್ತ್ರಿಯವರು ಕಾಳಿದಾಸನ ಶಾಂಕುತಲಾ ಹಾಗೂ ಇತರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಆದ್ದರಿಂದ ಇವರನ್ನು ಅಭಿನವ ಕಾಳಿದಾಸ ಎಂದು ಕರೆಯುತ್ತಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ ಅನುಗ್ರಹದಿಂದ ಶಿಕ್ಷಣ ಪಡೆದು ಆಸ್ಥಾನದ ಕವಿಯಾದರು. ಇವರ ಪ್ರಮುಖ ಕೃತಿಗಳು 'ಕೃಷ್ಣರಾಜಾಭ್ಯುದಯ', ಸಾವಿತ್ರಿ ಚರಿತ್ರೆ, ಶಾಕುಂತಲಾ ನಾಟಕದ ಭಾಷಾಂತರ.

25.)

'ಪ್ರಾಕ್ತಾನ ವಿಮರ್ಶೆ ವಿಚಕ್ಷಣ' ಎಂದು ಯಾರನ್ನು ಕರೆಯುತ್ತಾರೆ?

A). ಆರ್.ನರಸಿಂಹಾಚಾರ್
B). ಎಸ್.ಜಿ.ನರಸಿಂಹಾಚಾರ್
C). ಡಿ.ವಿ.ಜಿ
D). ಉತ್ತಂಗಿ ಚೆನ್ನಪ್ಪ

Correct Ans: (A)
Description:

ಆರ್.ನರಸಿಂಹಾಚಾರ್

1913ರಲ್ಲಿ ಆಗಿನ ಮೈಸೂರು ಮಹಾರಾಜರು ಆರ್.ನರಸಿಂಹಾಚಾರ್ ರವರನ್ನು 'ಪ್ರಾಕ್ತನ ವಿಮರ್ಶೆ ವಿಚಕ್ಷಣ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 1934ರಲ್ಲಿ ಕೊಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘ ಇವರಿಗೆ 'ಪ್ರಾಚ್ಯ ವಿದ್ಯಾ ವೈಭವ' ಬಿರುದನ್ನು ನೀಡಿತು. ಜೊತೆಗೆ ಇವರನ್ನು ಕರ್ನಾಟಕ ಕವಿ ಚರಿತ್ರಕಾರರು ಎಂದು ಸಹ ಕರೆಯುತ್ತಾರೆ.

26.)

'ಆಧುನಿಕ ಸರ್ವಜ್ಞ' ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?

A). ಮಧುರ ಚೆನ್ನ
B). ಬೆನಗಲ್ ರಾಮರಾವ್
C). ಪು.ತಿ.ನ
D). ಡಿ.ವಿ.ಜಿ

Correct Ans: (D)
Description:

ಡಿ.ವಿ.ಜಿ

ಡಿ.ವಿ.ಜಿ. ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಮಂಕುತ್ತಿಮ್ಮನ ಕಗ್ಗ ಇದರಲ್ಲಿ ಜೀವನುಭವದ ರಸಪಾಕ ಸೂತ್ರ ರೂಪವಾಗಿ ಹೊರಹೊಮ್ಮಿದೆ ಡಿ.ವಿ.ಜಿಯವರಿಗೆ ಆಧುನಿಕ ಸರ್ವಜ್ಞ ಎಂಬ ಅಭಿದಾನವನ್ನು ತಂದು ಕೊಟ್ಟಿದೆ. ಪ್ರಮುಖ ಪದ್ಯ ಕಾವ್ಯಗಳು ಶ್ರೀರಾಮ ಪರೀಕ್ಷಣಂ, ಅನಂತಪುರಗೀತೆ, ಗೀತ ಶಾಕುಂತಲ.

27.)

'ಕನ್ನಡದ ಕಾಳಿದಾಸ' ಎಂಬ ಬಿರುದನ್ನು ಪಡೆದಿರುವ ಕವಿ ಯಾರು?

A). ಎಸ್.ವಿ.ಪರಮೇಶ್ವರ ಭಟ್ಟ
B). ಮಿರ್ಜಿ ಅಣ್ನಾರಾಯ
C). ಕುವೆಂಪು
D). ಆರ್.ಸಿ.ಹಿರೇಮಠ

Correct Ans: (A)
Description:

ಎಸ್.ವಿ.ಪರಮೇಶ್ವರ ಭಟ್ಟ

ಎಸ್.ವಿ.ಪರಮೇಶ್ವರ ಭಟ್ಟ ಇವರನ್ನು 'ಕನ್ನಡದ ಕಾಳಿದಾಸ' ಎಂದು ಕರೆಯುತ್ತಾರೆ. ಇವರು ರಚಿಸಿರುವ ಪ್ರಮುಖ ಕೃತಿಗಳು - ಕನ್ನಡ ಕಾಳಿದಾಸ, ಮಹಾಸಂಪುಟ, ಗಾಥಾಸಪ್ತಸತಿ, ಗೀತಗೋವಿಂದ, ಭಾಸ ಸಂಪುಟ, ಭವ ಭೂತಿ ಸಂಪುಟ ಇತ್ಯಾದಿ. ಕರ್ನಾಟಕ ಸಾಹಿತ್ಯ ಪ್ರಶಸ್ತಿ 1970ರಲ್ಲಿ ಲಭಿಸಿತು.

28.)

'ಸಂತ ಕವಿ' ಎಂದು ಖ್ಯಾತಿ ಪಡೆದಿರುವ ಕವಿ ಯಾರು?

A). ಬಿ.ಎಂ.ಶ್ರಿ
B). ಸರ್ವಜ್ಞ
C). ಪು.ತಿ.ನ
D). ತ್ರೀ.ನಂ.ಶ್ರೀ

Correct Ans: (C)
Description:

ಪು.ತಿ.ನ

ಪು.ತಿ.ನ ಇವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣಯ್ಯಂಗಾರ ನರಸಿಂಹಾಚಾರ್ಯ. ಇವರನ್ನು ಸಂತಕವಿ ಎಂದು ಕರೆಯುತ್ತಾರೆ. ಇವರು ರಚಿಸಿದ ಪ್ರಮುಖ ಗೀತ ನಾಟಕಗಳು ಅಹಲ್ಯೆ, ಶಬರಿ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ. ಇವರಿಗೆ 1965ರಲ್ಲಿ ಕೇಂಧ್ರ ಸಾಹಿತ್ಯ ಪ್ರಶಸ್ತಿ (ಹಂಸದಮಯಂತಿ ಕೃತಿಗೆ).

29.)

ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?

A). ಸ್ನೇಹ ಕವಿ
B). ಮೈಸೂರು ಕವಿ
C). ಪ್ರೇಮ ಕವಿ
D). ಮೇಲಿನ ಯಾವುದು ಅಲ್ಲ

Correct Ans: (C)
Description:

ಪ್ರೇಮ ಕವಿ

ಇವರು ಪ್ರೇಮಗೀತೆಗಳಿಗೆ ಸ್ಪೂರ್ತಿ ನೀಡಿದರು. ಇವರ ಮೊದಲ ಕವನ 'ಕಬ್ಬಿಗನ ಕೂಗು'. 1977 ರಲ್ಲಿ ‘ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯ ಸಂಸ್ಕೃತ ಪ್ರಸಾರ ಶಾಖೆ ಬಹುಮಾನ (1957 ರಲ್ಲಿ ಶಿಲಾಲತೆ ಕೃತಿಗೆ). ಪ್ರಮುಖ ಕವನ ಸಂಕಲನಗಳು ಮೈಸೂರು ಮಲ್ಲಿಗೆ (1943) ಮೊದಲ ಕವನ ಸಂಗ್ರಹ. ಐರಾವತ, ದೀಪದಮಲ್ಲಿ, ಉಂಗುರ, ಇರುವಂತಿಗೆ.

30.)

'ಕರ್ನಾಟಕ ನಾಟಕ ಪ್ರಹಸನ ಪಿತಾಮಹ' ಎಂದು ಖ್ಯಾತಿ ಪಡೆದವರು ಯಾರು?

A). ಜಿ.ಪಿ.ರಾಜರತ್ನಂ
B). ಸಿಂಪಿ ಲಿಂಗಣ್ಣ
C). ಪರ್ವತರಾಣಿ
D). ಟಿ.ಪಿ.ಕೈಲಾಸಂ

Correct Ans: (D)
Description:

ಟಿ.ಪಿ.ಕೈಲಾಸಂ

ಮಕ್ಕಳ ಸ್ಕೂಲು, ಮನೇಲಲ್ವೆ, ಟೊಳ್ಳುಗಟ್ಟಿ, ಏಕಾಂತದಿಂದ ಕರ್ನಾಟಕ ನಾಟಕ ಪ್ರಹಸನ ಪಿತಾಮಹರೆನಿಸಿಕೊಂಡರು. ಜೊತೆಗೆ ಕನ್ನಡ ಸಾಹಿತ್ಯದಲ್ಲಿ ನವ್ಯ ನಾಟಕಗಳ ಪಿತಾಮಹರಿವರು. ಇವರ ಪ್ರಮುಖ ನಾಟಕಗಳು ಬಹಿಷ್ಕಾರ, ಗಂಡಸ್ಕತ್ರಿ, ನಮ್ಬ್ರೂಹ್ಮಣ್ಕೆ, ನಮ್ ಕ್ಳಬ್ಬು, ಅಮ್ಮಾವ್ರ ಗಂಡ, ಸತ್ತವನ ಸಂತಾಪ, ಶೂರ್ಪನಖಾ.

31.)

'ಚುಟುಕು ಬ್ರಹ್ಮ' ಎಂದು ಹೆಸರುವಾಸಿಯಾಗಿದ್ದವರು ಯಾರು?

A). ದಿನಕರ ದೇಸಾಯಿ
B). ಜಿ.ಎಸ್.ಅಮೂರ
C). ಕಯ್ಯಾರಕಿಞ್ಞಣ್ಣ ರೈ
D). ಸುನಂದಮ್ಮ

Correct Ans: (A)
Description:

ದಿನಕರ ದೇಸಾಯಿ

ಚುಟುಕು ಬ್ರಹ್ಮರೆಂದು ಹೆಸರು ಪಡೆದಿರುವ ಮಕ್ಕಳ ಸಾಹಿತ್ಯದಲ್ಲಿ ಪ್ರಮುಖರು. ದಿನಕರನ ಚೌಪದಿ ಕೃತಿಗೆ 1980ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕವನಗಳು ಹೂಗೊಂಚಲು, ದಾಸಾಳ, ನನ್ನ ದೇಹದ ಬೂದಿ, ಆತ್ಮ ವಿಶ್ವಾಸ, ಬಿರುಗಾಳಿ ಇತ್ಯಾದಿ. ಇವರು 'ಜನಸೇವಕ' ಎಂಬ ಪತ್ರಿಕೆಯನ್ನು ನಡೆಸಿದರು









ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with ಶ್ರೀಶ್ರೀನಿವಾಸ
1.ಈ ಕೆಳಗಿನವರಲ್ಲಿ ಶಿವಾಜಿಯ ತಂದೆ ಯಾರು?

A). ರಾಜಾರಾಮ
B). ಸಾಂಬಾಜಿ
C). ಷಹಜೀ ಬೋಂಸ್ಲೆ
D). ಮೇಲಿನ ಯಾರು ಅಲ್ಲ

Correct Ans: (C)
Description:
ಷಹಜೀ ಬೋಂಸ್ಲೆ

# ಷಹಜೀ ಬೋಂಸ್ಲೆ ಇವರು ಅಹಮದ್ ನಗರದ ನಿಜಾಂಷಾಹಿ ಸುಲ್ತಾನನ ಬಳಿ ದಂಡನಾಯಕನಾಗಿದ್ದನು.

# ಷಹಜೀ ಬೋಂಸ್ಲೆ  ಮತ್ತು ಜೀಜಾಬಾಯಿಯವರ ಪುತ್ರನಾಗಿ  ಶಿವಾಜಿಯು ಶಿವನೇರುದುಗ೯ದಲ್ಲಿ  ಜನಿಸಿದನು.

2.)
ಶಿವಾಜಿಯು ಯಾವ ವಷ೯ ಸಿಂಹಾಸನವನ್ನು ಏರಿದನು?

A). 1665
B). 1666
C). 1660
D). 1674

Correct Ans: (D)
Description:
1674

# ಶಿವಾಜಿಯು ಕ್ರಿ.ಶ 1670 ರಲ್ಲಿ ಸೂರತ್ ನ್ನು ಎರಡನೇ ಬಾರಿಗೆ ಲೂಟಿ ಮಾಡಿದನು.

# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ ಮಹಾರಾಜ ಛತ್ರಪತಿ ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

# ಶಿವಾಜಿಯು ಕ್ರಿ.ಶ 1680 ರಲ್ಲಿ ತನ್ನ 53 ನೇ ವಯಸ್ಸಿನಲ್ಲಿ ಮರಣಹೊಂದಿದನು.

3.)
ಈ ಕೆಳಗಿನ ಯಾವ ಮರಾಠ ದೊರೆಯು "ಮಹಾರಾಜ ಛತ್ರಪತಿ" ಎಂಬ ಬಿರುದನ್ನು ಹೊಂದಿರುವನು?

A). ಷಹಜೀ ಬೋಂಸ್ಲೆ
B). ಶಿವಾಜಿ
C). ಸಾಂಬಾಜಿ
D). ರಾಜಾರಾಮ

Correct Ans: (B)
Description:
ಶಿವಾಜಿ

# ಶಿವಾಜಿಯು ಕ್ರಿ.ಶ 1627 ರಲ್ಲಿ ಶಿವನೇರುದುಗ೯ದಲ್ಲಿ ಜನಿಸಿದನು.

# ಶಿವಾಜಿಯ ತಂದೆ : ಷಹಜೀ ಬೋಂಸ್ಲೆ ತಾಯಿ : ಜೀಜಾಬಾಯಿ

# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

4.)
ಶಿವಾಜಿಯು ಯಾರೊಂದಿಗೆ ಪುರಂದರ ಒಪ್ಪಂದವನ್ನು ಮಾಡಿಕೊಂಡನು?

A). ಜಯಸಿಂಗ
B). ಇಮ್ಮಡಿ ಪುಲಕೇಶಿ
C). ಹಷ೯ವಧ೯ನ
D). ಅಕ್ಬರ್

Correct Ans: (A)
Description:
ಜಯಸಿಂಗ

# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.

5.)
ಶಿವಾಜಿಯನ್ನು ಕ್ರಿ.ಶ 1666 ರಲ್ಲಿ ಯಾವ ಮೊಘಲ್ ದೊರೆಯು ಬಂಧಿಸಿದನು.

A). ಅಕ್ಬರ್
B). ಷಹಜಹಾನ್
C). ಔರಂಗಜೇಬ್
D). ಹುಮಾಯೂನ್

Correct Ans: (C)
Description:
 ಔರಂಗಜೇಬ್

# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ಆಗ್ರಾಕ್ಕೆ ಬೇಟಿ ನೀಡಿದಾಗ ಔರಂಗಜೇಬ್ ನು ಶಿವಾಜಿ ಮತ್ತು ಅವನ ಮಗ ಸಾಂಬಾಜಿಯನ್ನು ಬಂಧಿಸಿದನು. ಆದರೆ ಶಿವಾಜಿ ಮತ್ತು ಸಾಂಬಾಜಿ ಚಾಣಾಕ್ಷತನದಿಂದ ಬಂಧನದಿಂದ ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಹಿಂದಿರುಗಿದರು.

6.)
 ಈ ಕೆಳಗಿನವರಲ್ಲಿ ಯಾವ ದೊರೆಯು ಆಡಳಿತದಲ್ಲಿ "ಅಷ್ಟಪ್ರಧಾನ ವ್ಯವಸ್ಥೆ" ಹೊಂದಿರುವನು?

A). ವಿಷ್ಣು ವಧ೯ನ
B). ಮಯೂರವಮ೯
C). ಇಮ್ಮಡಿ ಪುಲಕೇಶಿ
D). ಶಿವಾಜಿ

Correct Ans: (D)
Description:
 ಶಿವಾಜಿ

# ಮರಾಠ ದೊರೆಯಾದ ಶಿವಾಜಿಯ ಆಳ್ವಿಕೆಯ ಕಾಲ ಕ್ರಿ.ಶ 1627 - 1680

# ಶಿವಾಜಿಯು ಎಂಟು ಮಂತ್ರಿಗಳನ್ನುಳ್ಳ "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ" ಯನ್ನು ರೂಪಿಸಿದನು

#  "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ"ಯ ಎಂಟು ಮಂತ್ರಿಗಳು

1) ಪೇಶ್ವೆ ಅಥವಾ ಮುಖ್ಯ ಪ್ರಧಾನ : ಇವನು ಪ್ರಧಾನಮಂತ್ರಿ ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನು.

2) ಮಜುಮ್ ದಾರ್ ಅಥವಾ ಅಮಾತ್ಯ : ಹಣಕಾಸು ಮಂತ್ರಿ

3) ಮಂತ್ರಿ ಅಥವಾ ವಖಿಯಾ ನಾವಿಸ್ : ಇವನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನು ಆಗಿದ್ದನು.

4) ಸಚಿವ ಅಥವಾ ಸುನ೯ವಿಸ್ : ಇವನು ಮುಖ್ಯ ಕಾಯ೯ದಶಿ೯ಯಾಗಿದ್ದು, ರಾಜನ ಸಂಪಕಾ೯ಧಿಕಾರಿಯಾಗಿದ್ದನು.

5) ಸುಮಂತ ಅಥವಾ ದಾಭಿರ್ : ವಿದೇಶಾಂಗ ಸಚಿವನಾಗಿದ್ದನು.

6) ಸೇನಾಪತಿ ಅಥವಾ ಸಾರ್ - ಇ - ನೌಬತ್ : ಮುಖ್ಯ ಸೇನಾನಿಯಾಗಿದ್ದನು.

7) ಪಂಡಿತ್ ರಾವ್ ಅಥವಾ ದಂಡಾಧ್ಯಕ್ಷ : ಧಾಮಿ೯ಕ ಸಲಹೆಗಾರ, ದಾನ ದತ್ತಿಗಳ ಮೇಲ್ವಿಚಾರಕನಾಗಿದ್ದನು.

8) ನ್ಯಾಯಾಧೀಶ : ಮುಖ್ಯ ನ್ಯಾಯಾಧೀಶನಾಗಿದ್ದನು.

7.)
ಶಿವಾಜಿ  ಆಡಳಿತದಲ್ಲಿ ಸರ್ನೋಬತ್ ಎಂದರೆ..........

A). ಗ್ರಾಮ ಮುಖಂಡ
B). ಗುಮಾಸ್ತ
C). ಸೈನೈಧಿಕಾರಿ
D). ಭೂ ದಾಖಲೆ ಇಡುವವ

Correct Ans: (C)
Description:
ಸೈನೈಧಿಕಾರಿ

# ಶಿವಾಜಿ ಆಡಳಿತದಲ್ಲಿ ಸೇನಾಪತಿಗೆ (ಸರ್ನೋಬತ್) - ಸೈನ್ಯದ ಮಹಾದಂಡನಾಯಕ. ಸೈನಿಕರು ನೇಮಕ, ಶಿಸ್ತು, ದಕ್ಷತೆ ಇವನಿಗೆ ಸೇರಿದ್ದಿತು. ಶಿವಾಜಿಯ ಸೇನಾಪತಿ "ಹಂಬಿರರಾವ ಮೋಹಿತೆ" ನಾಗಿದ್ದನು.

8.)
ಶಿವಾಜಿ ಆರಂಭದಲ್ಲಿ ನಿಗದಿಪಡಿಸಿದ್ದ  ಭೂ ಕಂದಾಯ ಪ್ರಮಾಣವು ಶೇ .............

A). 33
B). 60
C). 44
D). 70

Correct Ans: (A)
Description:
33

# ಶಿವಾಜಿ ಆರಂಭದಲ್ಲಿ ಶಿವಾಜಿ ಕತಿ ಎಂಬ ಕಟ್ಟಿಗೆ ಮಾಪನ ಬಳಸಿ, ಭೂ ಸವೇಕ್ಷಣೆ ಮಾಡಿಸಿ ಫಲವತ್ತೆಗೆ ತಕ್ಕಂತೆ ಭೂ ಕಂದಾಯವನ್ನು ನಿಗದಿಪಡಿಸಿದನು ಒಟ್ಟು ಉತ್ಪನ್ನದ ಶೇ 33% ಭಾಗವನ್ನು ಭೂ ಕಂದಾಯವಾಗಿ ನಿಗದಿಪಡಿಸಿದನು.

9.)
ಶಿವಾಜಿ ನಂತರದ ಕಾಲದಲ್ಲಿ ಭೂ ಕಂದಾಯ ಶೇ 33 ರಿಂದ......ಗೆ ಹೆಚ್ಚಾಯಿತು?

A). 40%
B). 37%
C). 35%
D). 55%

Correct Ans: (A)
Description:
40%

# ಶಿವಾಜಿ ನಂತರದ ಕಾಲದಲ್ಲಿ ಇತರ ತೆರಿಗೆಗಳನ್ನು ರದ್ದುಪಡಿಸಿ ಅದನ್ನು ಶೇ .40%  ಕ್ಕೆ ಹೆಚ್ಚಿಸಲಾಯಿತು ಭೂ ಕಂದಾಯವನ್ನು ಹಣ ಇಲ್ಲವೆ ಧ್ಯಾನವನ್ನು ಕಂತುಗಳ ರೂಪದಲ್ಲಿ ಕೊಡಲು ಆರಂಭ ಮಾಡಿದನು.

10.)
 ಶಿವಾಜಿಯ ಮುಖ್ಯ ಸೇನಾ ವಿಭಾಗಗಳಾವುವು?

1) ಅಶ್ವಪಡೆ 2)ಫಿರಂಗಿ ಪಡೆ 3)ಕಾಲು ಪಡೆ 4) ಗಜಪಡೆ

A). 1 ಮತ್ತು 2
B). 2 ಮತ್ತು 3
C). 1.2. ಮತ್ತು 3
D). 1.2.3.4

Correct Ans: (D)
Description:
 1.2.3.4

 # ಶಿವಾಜಿಯ ಸೈನ್ಯವು ಮುಖ್ಯ ಶಿವಾಜಿಯ ಸೈನ್ಯವು ಕಾಲ್ದಳ, ಅಶ್ವಪಡೆ, ಗಜಪಡೆ, ಒಂಟೆಪಡೆ, ನೌಕಪಡೆ, ಮತ್ತು ಫಿ

ರಿಂಗಿಪಡೆಗಳಿಂದ ಕೂಡಿತ್ತು. ಅವನ ಬಳಿ 1 ಲಕ್ಷ ಮಾವಳಿಗಳು, 60,000  ಶಿಲಾಹ್ದಾದರು, 45,000 ಅಶ್ವಪಡೆ, 1260 ಆನೆಗಳು, 3000 ಒಂಟೆಗಳು ಮತ್ತು 80 ಫಿರಂಗಿಗಳಿದ್ದವು, ಸೈನ್ಯದ ಮೇಲ್ವಿಚಾರಣೆ ಮಹಾದಂಡ ನಾಯಕನಿಗೆ ಸೇರಿತ್ತು.

11.)
ಶಿವಾಜಿಯ ಕೋಟೆಯ ಅಧಿಕಾರಿ............

A). ಸಬ್ನೀಸ್
B). ಹವಾಲ್ದಾರ್
C). ದುರ್ಗಪಾಲಿ
D). ಸರ್ನೋಬತ್

Correct Ans: (D)
Description:
ಸರ್ನೋಬತ್

# ಶಿವಾಜಿ ಕೋಟೆಯಲ್ಲಿ ಹಜಾರಿಗಳ ಮೇಲೆ ಒಬ್ಬ ಸರ್ನೋಬತ್ ಅಧಿಕಾರ ಅಥವಾ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. ಸೇನಾಪತಿ ಕಾಲ್ದಳದ ಮುಖ್ಯಸ್ಥನಾಗಿದ್ದನು. ಯುದ್ದದ್ದಲಿ ಶಿವಾಜಿಯೇ ಸರ್ವೋಚ್ಛ ಸೇನಾಪತಿಯಾಗಿ ಸ್ವತ: ನಾಯಕತ್ವ ವಹಿಸಿತುತ್ತಿದ್ದನು ಹವಾಲ್ದಾರ 50 ಜುಮ್ಲಾದಾರ 100 ಹಜಾರಿ 1000 ಸೈನಿಕರಿಗೆ ನಾಯಕರಾಗಿದ್ದರು ಸರ್ನೋಬತ್ ಕೈ ಕೆಳಗೆ 7000 ಸೈನಿಕರಿದ್ದರು.

12.)
ಮರಾಠರ ಗ್ರಾಮಾಡಳಿತದ ಮುಖ್ಯಸ್ಥ...............

A). ದೇಶಪಾಂಡೆ
B). ಪಟೇಲ
C). ಕನಕಲ್
D). ದೇಶಮುಖ್

Correct Ans: (B)
Description:
ಪಟೇಲ

#ಶಿವಾಜಿ ಆಡಳಿತ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ ವಿಂಗಡಿಸಿದನು.ಗ್ರಾಮ ಆಡಳಿತದ ಕಡೆಯ ಆಡಳಿತ ಘಟಕವಾಗಿದ್ದು. ಗ್ರಾಮಾಡಳಿತ ಪಟೇಲನಿಗೆ ಸೇರಿತ್ತು.ಗ್ರಾಮ ಮುಖಂಡನಾದ ಪಟೇಲ ನೆರವಿಗೆ ಗ್ರಾಮ ಪಂಚಾಯಿತಿಗಳಿದ್ದವು.

13.)
ಶಿವಾಜಿ ಯಾವಾಗ ಜನಿಸಿದನು?

A). ಕ್ರಿ.ಶ.1625
B). ಕ್ರಿ.ಶ.1627
C). ಕ್ರಿ.ಶ.1647
D). ಕ್ರಿ.ಶ.1628

Correct Ans: (B)
Description:
ಕ್ರಿ.ಶ.1627

ಶಿವಾಜಿಯು ಏಫ್ರೀಲ್ 20, 1627 ಪೂನಾ ಬಳಿಯ ಶಿವನೇರುದುಗ೯ದಲ್ಲಿ ಜನಿಸಿದನು. ಶಿವಾಜಿಯ ತಂದೆ ಷಹಜೀ ಬೋಂಸ್ಲೆ, ತಾಯಿ ಜೀಜಾಬಾಯಿ. ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

14.)
ಶಿವಾಜಿಯ ನೌಕ ನೆಲೆ ಎಲ್ಲಿತ್ತು ?

A). ಕೊಲಾಬಾ
B). ಕಲ್ಯಾಣ
C). ಬೆಸ್ಸಿನ್
D). ಸಾಲ್ಸಿಟಿ

Correct Ans: (A)
Description:
ಕೊಲಾಬಾ

# ಚೋಳರು ಬಿಟ್ಟರೆ ಭಾರತದಲ್ಲಿ ನೌಕ ಪಡೆಗೆ ಹೆಚ್ಚಿನ ಗಮನ ನೀಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅವನು ದೌಲತಖಾನ್ ನೇತೃತ್ವದಲ್ಲಿ ಒಂದು ನೌಕಪಡೆ ನಿರ್ಮಿಸಿದನು ಕೋಲಾಬ ಅದರ ಕೇಂದ್ರವಾಗಿತ್ತು.

15.)
ಬಾಲಾಜಿ ವಿಶ್ವನಾಥನು ಪೇಶ್ವೆಯಾದದು _________ರಲ್ಲಿ

A). 1712
B). 1713
C). 1715
D). 1718

Correct Ans: (B)
Description:
1713

# ಬಾಲಾಜಿ ವಿಶ್ವನಾಥನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಜಿಂಜಿರಾಧ ಶ್ರೀ ವರ್ಧನ ಎಂಬಲ್ಲಿ ಜನಿಸಿದನು.

16.)
ಶಿವಾಜಿಯ ಆಧ್ಯಾತ್ಮಕ ಗುರು ಯಾರು?

A). ರಾಮದಾಸ
B). ರೈದಾಸ
C). ದಾದಾಜಿಕೊಂಡದೇವ
D). ಶಂಕರದೇವ

Correct Ans: (A)
Description:
ರಾಮದಾಸ

#ಶಿವಾಜಿಯ ಬಾಲ್ಯದಲ್ಲಿ ತಂದೆಯ ಪ್ರೀತಿಯನ್ನು ಪಡೆಯುವಲ್ಲಿ ವಂಚಿತನಾದನು.ತಾಯಿ- ಜೀಜಾಬಾಯಿ,ದಾದಾಜಿಕೊಂಡದೇವ ಮತ್ತು ಗುರು ರಾಮದಾಸರು ಅವನನ್ನು ಮಹಾಯೋಧನನ್ನಾಗಿ ಸ್ವಧರ್ಮ ಮತ್ತು ಸ್ವರಾಜ್ಯ ನಿರ್ಮಾಣ ಕಾರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

17.)
ಶಿವಾಜಿ ಯಾವಗ ಸೂರತನ್ನು 2 ಬಾರಿ ಲೂಟಿ ಮಾಡಿದನು.

A). 1664 ಮತ್ತು 1670
B). 1665 ಮತ್ತು 1871
C). 1666 ಮತ್ತು 1672
D). 1667 ಮತ್ತು 1675

Correct Ans: (A)
Description:
1664 ಮತ್ತು 1670

#1664-1670  ರ ಜನವರಿ 20 ರಂದು ಶಿವಾಜಿ ಮೊಗಲರ ಶ್ರೀಮಂತ ರೇವುಪಟ್ಟಣವಾದ ಸೂರತನ್ನು ಮುತ್ತಿ ಲೂಟಿ ಮಾಡಿದನು ಸುಮಾರು 1 ಕೋಟಿ.ರೂ ಸಂಪತ್ತು ಅವನ ವಂಶವಾಯಿತು. 1670- 2 ನೇ ಬಾರಿಗೆ ಸೂರತನ್ನು ಮುತ್ತಿ 66 ಲಕ್ಷ ರೂ ಸಂಪತ್ತನ್ನು ದೋಚಿದನು.



18.)
ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ಶ್ರೇಷ್ಠರು?

A). ಸಚಿವ
B). ಅಮಾತ್ಯ
C). ಸುಮುಂತ
D). ಪೇಶ್ವ

Correct Ans: (B)
Description:
ಅಮಾತ್ಯ

ಶಿವಾಜಿ ಅಷ್ಠ ಪ್ರಧಾನರಲ್ಲಿ ಅಮಾತ್ಯ (ಮಜುಂದಾರ್) ಅರ್ಥ ಸಚಿವ, ಕಂದಾಯ ಮಂತ್ರಿ ಸಾರ್ವಜನಿಕ ಅದಾಯ ಖರ್ಚು-ವೆಚ್ಚ ವೀಕ್ಷಿಸುವುದು ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪರಿಶೀಲಿಸುವುದು ಇವನ ಕರ್ತವ್ಯಗಳಾಗಿದ್ದು ಮಜುಂದಾರ ಅವನ ಮತ್ತೊಂದು ಹೆಸರು ರಾಮಚಂದ್ರ ನೀಲಕಂಠ.

19.)
ಕೃಷ್ಣಾದಿಂದ ಅಟ್ಟೋಕವರಗೆ ಮರಾಠ ಧ್ವಜ ಹಾರಡಲು ಹೀಗೆಂದು ಹೇಳಿದವರು...

A). 1 ನೇ ಬಾಜಿರಾಯ
B). ಬಾಲಾಜಿರಾವ
C). ಬಾಲಾಜಿ ವಿಶ್ವನಾಥ
D). ಶಿವಾಜಿ

Correct Ans: (A)
Description:
1 ನೇ ಬಾಜಿರಾಯ

ಒಂದನೇ ಬಾಜಿರಾಯ (ಕ್ರಿ.ಶ.1720-1740) ಬಾಲಾಜಿ ವಿಶ್ವನಾಥನ ಮರಣದ ನಂತರ ಅವನ ಹಿರಿಯ ಮಗ ಒಂದನೇ ಬಾಜೀರಾಯನನ್ನು ತನ್ನ ಪೇಶ್ವೆಯಾಗಿ ನೇಮಿಸಿಕೊಂಡನು. ಮೊಗಲ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು. ಅವನು ಮರಾಠ ಮುಖಂಡರಿಗೆ ಹೀಗೆ ಹೇಳಿದನು."ಇದೀಗ ಹಿಂದೂಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದ್ದವಾಗಿದೆ. ಮೊಗಲ ಸಾಮ್ರಾಜ್ಯವು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಅದರ ಕೊಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ." ಹಾಗದಲ್ಲಿ ಮರಾಠ ಧ್ವಜವನ್ನು ಕೃಷ್ಣಾ ನದಿಯಿಂದ ಅಟ್ಟೋಕವರೆಗೆ (ಸಿಂಧೂ ನದಿ) ಹಾರಾಡುವಂತೆ ಮಾಡೋಣ " ಸಾಹು ಪೇಶ್ವೆಯ ನೀತಿಯನ್ನು ಬೆಂಬಲಿಸಿ "ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದಗೆ ತಕ್ಕ ಮಗ". ಹೇಳಿದನು.

20.)
ಶಿವಾಜಿ ಯಾವ ಮೊಗಲ್ ದಂಡನಾಯಕನೊಡನೆ ಪುರಂದರ ಒಪ್ಪಂದ ಮಾಡಿಕೊಂಡನು?

A). ದಿಲವಾರಖಾನ್
B). ಜೈಸಿಂಗ್
C). ಬಹದ್ದೂರ್ ಖಾನ್
D). ಜಸ್ವಂತ್ ಸಿಂಗ್

Correct Ans: (B)
Description:
ಜೈಸಿಂಗ್

#ಪುರಂದರ ಗಡ ಒಪ್ಪಂದ (ಜೂನ 22, 1665) ಮೊಗಲರ ದಾಳಿಗಳಿಂದ ಮರಾಠರಿಗೆ ತುಂಬಾ ಹಾನಿಯಾಯಿತು. ಮಾವಳಿ ಮುಖಂಡ ಮುನಾರಬಾಜಿ ದೇಶಪಾಂಡೆ 300 ಮಾವಳಿಗಳೊಂದಿಗೆ ಹೋರಾಡಿ ಹತನಾದನು. ವಿಧಿ ಇಲ್ಲದೆ ಶಿವಾಜಿ ರಾಯಗಡವನ್ನು ಉಳಿಸಿಕೊಳ್ಳಲು ಜೈಸಿಂಗನೊಡನೆ ಪುರಂದರಗಢ ಒಪ್ಪಂದ ಮಾಡಿಕೊಂಡನು.

21.)
ಶಿವಾಜಿಗೆ ಕಿರೀಟ ಧಾರಣೆಯಾ

ದ ವರ್ಷ........

A). ಕ್ರಿ.ಶ.1774
B). ಕ್ರಿ.ಶ.1778
C). ಕ್ರಿ.ಶ.1672
D). ಕ್ರಿ.ಶ.1674

Correct Ans: (D)
Description:
ಕ್ರಿ.ಶ.1674

#ಶಿವಾಜಿಯ ಕಿರೀಟಧಾರಣೆ ಜೂನ್ 16, 1674 ರಂದು ರಾಯಗಡದಲ್ಲಿ ಶಿವಾಜಿ ಪಟ್ಟಾಭಿಷಿಕ್ತನಾಗಿ ’ ಛತ್ರಪತಿ’ ಎಂಬ ಬಿರುದು ಗಳಿಸಿದನು ಛತ್ರಪತಿ ಎಂದರೆ ರಾಜರ ರಾಜ ಎಂದರ್ಥ.

22.)
ಶಿವಾಜಿ ಮರಣ ಹೊಂದಿದ ವರ್ಷ..........

A). ಕ್ರಿ.ಶ.1680
B). ಕ್ರಿ.ಶ.1984
C). ಕ್ರಿ.ಶ.1686
D). ಕ್ರಿ.ಶ.1690

Correct Ans: (A)
Description:
ಕ್ರಿ.ಶ.1680

#ಶಿವಾಜಿ ಬೆಂಗಳೂರನ್ನು ಆಕ್ರಮಿಸಿ ಅದನ್ನು ಏಕೋಜಿಗೆ ಒಪ್ಪಿಸಿದನು. ಶ್ರೀರಂಗಪಟ್ಟಣವನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದನು. 1678 ರಲ್ಲಿ ತುಂಗಭದ್ರ ನದಿಯ ಉತ್ತರ ಭಾಗ ಅವನ ಕೈ ಸೇರಿತು. ಏಫ್ರಿಲ್ 14, 1680 ರಂದು ಶಿವಾಜಿ ತನ್ನ 53 ವಯಸ್ಸಿನಲ್ಲಿ ತೀರಿಕೊಂಡನು.

23.)
ಶಿವಾಜಿ ತನ್ನ ರಾಜ್ಯವನ್ನು .......... ಭಾಗಗಳಾಗಿ ವಿಭಾಗಿಸಿದ್ದನು?

A). 2
B). 3
C). 4
D). 5

Correct Ans: (C)
Description:
 4

#ಶಿವಾಜಿ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ (ಪೂನಾ,ಕೊಂಕಣ,ಉತ್ತರ ಕಾರವಾರ, ಸೂರತ್) ನಲ್ಲಿ ವಿಂಗಡಿಸಿದ್ದನು. ಪ್ರತಿ ಪ್ರಾಂತ್ಯಕ್ಕೆ ಒಬ್ಬೊಬ್ಬ ರಾಜ್ಯಪಾಲರನನ್ನು (ಸುಬೇದಾರ) ನೇಮಿಸಿದನು. ಅವನ ನೆರವಿಗೆ ಅಷ್ಠ ಪ್ರಧಾನರು ಎಂಬ 8 ಅಧಿಕಾರಿಗಳ ವರ್ಗದವರು ಇರುತ್ತಿದ್ದರು. ಪ್ರಾಂತ್ಯಗಳನ್ನು ಮತ್ತೆ ಜಿಲ್ಲೆಗಳಾಗಿ ವಿಭಾಗಿಸಿದ್ದನು.

24.)
ಶಿವಾಜಿ ನೆರಹೊರೆ ರಾಜ್ಯಗಳಿಂದ ಸಂಗ್ರಹಿಸುತ್ತಿದ್ದ ಸರ್ದೇಶಮುಖಿ ತೆರಿಗೆ ಪ್ರಮಾಣ.........

A). ಆ ಪ್ರದೇಶದ ವಾರ್ಷಿಕ ಆದಾಯದ 1/5 ಭಾಗ
B). ಆ ಪ್ರದೇಶದ ವಾರ್ಷಿಕ ಆದಾಯದ 1/6 ಭಾಗ
C). ಆ ಪ್ರದೇಶದ ವಾರ್ಷಿಕ ಆದಾಯದ 1/2 ಭಾಗ
D). ಆ ಪ್ರದೇಶದ ವಾರ್ಷಿಕ ಆದಾಯದ 1/10

Correct Ans: (D)
Description:
ಆ ಪ್ರದೇಶದ ವಾರ್ಷಿಕ ಆದಾಯದ 1/10

#ಚೌತ್ ಮತ್ತು ಸರದೇಶಮುಖಿ ತೆರಿಗೆಗಳು ಮಹಾರಾಷ್ಟ್ರವು ಬೆಟ್ಟ ಗುಡ್ಡಗಳಿಂದ ಆವೃತ್ತ ಪ್ರದೇಶವಾದ್ದರಿಂದ ಬೊಕ್ಕಸಕ್ಕೆ ಹೆಚ್ಚಿನ ಭೂ ಕಂದಾಯ ಬರುತ್ತಿರಲಿಲ್ಲ ಹೀಗಾಗಿ ಸರ್ಕಾರ ನಡೆಸುವುದು ಕಷ್ಠಕರವಾಯಿತು.ಆದ ಕಾರಣ ಶಿವಾಜಿ ತನ್ನ ಅಧೀನದ ನೆರೆಹೊರೆಯ ಪ್ರಾಂತ್ಯಗಳ ಮೇಲೆ ಚೌತ ಮತ್ತು ಸರದೇಶಮುಖಿ ಎಂಬೆರಡು ಮಿಲಿಟರಿ ತೆರಿಗೆಗಳನ್ನು ವಿಧಿಸಿ ಸಂಗ್ರಹಿಸಿದನು. ಅವನು ತನ್ನ ಸಾಮ್ರಜ್ಯದ ಹೊರಗಿದ್ದ ಪ್ರದೇಶಗಳಿಂದ ಸಂಗ್ರಹಿಸುತ್ತಿದ್ದನು.ಅವು ಕ್ರಮವಾಗಿ ಒಟ್ಟು ಆ ಪ್ರದೇಶದ ವಾರ್ಷಿಕ ಆದಾಯದ 1/4 ಮತ್ತು 1/10 ಭಾಗಗಳಾಗಿದ್ದವು.

25.)
 ಪ್ರಥಮ ಪೇಶ್ವೆ ಯಾರು?

A). ಬಾಲಾಜಿ ಬಾಜಿರಾಯ
B). ಬಾಲಾಜಿ ವಿಶ್ವನಾಥ
C). 1ನೇಯ ಬಾಜಿರಾಯ
D). ಮಾಧವರಾವ್

Correct Ans: (B)
Description:
 ಬಾಲಾಜಿ ವಿಶ್ವನಾಥ

ಬಾಲಾಜಿ ವಿಶ್ವನಾಥ (1713-1720) ನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ. ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಬೆಂಜಿರಾದ ಶ್ರೀವರ್ಧನ ಎಂಬಲ್ಲಿ ಜನಿಸಿದನು. ಈತ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದನು.

26.)
 ಮರಾಠರು ತಮ್ಮ ಗೆಲುವಿಗೆ ನೆರವಾಗುತ್ತಿದ್ದ ಗೆರಿಲ್ಲಾ ಯುದ್ದತಂತ್ರವನ್ನು ಯಾರಿಂದ ಕಲಿಯುತ್ತಿದ್ದರು ?

A). ಬಿಜಾಪುರ ಸುಲ್ತಾನನಿಂದ
B). ಮೀರಜಾಹರ
C). ಷಹಜಿಯಿಂದ
D). ಅಹಮದನಗರದ ಮಂತ್ರಿ ಮಲ್ಲಿಕ್ ಅಂಬರ್

Correct Ans: (D)
Description:
 ಅಹಮದನಗರದ ಮಂತ್ರಿ ಮಲ್ಲಿಕ್ ಅಂಬರ್

#ಶಿವಾಜಿ ಸೈನ್ಯದಲ್ಲಿ ಮೊಗಲರ ವಿರುದ್ದ ಗೆರಿಲ್ಲಾ ಯುದ್ದ ತಂತ್ರವನ್ನು ಬಳಸಿದನು ಮಹಾರಾಷ್ಟ್ರವು ಬೆಟ್ಟಗುಡ್ಡಗಳಿಂದ ಕೂಡಿದ್ದು ಅಲ್ಲಿ ಸೈನ್ಯ ಅವಿತುಕೊಂಡು ಇದ್ದಕ್ಕಿದಂತೆ ಶತ್ರುಗಳ ಮೇಲೆ ದಾಳಿ ಮಾಡುವ ತಂತ್ರವೇ ಗೆರಿಲ್ಲಾ ಯುದ್ದ ತಂತ್ರವಾಗಿತ್ತು.ಇದು ಆಗಾಧವಾಗಿದ್ದ ಮೊಗಲ ಸೇನಗೆ ದಿಕ್ಕೆಟ್ಟಿಸಿತು. ಈ ತಂತ್ರ ಮರಾಠ ಸೈನ್ಯದ ವಿಶಿಷ್ಠ ಅಂಗವಾಗಿತ್ತು.

27.)
ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ವಿದೇಶಾಂಗ ವ್ಯವಹಾರ ನೋಡಿಕೊಳ್ಳುತ್ತಿದ್ದರು?

A). ಪೇಶ್ವೆ
B). ಮಂತ್ರಿ
C). ಸುಮಂತ
D). ಸಜೀವ

Correct Ans: (C)
Description:
ಸುಮಂತ

ಶಿವಾಜಿಯ ಅಷ್ಠ ಪ್ರಧಾನರಲ್ಲಿ ಸುಮಂತ ದಬೀರ, ವಿದೇಶಾಂಗ ಮಂತ್ರಿ ರಾಯಭಾರಿಗಳ ನೇಮಕ, ಯುದ್ದ ಕುರಿತು ರಾಜನಿಗೆ ಸಲಹೆ ನೀಡುವುದು ಇವನ ಕರ್ತವ್ಯವಾಗಿತ್ತು. ಶಿವಾಜಿಯ ಸುಮಂತ ರಾಮಚಂದ್ರ ತಿಯಂಬಕ್....

28.)
ಶಿವಾಜಿಯ ಅಷ್ಠ ಪ್ರಧಾನರಲ್ಲಿ ಸೈನ್ಯದ ಮೇಲ್ವಿಚಾರಣೆ ಯಾರಿಗೆ ಸೇರಿತ್ತು?

A). ಅಮಾತ್ಯ
B). ಸೇನಾಪತಿ
C). ಸಾಮಂತ
D). ಪೇಶ್ವೆ

Correct Ans: (B)
Description:
ಸೇನಾಪತಿ

ಶಿವಾಜಿ ಆಷ್ಠ ಪ್ರಧಾನರಲ್ಲಿ ಸೈನ್ಯದ ಸೇನಾಪತಿ (ಸರ್ನೋಬತ್) ಸೈನ್ಯದ ಮಹಾದಂಡ ನಾಯಕ ಸೈನಿಕರ ನೇಮಕ, ದಕ್ಷತೆ ಇವನಿಗೆ ಸೇರಿದ್ದಿತ್ತು. ಶಿವಾಜಿಯ ಸೇನಾಪತಿ ಹಂಬಿರರಾವ ಮೋಹಿತೆ.

29.)
3 ನೇ ಪಾಣಿಪತ್ ಕದನದಲ್ಲಿ ಮರಾಠರ ಕಡೆ ಸತ್ತವರ ಸಂಖ್ಯೆ............

A). 1 ಲಕ್ಷ
B). 28,000
C). 25,000
D). 1,28,000

Correct Ans: (B)
Description:
28,000

3 ನೇ ಪಾಣಿಪತ ಕದನ 1761 ರಲ್ಲಿ ನಡೆಯಿತು. 3 ಪಾಣಿಪತ್ ಕದನ ಭಾರತದ ನಿರ್ಣಾಯಕ ಕದನಗಳಲ್ಲಿ ಒಂದು. ಅದು ಭಾರತದ ಅದೃಷ್ಠವನ್ನು ನಿರ್ಧರಿಸಿತು. ಇದು ಭಾರತದ ಇತಿಹಾಸದಲ್ಲಿ ಒಂದು ಕ್ರಾಂತಿಕಾರಿ ಘಟನೆಯಾದ ಇದು ಬೀರಿದ ಪರಿಣಾಮಗಳು ಈ ಮುಂದಿನಂತಿವೆ. ವಿನಾಶ - 3 ಪಾಣಿಪತ್ ಕದನದಲ್ಲಿ ಒಟ್ಟು 28,000 ಸೈನಿಕರು 50,000 ಕುದುರೆಗಳು, 500 ಆನೆಗಳು, 2 ಲಕ್ಷ ದನಗಳು ಸೇರಿದಂತೆ ಒಟ್ಟು 1 ಲಕ್ಷ ಸೈನಿಕರು ಹತರಾದರು. ಕದನದ ಪ್ರತ್ಯಕ್ಷದರ್ಶಿ ಕಾಶಿರಾಜ ಪಂಡಿತ ಹೇಳಿರುವಂತೆ  "ಪಾಣಿಪತ್ ಕದನ ನಿಜಕ್ಕೂ ಮರಾಠ ಜನತೆಯ ಪ್ರಳಯದ ದಿನವಾಗಿತ್ತು".

30.)
"ಬೀಳುತ್ತಿರುವ ಒಣ ಮರಕ್ಕೆ ಕೊಡಲಿ ಪೆಟ್ಟು ಹಾಕೋಣ ಅದರ ರೆಂಬೆ ಕೊಂಬೆಗಳು ತಾವಾಗಿಯೇ ಉದುರುತ್ತವೆ" ಹೀಗೆಂದು ಹೇಳಿಕೆ ನೀಡಿದವರು?

A). ಬಾಲಾಜಿ ವಿಶ್ವನಾಥ
B). 1ನೇ ಬಾಜಿರಾಯ
C). ಬಾಲಾಜಿ ಬಾಜಿರಾಯ
D). ಸಾಹು

Correct Ans: (B)
Description:
1ನೇ ಬಾಜಿರಾಯ

ಮೊಗಲ್ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು ಅವನು ಮರಾಠ ಮುಂಖಡರಿಗೆ ಹೀಗೆ ಹೇಳಿದನು. ಇದೀಗ ಹಿಂದೂ ಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದುವಾಗಿದೆ. ಮೊಗಲ ಸಾಮ್ರಾಜ್ಯವನ್ನು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಆದರೆ ಕೂಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ.

31.)
ಹಿಂದೂ ಪಾದ್ ಪಾದ್ ಷಾ ( ಮರಾಠ ಒಕ್ಕೂಟ ) ಪರಿಕಲ್ಪನೆ ಹೊರಡಿಸಿದ ಪೇಶ್ವೆ ಯಾರು?

A). ಬಾಲಾಜಿ ವಿಶ್ವನಾಥ
B). 1 ನೇ ಬಾಜೀರಾಯ
C). ಬಾಲಾಜಿ ಬಾಜೀರಾವ
D). ನಾರಾಯಣರಾವ

Correct Ans: (B)
Description:
1 ನೇ ಬಾಜೀರಾಯ

ಹಿಂದೂ ಷಾದಷಾಹಿ 1 ನೇ ಬಾಜೀರಾಯನು ಹಿಂದೂ ಪಾದ್ ಪಾದ್ ಷಾಹಿ ಅಥವಾ ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಆದರ್ಶವನ್ನು ಭೋದಿಸಿದನು. ಇದೊಂದು ಉತ್ತರ ಭಾರತದಲ್ಲಿ ಸಾಮ್ರಜ್ಯವನ್ನು ವಿಸ್ತರಿಸುವ ಕಲ್ಪನೆ.

32.)
ಈ ಕೆಳಗಿನವುಗಳಲ್ಲಿ ಯಾರು ಸೇನಾಕರ್ತೆ ಎಂಬ ಬಿರುದುಗಳಿಸಿದ್ದವರು?



A). ಬಾಲಾಜಿ ವಿಶ್ವನಾಥ
B). ಬಾಲಾಜಿ ಬಾಜಿರಾವ
C). ಬಾಜಿರಾವ
D). ಬಾಹಿ

Correct Ans: (A)
Description:
ಬಾಲಾಜಿ ವಿಶ್ವನಾಥ

ಬಾಲಾಜಿ ವಿಶ್ವನಾಥನು ಮರಾಠಿ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ. ಅನಂತರ ಧನಾಜಿ ಜಾದವನ ಮಗ ಚಂದ್ರಸೇನ ಜಾದವನ್ ಬಳಿ ಸೇವೆ ಮಾಡಿ "ಸೇನಾಕರ್ತೆ" ಎಂಬ ಬಿರುದು ಪಡೆದನು. 1712 ರಲ್ಲಿ ಸಾಹು ಬಾಲಾಜಿ ವಿಶ್ವನಾಥನನ್ನು ತನ್ನ ಸೇನಾಕರ್ತೆ (ಸೈನೈ ಸಂಘಟಕನಾಗಿ) ನೇಮಿಸಿಕೊಂಡನು.

No comments:

Post a Comment