Monday, 30 January 2017

ಶ್ರೀ ಜ್ಞಾನ

ಜ್ಞಾನ ಸಾಗರ  ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:28/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best


1. ಈ ಕೆಳಕಂಡವರಲ್ಲಿ ಯಾರನ್ನು ಸೇನಾಪಡೆಯ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ?

A. ಬಿ. ಎಸ್. ಧನೋವಾ
B. ಬಿಪಿನ್ ರಾವತ್●●
C. ರಾಜೀವ್ ಜೈನ್
D. ಅನಿಲ್ ಧಸ್ಮಾನಾ

2. ಭಾರತದ ಹೆಮ್ಮೆಯ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಫ್ರಾನ್ಸಿಸ್ ಚೆಕಾ ರನ್ನು ಸೋಲಿಸಿ WBO ಸೂಪರ್ ಮಿಡ್ಲ್ ವೇಟ್ ಏಷ್ಯ ಪೆಸಿಫಿಕ್ ಚಾಂಪಿಯನ್ ಪ್ರಶಸ್ತಿಯನ್ನು ಉಳಿಸಿಕೊಂಡರು. ಅಂದಹಾಗೆ ಫ್ರಾನ್ಸಿಸ್ ಚೆಕಾ ಯಾವ ದೇಶದ ಬಾಕ್ಸರ್?

A. ಚಿಲಿ
B. ಕೆನಡಾ
C. ಮಂಗೋಲಿಯಾ
D. ತಾಂಜಾನಿಯಾ●●

3. ವಿಜೇಂದರ್ ಸಿಂಗ್ ಈವರೆಗೆ ವೃತ್ತಿಪರ ಬಾಕ್ಸಿಂಗ್'ನಲ್ಲಿ ಎಷ್ಟು ಜಯ ಗಳಿಸಿದ ಗೌರವಕ್ಕೆ ಪಾತ್ರರಾದರು?

A. 6ನೇ
B. 7ನೇ
C. 8ನೇ●●
D. 9ನೇ

4. ಮುಂಬೈ ಕ್ರಿಕೆಟ್ ಸಂಸ್ಥೆಯ (MCA) ಅಧ್ಯಕ್ಷ ಸ್ಥಾನಕ್ಕೆ ಕೆಳಕಂಡ ಯಾರು ರಾಜೀನಾಮೆ ನೀಡಿದರು?

A. ವೆಂಗಸರ್'ಕರ್
B. ಸಂದೀಪ್ ಪಾಟೀಲ್
C. ಶರದ್ ಪವಾರ್●●
D. ಮುಕೇಶ್ ಅಂಬಾನಿ

5. ಬಿಸಿಸಿಐನಲ್ಲಿ ಎಷ್ಟು ವರ್ಷ ಮೇಲ್ಪಟ್ಟವರು ಅಧಿಕಾರ ಹೊಂದಿರಬಾರದು ಎಂದು ಲೋಧಾ ಸಮಿತಿ ಶಿಫಾರಸು ಮಾಡಿದೆ?

A. 60ವರ್ಷ
B. 65ವರ್ಷ
C. 70ವರ್ಷ●●
D. 75ವರ್ಷ

6. ಕಾಲೇಜು ಶಿಕ್ಷಣ ಇಲಾಖೆಯ ಎಷ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸ್ವಾಯತ್ತತಾ ಸ್ಥಾನಮಾನವನ್ನು ಪಡೆದಿವೆ ?

A. 10
B. 11●●
C. 12
D. 13

7. ಶೇ.20ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಇದ್ದ ರಾಜ್ಯದ 20 ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಿಂದ ಅನುಷ್ಠಾನಗೊಳಿಸುವ 'ಸಾಕ್ಷರತಾ ಭಾರತ ಕಾರ್ಯಕ್ರಮ'ವು ಯಾವ ವರ್ಷ ಪ್ರಾರಂಭವಾಗಿದೆ?

A. 2009-10
B. 2010-11●●
C. 2011-12
D. 2012-13

8. ಉನ್ನತ ಶಿಕ್ಷಣದ ಕಾರ್ಯನೀತಿಯ ಪ್ರಧಾನ ಉದ್ದೇಶಕ್ಕಾಗಿ ಹಾಗೂ ಉನ್ನತ ಶಿಕ್ಷಣದ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ,  ವಿಶ್ವ ವಿದ್ಯಾಲಯಗಳಿಗೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು ಯಾವ ವರ್ಷ ಸ್ಥಾಪನೆ ಮಾಡಲಾಯಿತು?

A. 2006
B. 2008
C. 2010●●
D. 2012

9. ಕರ್ನಾಟಕದಲ್ಲಿ ಕುಷ್ಠರೋಗ ನಿರ್ಮೂಲನಾ ಗುರಿಯನ್ನು ಯಾವ ವರ್ಷ ಸಾಧಿಸಲಾಯಿತು?

A. 2003ರಲ್ಲಿ
B. 2005ರಲ್ಲಿ ●●
C. 2007ರಲ್ಲಿ
D. 2009ರಲ್ಲಿ

10. ಕರ್ನಾಟಕವು ದೇಶದಲ್ಲಿ ಎಷ್ಟನೇ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ?

A. ಮೊದಲನೇ
B. ಎರಡನೇ ●●
C. ಮೂರನೇ
D. ನಾಲ್ಕನೇ

1. ಭವಿಷ್ಯನಿಧಿ ಬಡ್ಡಿದರವನ್ನು 8.80ರಿಂದ ಎಷ್ಟಕ್ಕೆ ಹೆಚ್ಚಿಸಲಾಯಿತು ಅಥವಾ ಕಡಿಮೆಗೊಳಿಸಲಾಯಿತು?

A. 9%
B. 9.08%
C. 8.65%●●
D. 8.50%

2. ಭಾರತ ತಂಡದ ಉದಯೋನ್ಮುಖ ಆಟಗಾರ ಕರುಣ್ ನಾಯರ್ ಅವರು ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸಿದ ಭಾರತದ ಎಷ್ಟನೇ ಆಟಗಾರ ಎನಿಸಿಕೊಂಡರು?

A. ಮೊದಲನೇ
B. ಎರಡನೇ ●●
C. ಮೂರನೇ
D. ನಾಲ್ಕನೇ

3. ಪ್ರಿಯಾಂಕಾ ಚೋಪ್ರಾ ಅವರು ಯಾವ ರಾಜ್ಯದ ಪ್ರವಾಸೋದ್ಯಮ ರಾಯಭಾರಿಯಾಗಿ ಈಚೆಗೆ ನೇಮಕಗೊಂಡಿದ್ದಾರೆ?

A. ಗುಜರಾತ್
B. ತಮಿಳುನಾಡು
C. ಅಸ್ಸಾಂ ●●
D. ಹಿಮಾಚಲಪ್ರದೇಶ

4. ಯಾವ ದೇಶಕ್ಕೆ ರಷ್ಯದ ರಾಯಭಾರಿಯಾಗಿದ್ದ ಆಂಡ್ರೂ ಕರ್ಲೋನ್ ಅವರನ್ನು ಈಚೆಗೆ  ಹತ್ಯೆಗೈಯಲಾಯಿತು?

A. ಗ್ರೀಸ್
B. ಅಂಕಾರಾ●●
C. ಹಂಗೇರಿ
D. ಇಸ್ರೇಲ್

5. ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ಕೆಳಕಂಡ ಯಾರನ್ನು ನೇಮಕ ಮಾಡಲಾಯಿತು?

A. ಬಿಪಿನ್ ರಾವತ್
B. ಬಿ.ಎಸ್. ಧನೋವಾ●●
C. ಅನಿಲ್ ಧಸ್ಮಾನಾ
D. ರಾಜೀವ್ ಜೈನ್

6. ಭಾರತ ಸರ್ಕಾರ ಗ್ರಾಮೀಣ ಪ್ರದೇಶದವರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡುವ ಉದ್ದೇಶದಿಂದ ಕೆಳಕಂಡ ಯಾವ ವರ್ಷ 'ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ'ವನ್ನು ಆರಂಭಿಸಿತು?

A. 2004
B. 2005●●
C. 2006
D. 2007

7. ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕಾರ್ಯಕ್ರಮದಡಿ ರಾಜ್ಯದಲ್ಲಿ ಯಾವ ವರ್ಷದಿಂದ ನಾಲ್ಕು ಹಂತಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ?

A. 1996
B. 1998●●
C. 2000
D. 2002

8. ಕ್ಷಯ ರೋಗ ನಿರ್ಮೂಲನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನುಕ್ರಮವಾಗಿ ಶೇ. ಎಷ್ಟು ಅನುದಾನವನ್ನು ನೀಡುತ್ತಿವೆ?

A. 50% ಮತ್ತು 50%
B. 75% ಮತ್ತು 25%●●
C. 25% ಮತ್ತು 75%
D. 60% ಮತ್ತು 40%

9. ರಾಷ್ಟ್ರೀಯ ಅಂದತ್ವ ನಿಯಂತ್ರಣಾ ಕಾರ್ಯಕ್ರಮವನ್ನು ಕೆಳಕಂಡ ಯಾವ ವರ್ಷದಿಂದ ಕೇಂದ್ರ ಪುರಸ್ಕೃತ ಯೋಜನೆಯಾಗಿ ಜಾರಿಗೊಳಿಸಲಾಗಿದೆ?

A. 1972
B. 1976●●
C. 1980
D. 1984

10. 2015-16ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಎಷ್ಟು ನೇತ್ರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ?

A. 27
B. 29
C. 37●●
D. 39
ಪಿಡಿಓ

1. ಗ್ರಾಮಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ತಕರಾರು ಅಜಿ೯ಯನ್ನು ಈ ಕೆಳಕಂಡ ಯಾರು ನಿವ೯ಹಿಸುತ್ತಾರೆ?

1. ಜಿಲ್ಲಾಧಿಕಾರಿ
2. ರಾಜ್ಯಚುನಾವಣಾ ಆಯೋಗ
3. ಸಿವಿಲ್ ನ್ಯಾಯಾಧೀಶ(ಕಿರಿಯ)
4. ಸಿವಿಲ್ ನ್ಯಾಯಾಧೀಶ(ಹಿರಿಯ)

ಸರಿ ಉತ್ತರ:3. ಸಿವಿಲ್ ನ್ಯಾಯಾದೀಶ(ಕಿರಿಯ)

2. ಜನವಸತಿ ಸಭೆಯನ್ನು ರಚಿಸಲು ಈ ಕೆಳಕಂಡ ಯಾರು ಅಧಿಸೂಚನೆ ಹೊರಡಿಸುವವರು?

1. ಸಕಾ೯ರ
2. ಜಿಲ್ಲಾಧಿಕಾರಿ
3. ಉಪವಿಭಾಗಾಧಿಕಾರಿ
4. ತಹಸೀಲ್ದಾರ್

ಸರಿ ಉತ್ತರ: 2. ಜಿಲ್ಲಾಧಿಕಾರಿ

3. ವಾಡ್೯ಸಭೆಯ ಅಧ್ಯಕ್ಷತೆ ವಹಿಸುವವರು ಯಾರು?

1. ಗ್ರಾಮಪಂಚಾಯಿತಿ ಅಧ್ಯಕ್ಷ
2. ಗ್ರಾಮಪಂಚಾಯಿತಿ ಸದಸ್ಯ
3. ಗ್ರಾಮಪಂಚಾಯಿತಿ ಉಪಾಧ್ಯಕ್ಷ
4. ವಾಡ್೯ ನ್ನು ಪ್ರತಿನಿಧಿಸುವ ಗ್ರಾಮಪಂಚಾಯಿತಿ ಸದಸ್ಯ

ಸರಿ ಉತ್ತರ: 4. ವಾಡ್೯ನ್ನು ಪ್ರತಿನಿಧಿಸುವ ಗ್ರಾಮಪಂಚಾಯಿತಿ ಸದಸ್ಯ

4. ಗ್ರಾಮಪಂಚಾಯಿತಿಯ ಜಂಟಿ ಸ್ಥಾಯಿ ಸಮಿತಿಯ ಕುರಿತು ಹೇಳುವ ಪ್ರಕರಣ ಯಾವುದು?

1. 61-ಎ
2. 61-ಬಿ
3. 61-ಸಿ
4. 61

ಸರಿ ಉತ್ತರ: 2. 61-ಬಿ

5. ಗ್ರಾಮಪಂಚಾಯಿತಿಯು ಪ್ರತಿವಷ೯ ಶೇಕಡಾ ಎಷ್ಟು ಮನೆಗಳಿಗೆ ಶೌಚಾಲಯ ಒದಗಿಸಬೇಕು?

1. ಶೇ. 10 ರಷ್ಟು
2. ಶೇ. 15 ರಷ್ಟು
3. ಶೇ. 20 ರಷ್ಟು
4. ಶೇ. 25 ರಷ್ಟು

ಸರಿ ಉತ್ತರ: 1. ಶೇ.10 ರಷ್ಟು

6. ಪ್ರತಿಯೊಂದು ಸ್ಥಾಯಿ ಸಮಿತಿಯು ಹೊಂದಿರಬೇಕಾದ ಗರಿಷ್ಠ ಸದಸ್ಯರ ಸಂಖ್ಯೆ ಎಷ್ಟು?

1. ಮೂರು
2. ನಾಲ್ಕು
3. ಐದು
4. ಆರು

ಸರಿ ಉತ್ತರ: 3. ಐದು

7. ಪ್ರತಿ ಗ್ರಾಮಪಂಚಾಯಿತಿಯು ಎಷ್ಟು ಸ್ಥಾಯಿ ಸಮಿತಿಗಳನ್ನು ಹೊಂದಿರುತ್ತದೆ?

1. ಎರಡು
2. ಮೂರು
3. ನಾಲ್ಕು
4. ಐದು

ಸರಿ ಉತ್ತರ: 2. ಮೂರು

8. ಗ್ರಾಮಪಂಚಾಯಿತಿಯು ಈ ಕೆಳಕಂಡ ಯಾವ ಪ್ರಕರಣದಡಿ ಲೈಸನ್ಸ್ ನೀಡುವ ಅಧಿಕಾರ ಹೊಂದಿದೆ?

1. ಪ್ರಕರಣ 67
2. ಪ್ರಕರಣ 68
3. ಪ್ರಕರಣ 69
4. ಪ್ರಕರಣ 70

ಸರಿ ಉತ್ತರ: 3. ಪ್ರಕರಣ 69

9. ಗ್ರಾಮಪಂಚಾಯಿತಿಯ ಮಾಸಿಕ ಲೆಕ್ಕಪತ್ರಗಳನ್ನು ಮುಂಬರುವ ತಿಂಗಳ ಈ ಕೆಳಕಂಡ ಯಾವ ದಿನಾಂಕದೊಳಗಾಗಿ ದ್ವಿತೀಯ ದಜೆ೯ ಲೆಕ್ಕ ಸಹಾಯಕರು ಗ್ರಾಮಪಂಚಾಯಿತಿಗೆ ಸಲ್ಲಿಸಬೇಕು?

1. 10
2. 15
3. 31
4. 8

ಸರಿ ಉತ್ತರ: 1. 10

10. ಗ್ರಾಮಪಂಚಾಯಿತಿಯ ತಾತ್ಕಲಿಕ ನೌಕರರಿಗೆ ಸಂಬಳವನ್ನು ಈ ಕೆಳಕಂಡ ಯಾವುದರಿಂದ ಭರಿಸಲಾಗುತ್ತದೆ?

1. ಜಿಲ್ಲಾ ಪಂಚಾಯಿತಿ ನಿಧಿಯಿಂದ
2. ತಾಲ್ಲೂಕು ಪಂಚಾಯಿತಿ ನಿಧಿಯಿಂದ
3. ಗ್ರಾಮಪಂಚಾಯಿತಿ ನಿಧಿಯಿಂದ
4. ಸಕಾ೯ರದ ಶಾಸನಬದ್ಧ ಅನುದಾನದಿಂದ

ಸರಿ ಉತ್ತರ: 3. ಗ್ರಾಮಪಂಚಾಯಿತಿ ನಿಧಿಯಿಂದ

ಸಾಮಾನ್ಯ ಕನ್ನಡ

1. ದೈವಭಾಷೆ ಎಂಬ ಹೆಗ್ಗಳಿಕೆ ಪಡೆದುಕೊಂಡ ಭಾಷೆ ಯಾವುದು?

1. ತಮಿಳು
2. ಹಿಂದಿ
3. ಕನ್ನಡ
4. ಸಂಸ್ಕೃತಿ

D✅

2. ಕನ್ನಡದ ಐತಿಹಾಸಿಕ ನಾಟಕ ಕಾರ ಯಾರು?

1. ಸಂಸ
2. ದೇವೇಂದ್ರ
3.ಮಲ್ಲಿಕಾರ್ಜುನ
4.ಕುವೆಂಪು

A✅

3. ಕನ್ನಡದ ಪತ್ತೆದಾರಿ ಕಾದಂಬರಿ. ...

1. ಮಿತ್ರಾವಿಂದ ಗೋವಿಂದ
2. ನಳ ಚರಿತ್ರೆ
3. ಪುಸ್ತಕದ ಕಿಟ
4. ಚೋರಗ್ರಹಣ ತಂತ್ರ

D✅

4. ಕನ್ನಡದ ಮೊಟ್ಟ ಮೊದಲ ಜೋತಿಷ್ಯ ಗ್ರಂಥ ಯಾವುದು?

1. ವಡ್ಡರಾಧನೆ
2. ಕೇಂಪು ನಾರಾಯಣ
3. ಜಾತಕ ತಿಲಕ
4.ಗದ್ಯ ಸಾಹಿತ್ಯ

C✅

5. ಕನ್ನಡದ ಸ್ವತಂತ್ರ ಪೌರಾಣಿಕ ನಾಟಕ ಯಾವುದು?

1. ಗಾಳಿ ಗೋಪುರ
2. ಶಂಕ ವಾದ್ಯ
3. ರಂಗನಾಯಕಿ
4. ಪೃಥು ವಿಜಯ

D✅

6.  ಭರತೇಶ ವೈಭವ ಕಾವ್ಯ ಇರುವುದು.............

 1.ವೃತ್ತ
 2.ಕಂದ
 3.ಪ್ರಾಸ
 4.ಸಾಂಗತ್ಯ

D✅

7. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ. .....

1. ಮಹಾಜನ್ ವರದಿ
2. ಗೋಕಾಕ ವರದಿ
3. ಸರೋಜಿನಿ ಮಹಿಷಿ ವರದಿ
4. ಎಚ್.ನರಸಿಂಹಯ್ಯ ವರದಿ

D✅

8. ಜ್ಞಾನ ಗಂಗೋತ್ರಿ ಮಕ್ಕಳ ವಿಶ್ವಕೋಶ ಪ್ರಧಾನ ಸಂಪಾದಕರು?

1. ಕಮಲಾ ಹಂಪನ
2. ಗೀತಾ ನಾಗಭೂಷಣ
3.ನಿರಂಜನ
4.ಕುವೆಂಪು

C✅

9. ಕನ್ನಡ  ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಗ್ರಂಥವನ್ನು ಬರೆದವರು?

1. M.M.ಕಲಬುರಗಿ
2. ಗೋವಿಂದ ಪೈ
3. ಚಿದಾನಂದ ಮೂರ್ತಿ
4. ಶಂಬಾ ಜೋಷಿ

C✅

10. ಅಶ್ವತ್ಥಾಮನ್ ನಾಟಕವನ್ನು ಬರೆದವರು?

1. ಸಂಸ್ಕೃತಿ
2. ಬಿ.ಎಮ್.ಶ್ರೀ
3. ಬಿ.ಪುಟ್ಟಸ್ವಾಮಯ್ಯ
4.ಗೋವಿಂದ ಪೈ

B✅

11. "ಹೊರಮೈ" ಯಾವ ಸಮಾಸ

1. ಗಮಕ ಸಮಾಸ
2.ಅಂಶಿ ಸಮಾಸ
3.ತತ್ಪುರುಷ ಸಮಾಸ
4. ಸಮಾಸ ಅಲ್ಲ

B✅

12. "ಕಾಡುಹಂದಿ " ಎಂಬುದು ಯಾವ ಸಮಾಸ...

1. ಅಂಶಿ ಸಮಾಸ
2.ತತ್ಪುರುಷ ಸಮಾಸ
3.ಗಮಕ ಸಮಾಸ
4. ದ್ವಿಗು ಸಮಾಸ

B✅

13. "ಮೈದಡವಿ" ಯಾವ ಸಮಾಸ.....

1. ಕ್ರಿಯಾ ಸಮಾಸ
2.ದಂದ್ವ ಸಮಾಸ
3. ಅಂಶಿ ಸಮಾಸ
4. ಗಮಕ ಸಮಾಸ

D✅

14. ಎಷ್ಟು ತಿರುಗಿದರು ಸಿಕ್ಕಲಿಲ್ಲ ತಂದೆ.
ಈ ವಾಕ್ಯದಲ್ಲಿ ನಾಮಪದ.....

1. ಎಷ್ಟು
2. ತಂದೆ
3. ತಿರುಗಿದರು
4. ಸಿಕ್ಕಲಿಲ್ಲ

B✅

15. ಅಳಿದ ಮೇಲೆ ಕಾದಂಬರಿ ಕರ್ತೃ ಯಾರು?

1. ಕುವೆಂಪು
2.ಪಂಜೆಮಂಗೇಶರಾವ್
3.ಶಿವರಾಂ ಕಾರಂತ
4. ಕಮಲಾ ಹಂಪನ

C✅

16. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೃತಿ. ....

1. ಚಿತ್ರಾಂಗದಾ
2. ಗುಲಾಬಿ
3. ಕಾಡು
4. ಹಳ್ಳ ಬಂತು ಹಳ್ಳ

D✅

17. ಹೊಸಗನ್ನಡದ ಮೊದಲ ನಾಟಕ. ...

1. ಶ್ಮಶಾನ ಕುರುಕ್ಷೇತ್ರ
2. ಅಶ್ವತ್ಥಾಮನ್
3. ಶಾಕುಂತಲ
4. ಮಿತ್ರವಿಂದ ಗೋವಿಂದ

C✅

18." ಆ ಕಲ್ಲು " ಇದು ಯಾವ ಸಮಾಸ?

1. ಗಮಕ ಸಮಾಸ
2. ಅಂಶಿ ಸಮಾಸ
3.ದ್ವಿಗು ಸಮಾಸ
4. ದಂದ್ವ ಸಮಾಸ

A✅

19. ಮಟ್ಟ ರಗಳೆ ಎಂಬ ಹೆಸರು ಈ ರಗಳೆ  ಪ್ರಭೇದಕ್ಕಿದೆ.

1. ಉತ್ಸಾಹ
2. ಲಲಿತ
3. ಮಂದಾನಿಲ
4. ಸರಳ ರಗಳೆ

C✅

20.ಭಾವಸೂಚಕಾವ್ಯಗಳ ಮುಂದೆ ಸ್ವರ ಬಂದರೆ?

1. ಲೋಪ ಸಂಧಿ
2. ಯಣ್ ಸಂಧಿ
3. ಯಕರಾಗಮ ಸಂಧಿ
4.ಸಂಧಿ ಕಾರ್ಯವಾಗುವದಿಲ್ಲ

D✅

21.ಸತ್ಯಾನಂದ ಇದು ಯಾವ ಸಂಧಿ?

1. ಯಣ್ ಸಂಧಿ
2. ಲೋಪ ಸಂಧಿ
3. ಜಶ್ತ್ವ ಸಂಧಿ
4.ಗುಣ ಸಂಧಿ

C✅

22 "ನಾಲ್ಮೊಗ " ಯಾವ ಸಮಾಸ...

 1.ಕ್ರಿಯಾ ಸಮಾಸ
 2.ತತ್ಪುರುಷ ಸಮಾಸ
 3. ಬಹುವ್ರೀಹಿ ಸಮಾಸ
4. ಅಂಶಿ ಸಮಾಸ

C✅

23. " ಜಗನ್ನಾಥ " ಇದು ಯಾವ ಸಂಧಿ
1. ಯಣ್ ಸಂಧಿ
2. ಜಶ್ತ್ವ ಸಂಧಿ
3.ಅನುನಾಸಿಕ ಸಂಧಿ
4. ವೃದ್ಧಿ ಸಂಧಿ

C✅

24."ಇಲ್ಲ " ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ..

1. ಕ್ರಿಯಾಪದ
2. ಕೃದಂತ ವಿಶೇಷಣ
3. ಅವ್ಯಯ
4. ನಾಮಪದ

C✅

25. ಇದು ಅನ್ಯದೇಶ ಪದ....

1. ಊರು
2. ಹೆಸರು
3. ಜಮೀನು
4. ತೋಟ

C✅

ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.

1) ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಸುಶಿಕ್ಷತರ ಪ್ರಮಾಣ ಎಷ್ಟು ಇತ್ತು?
 * ಶೇ. 12 ರಷ್ಟು.

2) ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದಕ್ಕೆ ------ ಎನ್ನುವರು?
 * ಭ್ರಷ್ಟಾಚಾರ.

3) ಬಡತನ ಎಂದರೇನು?
 * ಜನರು ಸರಿಯಾದ ಆಹಾರ, ಬಟ್ಟೆ, ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದದೆ ಪಡುವ ಕಷ್ಟವೇ ಬಡತನ.

4) ಬಿ ಪಿ ಎಲ್ ವಿವರಿಸಿರಿ?
 * ಬಿಲೋ ಪಾವರ್ಟಿ ಲೈನ್.

5) ಜನಸಾಮಾನ್ಯರ ಅಥವಾ ಬಳಕೆದಾರರಿಂದ ಅತ್ಯಂತ ಹೆಚ್ಚಿನ ಲಾಭಗಳಿಸುವ ಧೋರಣೆಯನ್ನು ----- ಎನ್ನುವರು.
 * ಲಾಭ ಬಡುಕುತನ ಅಥವಾ ಲಾಭ ಕೋರತನ.

6) ವಿದೇಶಾಂಗ ನೀತಿಯ ರೂಪುರೇಶಗಳ ಬಗ್ಗೆ ರೇಡಿಯೋ ಭಾಷಣದಲ್ಲಿ ಅರಿವು ಮೂಡಿಸಿದವರು ಯಾರು?
 * ಜವಾಹರ್ ಲಾಲ್ ನೆಹರು.

7) ವಿದೇಶಾಂಗ ನೀತಿಯ ರೂಪುರೇಶಗಳ ಬಗ್ಗೆ ನೆಹರು ರೇಡಿಯೋ ಭಾಷಣದಲ್ಲಿ ಅರಿವು ಮೂಡಿಸಿದ್ದು ಯಾವಾಗ?
 * 1946 ಸೆಪ್ಟೆಂಬರ್ 7.

8) ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡ ಎರಡು ರಾಷ್ಟ್ರಗಳು ಯಾವು?
 * ಭಾರತ ಮತ್ತು ಚೀನಾ.

9) ಭಾರತ ಮತ್ತು ಚೀನಾ ಪಂಚಶೀಲ ತತ್ವ ಅಳವಡಿಸಿಕೊಂಡದ್ದು ಯಾವಾಗ?
 * 1954 ಜೂನ್ ನಲ್ಲಿ.

10) "ಆಫ್ರಿಕಾದ ಗಾಂಧಿ" ಎಂದೇ ಪ್ರಸಿದ್ಧರಾದವರು ಯಾರು?
 * ನೆಲ್ಸನ್ ಮಂಡೇಲಾ.

11) ಭಾರತ ಮತ್ತು ಪಾಕಿಸ್ತಾನಗಳ ನಡುವೆ ಎಷ್ಟು ಬಾರಿ ಯುದ್ದಗಳಾಗಿವೆ?
 * 4 ಬಾರಿ.

12) 1999 ರಲ್ಲಿ ಯಾವ ಯುದ್ಧ ನಡೆಯಿತು?
 * ಕಾರ್ಗಿಲ್ ಯುದ್ಧ.

13) ಸುಮಾರು ಮೂರನೇ ಒಂದಂಶದಷ್ಟು ಕಾಶ್ಮೀರದ ಭೂಭಾಗ ಈಗಲೂ ಯಾವ ರಾಷ್ಟ್ರದ ಸ್ವಾಧೀನದಲ್ಲಿದೆ?
 * ಪಾಕಿಸ್ತಾನ.

14) ನಮ್ಮ ದೇಶದ ಉತ್ತರದಲ್ಲಿರುವ ಬೃಹತ್ ರಾಷ್ಟ್ರ ಯಾವುದು?
 * ಚೀನಾ.

15) ಭಾರತಕ್ಕೆ ಭೌಗೋಳಿಕವಾಗಿ ಸಮೀಪದಲ್ಲಿರುವ ರಾಷ್ಟ್ರ ಯಾವುದು?
 * ನೇಪಾಳ.

16) 1971 ರಲ್ಲಿ ಬಾಂಗ್ಲಾದೇಶದ ನಿರ್ಮಾಣದಲ್ಲಿ ಯಾವ ರಾಷ್ಟ್ರ ಪ್ರದಾನ ಪಾತ್ರ ವಹಿಸಿತು?
 * ಭಾರತ.

17) ಬಾಂಗ್ಲಾದೇಶ ನಮ್ಮ ದೇಶದ ಯಾವ ಭಾಗದಲ್ಲಿದೆ?
 * ಪೂರ್ವ.

18) ಭಾರತ ಆಲಿಪ್ತ ನೀತಿಯನ್ನು ಅನುಸರಿಸಿದ್ದು ಯಾವಾಗ?
 * ಜಗತ್ತು ರಾಜಕೀಯ ದ್ರುವೀಕರಣವನ್ನು ಕಂಡಾಗ.

19) ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಯಾವ ರಾಷ್ಟ್ರದ ಎರಡು ಪಕ್ಷಗಳು?
 * ಅಮೇರಿಕಾ.

20) ತಾಷ್ಕೆಂಟ್ ಒಪ್ಪಂದವಾದದ್ದು ಯಾವಾಗ?
 * 1966 ರಲ್ಲಿ.

21) ತಾಷ್ಕೆಂಟ್ ಒಪ್ಪಂದವಾದದ್ದು ಯಾವ ಎರಡು ರಾಷ್ಟ್ರಗಳ ನಡುವೆ?
 * ಭಾರತ ಮತ್ತು ಪಾಕಿಸ್ತಾನ.

22) ವಿಶ್ವಸಂಸ್ಥೆಯು ಆರಂಭವಾದದ್ದು ಯಾವಾಗ?
 * 1945, ಅಕ್ಟೋಬರ್ 24.

23) ವಿಶ್ವಸಂಸ್ಥೆಯ ಮತ್ತೊಂದು ಹೆಸರೇನು?
 * ಸಂಯುಕ್ತ ರಾಷ್ಟ್ರ ಸಂಘ.

By RBS

24) 1789 : ಫ್ರಾನ್ಸ್ ಕ್ರಾಂತಿ :: 1776 : --------.
 * ಅಮೇರಿಕಾದ ಸ್ವಾತಂತ್ರ್ಯ ಯುದ್ಧ.

25) ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆ ಮಾಡಿದ್ದು ಯಾವಾಗ?
 * 1948, ಡಿಸೆಂಬರ್ 10.

26) ಅಮೇರಿಕಾದ ವಿಶ್ವ ವ್ಯಾಪಾರ ಕೇಂದ್ರ ದ್ವಂಸವಾದದ್ದು ಯಾವಾಗ?
 * 2001 ರಲ್ಲಿ.

27) ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿಯಾದದ್ದು ಯಾವಾಗ?
 * 2007, ನವೆಂಬರ್ 26.

28) ದ್ವಿತೀಯ ಮಹಾಯುಧ್ಧ ಪ್ರಾರಂಭವಾದದ್ದು ಯಾವಾಗ?
 * 1939 ರಲ್ಲಿ.

29) ವಿಶ್ವಸಂಸ್ಥೆಯ ಪ್ರಸ್ತಾವನೆಯು ಪ್ರಾರಂಭಗೊಳ್ಳುವುದು ----- ಎಂಬ ವಾಕ್ಯದಿಂದ.
 * ವಿಶ್ವದ ಜನಸಮುದಾಯವೆನಿಸಿದ ನಾವು .....

30) ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಎಷ್ಟು?
 * 6.

31) ಆರ್ಥಿಕ ಮತ್ತು ಸಾಮಾಜಿಕ ಸಮಿತಿಯಲ್ಲಿ ಎಷ್ಟು ಸದಸ್ಯರಿದ್ದಾರೆ?
 * 54.

32) ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಎಷ್ಟು ಮಂದಿ ನ್ಯಾಯಾಧೀಶರಿದ್ದಾರೆ?
 * 15.

33) ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರದ ಅವಧಿ ತಿಳಿಸಿ?
 * 9 ವರ್ಷ.

34) ಬಾನ್ ಕಿ ಮೂನ್ : ಕೋರಿಯಾ :: ಕೋಫೀ ಎ ಅನ್ನಾನ್ : ------.
 * ಘಾನಾ.

35) ಯುನೇಸ್ಕೋ ಕೇಂದ್ರ ಕಚೇರಿ ಎಲ್ಲಿದೆ?
 * ಪ್ಯಾರಿಸ್.

36) ದ್ವಿತೀಯ ಮಹಾಯುಧ್ಧದ ಬಳಿಕ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ 1946 ರಲ್ಲಿ ಸ್ಥಾಪನೆಯಾದ ಸಂಸ್ಥೆ ಯಾವುದು?
 * ಯುನಿಸೆಫ್.

37) ಐ ಎಂ ಎಫ್ ಮುಖ್ಯ ಕಛೇರಿ ಎಲ್ಲಿದೆ?
 * ಅಮೇರಿಕಾದ ವಾಷಿಂಗ್ಟನ್ ಡಿ ಸಿ.

38) ಐ ಎಂ ಎಫ಼್ ಆರಂಭಗೊಂಡದ್ದು ಯಾವಾಗ?
 * 1945 ರಲ್ಲಿ.

39) ಐ ಎಂ ಎಫ಼್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದು ಯಾವಾಗ?
 * 1947 ರ ಬಳಿಕ.

40) ಐ ಬಿ ಆರ್ ಡಿ ಮುಖ್ಯ ಕಛೇರಿ ಎಲ್ಲಿದೆ?
 * ವಾಷಿಂಗ್ಟನ್ ನಲ್ಲಿದೆ.

41) ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡ ಸಂಸ್ಥೆ ಯಾವುದು?
 * ಅಂತರರಾಷ್ಟ್ರೀಯ ಕಾರ್ಮಿಕ ಸಂಘ.

42) ವಿಶ್ವ ವ್ಯಾಪಾರ ಸಂಘ ಹುಟ್ಟಿಕೊಂಡಿದ್ದು ಯಾವಾಗ?
 * 1995 ಜನವರಿ 1.

43) ಕಾಮನ್ ವೆಲ್ತ್ ರಾಷ್ಟ್ರ ಸಂಘ ವನ್ನು ಈ ಹಿಂದೆ ----- ಎಂದು ಕರೆಯುತ್ತಿದ್ದರು.
 * ಬ್ರಿಟಿಷ್ ಕಾಮನ್ ವೆಲ್ತ್ ಆಫ್ ನೇಷನ್ಸ್.

44) ಸಾರ್ಕನ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
 * 8.

45) ಯುರೋಪಿಯನ್ ಯೂನಿಯನ್ ಎಷ್ಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ?
 * 27. ಪ್ರಸ್ತುತ (27 + 1)

46) ಆಸಿಯನ್ ಸಂಸ್ಥೆಯಲ್ಲಿ ಎಷ್ಟು ರಾಷ್ಟ್ರಗಳು ಸದಸ್ಯತ್ವ ಹೊಂದಿವೆ.
 * 10.

ಸಂಗ್ರಹ :- ದ್ವಿತೀಯ ಪಿಯುಸಿ ಇತಿಹಾಸ.

1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
 * ಪಾಣಿನಿ.

2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
 * ಅಂಗ ಮತ್ತು ಉಪಾಂಗ.

3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್ಲಿದೆ?
 * ತಮಿಳು.

4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
 * ಶಿಲಪ್ಪಾದಿಗಾರಂ.

5) ನಾಣ್ಯಶಾಸ್ತ್ರ ಎಂದರೆ ......
 * ನಾಣ್ಯಗಳ ಅಧ್ಯಯನ.

6) ಶಾಸನಗಳ ಅಧ್ಯಯನವೇ ....        * ಶಾಸನಶಾಸ್ತ್ರ.

7) ರವಿಕಿರ್ತಿ ರಚಿಸಿದ ಶಾಸನ ಯಾವುದು?
 * ಐಹೊಳೆ ಶಾಸನ.

8) ಬಾರ್ಬೋಸಾ ಯಾವ ದೇಶದವನು?
 * ಪ್ರೋರ್ಚಗಲ್.

9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
 * ಟಾಲಮಿ.

10) ಪ್ಯಾಲಿಯೋಲಿಥಿಕ್ ಏಜ್ ಎಂದರೆ .........
 * ಹಳೆಯ ಶಿಲಾಯುಗ.

11) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
 * ಸಿಂಧೀ.

12) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
 * ಉತ್ತರಪ್ರದೇಶ.

13) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
 * ಸ್ವಾಮಿ ದಯಾನಂದ ಸರಸ್ವತಿ.

14) ವಿದ್ ಎಂದರೆ .....
 * ಜ್ಞಾನ ಎಂದರ್ಥ.

15) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
 * ಹಳ್ಳಿಗಳಲ್ಲಿ.

16) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
 * ಸ್ವಸ್ತಿಕ್.

17) ಆಸ್ತೆಯ ಎಂದರೆ .......
 * ಕಳ್ಳತನ ಮಾಡದಿರುವುದು.

18) ಬೌದ್ಧ ಧರ್ಮದ ಸ್ಥಾಪಕ ಯಾರು?
 * ಗೌತಮ ಬುದ್ಧ.

19) ದಿಗಂಬರರು ಎಂದರೆ ಯಾರು?
 * ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು).

20) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
 * ಎಡ್ವಿನ್ ಅರ್ನಾಲ್ಡ್.

21) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
 * ಪಾಟಲೀಪುತ್ರ.

22) ದೀಪವಂಶ ಮತ್ತು ಮಹಾವಂಶ ಎನ್ನುವವು .....
 * ಸಿಲೋನಿನ ಕೃತಿಗಳು.

23) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
 * ಚಿತ್ರದುರ್ಗ.

By RBS

24) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
 * ಗ್ರೀಕ್.

25) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
 * ಹಾಲ.

26) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
 * ಪ್ರಾಕೃತ.

27) ಹಾಲ ಶಾತವಾಹನರ ಎಷ್ಟನೇ ದೊರೆ?
 * 17 ನೇ.

28) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
 * ಕಾನಿಷ್ಕ.

29) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
 * ಪುರುಷಪುರ.

30) ಪುರುಷಪುರದ ಇಂದಿನ ಹೆಸರೇನು?
 * ಪೇಷಾವರ.

31) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
 * ಆಪ್ಘಾನಿಸ್ತಾನ.

32) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
 * ವಿಶಾಖದತ್ತ.

33) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
 * ಗುಪ್ತ.

34) ಸಮುದ್ರಗುಪ್ತನ ದಂಡನಾಯಕ ಯಾರು?
 * ಹರಿಸೇನ.

35) ಹರಿಸೇನ ಯಾರ ಆಸ್ಥಾನದ ಕವಿ?
 * ಸಮುದ್ರಗುಪ್ತ.

36) ಅಸ್ಸಾಂನ ಹಳೆಯ ಹೆಸರೇನು?
 * ಕಾಮರೂಪ.

37) ಫಾಹಿಯಾನ ಒಬ್ಬ ------ ಯಾತ್ರಿಕ.
 * ಚೀನಾ.

38) ಅಮರಕೋಶ ಕೃತಿಯ ಕರ್ತೃ ಯಾರು?
 * ಅಮರಸಿಂಹ.

39) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
 * ಸಂಘಂ ಸಾಹಿತ್ಯ.

40) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
 * ಸಾ.ಶ. 949 ರಲ್ಲಿ.

41) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
 * ಚೋಳರು ಮತ್ತು ರಾಷ್ಟ್ರಕೂಟರು.

42) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
 * ತಂಜಾವೂರಿನಲ್ಲಿದೆ.

43) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
 * ಬೃಹದೇಶ್ವರ.

44) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
 * ಒಂದನೇ ರಾಜರಾಜಚೋಳ.

45) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
 * ಸಾ.ಶ. 1009 ರಲ್ಲಿ.

ಭಾರತದ_ ಅರ್ಥ ವ್ಯವಸ್ಥೆ
1) ಹಸಿರು ಕ್ರಾಂತಿ ಹೆಚ್ಚು ಫಲಕಾರಿಯಾಗಿರುವ ರಾಜ್ಯ ಯಾವುದು? * ಪಂಜಾಬ್.
2) ನೆಪಾ ನಗರ (ಎಂ.ಪಿ) ಯಾವುದಕ್ಕೆ ಪ್ರಸಿದ್ಧವಾಗಿದೆ?* ಕಾಗದ ಕಾರ್ಖಾನೆಗಳಿಗೆ.
3) ಜನಸಂಖ್ಯಾ ವಿಂಗಡಣೆಯ ವರ್ಷ ಯಾವುದು? * 1921.
4) ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮೊದಲ ಕಾಯ್ದೆ ಜಾರಿಗೆ ಬಂದದ್ದು ಎಲ್ಲಿ? * ಮದ್ರಾಸ್.
5) ಗಣಿಗಾರಿಕೆ ಯಾವ ವಲಯಕ್ಕೆ ಸೇರಿದೆ? * ಪ್ರಾಥಮಿಕ.
6) ಷೇರು ಹಗರಣವನ್ನು ತನಿಖೆ ಮಾಡಲು 1992 ರಲ್ಲಿ ರಚಿಸಲಾದ ಸಂಯುಕ್ತ ಸಂಸದೀಯ ಸಮಿತಿಯ ಅಧ್ಯಕ್ಷ ಯಾರು? * ರಾಮ್ ನಿವಾಸ್ ಮಿರ್ದಾ.
7) "ಗ್ಯಾಟ್" ಆರಂಭವಾದ ವರ್ಷ ಯಾವುದು? * 1947.
8) ONGC ಮುಖ್ಯ ಕಚೇರಿ ಎಲ್ಲಿದೆ? * ಡೆಹ್ರಾಡೂನ್.
9) ಭಾರತದ ಮೊದಲ ಪೆಟ್ರೋಲಿಯಂ ಶುದ್ಧಿಕರಣ ಕೇಂದ್ರ ಎಲ್ಲಿ ಆರಂಭವಾಯಿತು? * ದಿಗ್ಬಾಯ್ (ಅಸ್ಸಾಂ).
10) ಭಾರತದ ಮೊದಲ ಸಹಕಾರಿ ಬ್ಯಾಂಕ್ ಯಾವುದು? * ಪಿ ಎನ್ ಬಿ.
11) ಬ್ಯಾಂಕ್ ದರವನ್ನು ನಿರ್ಧರಿಸುವುದು ---? * ಆರ್.ಬಿ.ಐ.
12) ಅರ್ಥಶಾಸ್ತ್ರದಲ್ಲಿ ಭೂಮಿಯ ಅರ್ಥವೇನು? * ನೈಸರ್ಗಿಕ ವಲಯ.
13) ಆಯವ್ಯಯ ಕುರಿತು ಸಂವಿಧಾನದಲ್ಲಿ ಪ್ರಸ್ತಾಪವಾಗಿರುವ ಅನುಚ್ಛೇದ ಯಾವುದು? * 112.
14) "ಭಾರತದ ಆಹಾರ ನಿಗಮ" ಸ್ಥಾಪನೆಯಾದದ್ದು ಯಾವಾಗ? * 1965 ಜನವರಿ 1.
15) "ಷಹಾ ಆಯೋಗ" ಯಾವುದಕ್ಕೆ ಸಂಬಂಧಿಸಿದೆ? * ಕಪ್ಪುಹಣ್ಣಕ್ಕೆ.
16) "ಸೇಲಂ" ಯಾವುದಕ್ಕೆ ಪ್ರಸಿದ್ಧಿ? * ಕಲೆ ರಹಿತ ಉಕ್ಕು.
17) ಯೋಜನಾ ರಜೆ ಯಾವ ಎರಡು ಪಂಚವಾರ್ಷಿಕ ಯೋಜನೆಗಳ ಮಧ್ಯ ನಿರ್ಮಾಣವಾಗಿತ್ತು?* 3 & 4.
18) "ಮಾರಾಟ ತೆರಿಗೆ"ಯು ಯಾವ ತೆರಿಗೆಯಾಗಿದೆ? * ಪರೋಕ್ಷ.
19) ಬ್ಯಾಂಕರ್ ಗಳ ಬ್ಯಾಂಕ್ ಯಾವುದು? * ಆರ್ ಬಿ ಐ.
20) "ರಾಜಾ ಚೆಲ್ಲಯ್ಯ ಸಮಿತಿ" ಯಾವುದಕ್ಕೆ ಸಂಬಂಧಿಸಿದೆ?* ತೆರಿಗೆ ರಚನೆ.
21) ಮೊದಲ ಪಂಚವಾರ್ಷಿಕ ಯೋಜನೆಯ ಒಟ್ಟು ವೆಚ್ಚವೆಷ್ಟು? * 1960 ಕೋಟಿ.
22) ಭಾರತದಲ್ಲಿ ರಾಜ್ಯ ಸರ್ಕಾರಗಳ ಪ್ರಮುಖ ಆದಾಯದ ಮೂಲ ಯಾವುದು? * ಮಾರಾಟ ತೆರಿಗೆ.
23) "ನಬಾರ್ಡ್" ಯಾವುದಕ್ಕೆ ಸಂಬಂಧಿಸಿದ ಬ್ಯಾಂಕ್? * ಕೃಷಿ & ಅಭಿವೃದ್ಧಿ.
24) "ನಬಾರ್ಡ್" ಸ್ಥಾಪನೆಯಾದದ್ದು ಯಾವಾಗ? * 1982, ಜುಲೈ 12.
25) "ಮಲ್ಹೋತ್ರಾ ಸಮಿತಿ" ಯಾವುದಕ್ಕೆ ಸಂಬಂದಿಸಿದೆ? * ವಿಮಾ ಕ್ಷೇತ್ರಕ್ಕೆ.
26) ಯೋಜನಾ ಆಯೋಗ ಆರಂಭವಾದ ವರ್ಷ ಯಾವುದು? * 1950.
27) ವಿಶ್ವಬ್ಯಾಂಕ್ ನ ಮುಖ್ಯ ಕಚೇರಿ ಎಲ್ಲಿದೆ? * ವಾಷಿಂಗ್ಟನ್.
28) ಐ ಡಿ ಬಿ ಐ ಯು ಒಂದು ಯಾವ ಬ್ಯಾಂಕಾಗಿದೆ? * ಕೈಗಾರಿಕಾ.
29) "ರಿಸರ್ವ್ ಬ್ಯಾಂಕ್" ನ ಮುಖ್ಯ ಕಚೇರಿ ಎಲ್ಲಿದೆ? * ಮುಂಬೈ.
30) "ಒಬ್ರಾ" ಯಾವುದಕ್ಕೆ ಪ್ರಸಿದ್ಧಿ? * ಶಾಖೋತ್ಪನ್ನ ಸ್ಥಾವರಕ್ಕೆ.
31) ಭಾರತದಲ್ಲಿ ಕೃಷಿ ಆಧಾರಿತ ಅತಿ ದೊಡ್ಡ ಕೈಗಾರಿಕೆ ಯಾವುದು? * ಜವಳಿ.
32) ನಾರಿನ ಕೈಗಾರಿಕೆಗೆ ಸೀಮಿತವಾದ ರಾಜ್ಯ ಯಾವುದು? * ಕೇರಳ.
33) "ಗರೀಬಿ ಹಟಾವೋ" ಇದು ಯಾವ ಚುನಾವಣೆಯಲ್ಲಿ ಮುಖ್ಯ ಘೋಷಣೆಯಾಗಿತ್ತು? * 1971.
34) ಬಡತನದ ಮೇಲೆ ಪ್ರಥಮವಾಗಿ ಬೆಳಕು ಚೆಲ್ಲಿದ ಪಂಚವಾರ್ಷಿಕ ಯೋಜನೆ ಯಾವುದು? * ಮೊದಲನೆಯದು. (ಇದು 5 ನೇ ಯದು ಎಂಬ ಗೊಂದಲವಿದೆ).
35) ಯಾವ ಬೆಳೆಯಲ್ಲಿ ಹಸಿರು ಕ್ರಾಂತಿ ಹೆಚ್ಚು ಫಲಕಾರಿಯಾಗಿದೆ? * ಗೋಧಿ.
36) ಯಾವ ಕೈಗಾರಿಕೆಯಲ್ಲಿ ಮ್ಯಾಂಗನೀಸ್ ಬಳಸಲಾಗುತ್ತದೆ? * ಕಬ್ಬಿಣ ಮತ್ತು ಉಕ್ಕು.
37) ಮೂಲತಃ ಕೃಷಿಗಾಗಿ ಅಭಿವೃದ್ಧಿಪಡಿಸಿದ ಬೈಜಿಕ ಶಕ್ತಿ ಯೋಜನೆ ಯಾವುದು? * ನರೋರ.
38) ಅಗ್ಗದ ಸಾರಿಗೆ ವಿಧಾನ ಯಾವುದು? * ಸಮುದ್ರ ಸಾರಿಗೆ.
39) ವಿದೇಶಿ ವ್ಯಾಪಾರ ಯಾವ ವಲಯದಲ್ಲಿ ಬರುತ್ತದೆ? * ಸೇವಾ ವಲಯ.
40) "ಸಕ್ಕರೆ" ಯಾವ ಆಧಾರಿತ ಕೈಗಾರಿಕೆಯಾಗಿದೆ? * ಕೃಷಿ ಆಧಾರಿತ.
41) ಸ್ವಾತಂತ್ರ್ಯ ನಂತರ 2011 ರಲ್ಲಿ ಕೈಗೊಂಡ ಜನಗಣತಿ ಎಷ್ಟನೇಯದು? * 7 ನೇಯದು.
42) ಭಾರತದಲ್ಲಿ ಬ್ರಾಡ್ ಗೇಜ್ ನ ಅಗಲವೆಷ್ಟು? * 1.69 ಮೀಟರ್.
43) ಮುಖ್ಯವಾದ ಖಾರೀಫ್ ಬೆಳೆ ಯಾವುದು? * ಭತ್ತ.
44) ಮುಖ್ಯವಾದ ರಬೀ ಬೆಳೆ ಯಾವುದು? * ಗೋಧಿ.
45) ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಕಟ್ಪಡ ಇರುವ ರಸ್ತೆಯ ಹೆಸರೇನು? * ದಲಾಲ್ ರಸ್ತೆ.
46) "ಮೊದಲು ರೊಟ್ಟಿ, ನಂತರ ಊಟ" ಇದು ಯಾವ ಪಂಚವಾರ್ಷಿಕ ಯೋಜನೆಯ ತತ್ವವಾಗಿತ್ತು? * 2 ನೇ.
47) ಆರ್ಥಿಕ ತುಷ್ಟಿಗುಣ ಎಂದರೆ? * ಬಯಕೆಗಳನ್ನು ತೃಪ್ತಿ ಪಡಿಸುವ ಶಕ್ತಿ.
48) ವ್ಯಾಪಾರ ಶಿಲ್ಕು ಎಂದರೆ? * ಒಂದೇ ದೇಶದ ರಪ್ತು & ಆಮದುಗಳ ಶಿಲ್ಕು.
49) ಭಾರತದಲ್ಲಿ ವಿದ್ಯುಚ್ಛಕ್ತಿಯ ಮೂಲ ಯಾವುದು? * ಕಲ್ಲಿದ್ದಲು.
50) "ಕೆಟ್ಟ ಹಣ ಒಳ್ಳೆಯ ಹಣವನ್ನು ಚಲಾವಣೆಯಿಂದ ಹೊರದೂಡುತ್ತದೆ"- ಇದು ಯಾರ ನಿಯಮವಾಗಿದೆ?* ಗ್ರೆಷಮ್.
51) ಭಾರತದಲ್ಲಿ ಕೃಷಿಯಾಧರಿತ ಎರಡನೇ ಅತಿದೊಡ್ಡ ಕೈಗಾರಿಕೆ ಯಾವುದು? * ಸಕ್ಕರೆ.
52) ಕಪ್ಪುಹಣ ಎಂದರೆ? * ಲೆಕ್ಕ ಇಡದ ಹಣ.

ವಿಷಯ:- ಪಂಚಾಯತ ರಾಜ್ (ಪಿ.ಡಿ.ಒ.)

1)ಸುವರ್ಣ ಗ್ರಾಮೋದಯದ ಮೂಲಕ ಅಭಿವೃದ್ಧಿ ತಂತ್ರೋಪಾಯವು

a) ಸ್ಥಳೀಯ ಸರಕಾರವನ್ನು ಒಳಗೊಳ್ಳುವುದಾಗಿದೆ.
b) ಖಾಸಾಗಿಯವರನ್ನು ಒಳಗೊಳ್ಳುವುದಾಗಿದೆ
c) ಎನ್.ಜಿ.ಓ ಗಳನ್ನು ಒಳಗೊಳ್ಳುವುದಾಗಿದೆ
d) ಮೇಲಿನ ಎಲ್ಲರನ್ನೂ ಒಳಗೊಳ್ಳುವುದಾಗಿದೆ

D ಮೇಲಿನ ಎಲ್ಲರನ್ನೂ ಒಳಗೊಳ್ಳುವುದಾಗಿದೆ ✅💐

2) ಒಂದು ಕಾಮಗಾರಿಯು ಅಂದಾಜು ವೆಚ್ಚವು 10 ಲಕ್ಷಕ್ಕಿಂತ ಮೀರಿದಲ್ಲಿ ಯಾರು ತಾಂತ್ರಿಕ ಒಪ್ಪಿಗೆ ಮಂಜೂರಾತಿ ನೀಡುವರು

a) ಕಾರ್ಯನಿರ್ವಾಹಕ ಇಂಜಿನಿಯರ್
b) ಗ್ರಾಮ ಪಂಚಾಯಿತ್ ಇಂಜಿನಿಯರ್
c) ಸೂಪರಿಟೆಂಡೆಂಟ್ ಇಂಜಿನಿಯರ್, ಪಂಚಾಯತ್ ಇಂಜಿನಿಯರ್ ವಿಭಾಗ
d) ಪಂಚಾಯತ್ ರಾಜ್ ವೃತ್ತದ ಅಧೀಕ್ಷಕ ಅಭಿಯಂತರರು

D ಪಂಚಾಯತ್ ರಾಜ್ ವೃತ್ತದ ಅಧೀಕ್ಷಕ ಅಭಿಯಂತರರು
 ✅✅🌺

 3.ಇನ್ನೊಂದು ತಾಲ್ಲೂಕು / ಜಿಲ್ಲಾ ಪಂಚಾಯಿತಿಗೆ ವರ್ಗಾವಣೆಯಾದಾಗ ಹಬ್ಬದ  ಮುಂಗಡದ ಬಗ್ಗೆ ಯಾರು ಗಮನ ಹರಿಸಬೇಕು?
a) ಕಾರ್ಯನಿರ್ವಹಣಾಧಿಕಾರಿ
b) ಮುಖ್ಯ ಲೆಕ್ಕಾಧಿಕಾರಿ
c) ಲೆಕ್ಕ ಅಧೀಕ್ಷಕರು
d) ನಗದು ಗುಮಾಸ್ತರು
 C  ಲೆಕ್ಕ ಅಧೀಕ್ಷಕರು ✅✅

 4.ಅಧ್ಯಕ್ಷನು ಒಟ್ಟು ಸದಸ್ಯರ ಅರ್ಧದಷ್ಟು ಸದಸ್ಯರು ಲಿಖಿತದಲ್ಲಿ ಕೋರಿದಾಗ ಎಷ್ಟು ದಿನದೊಳಗೆ ವಿಶೇಷ ಸಭೆಯನ್ನು ನಡೆಸಬೇಕು?

a) 7
b) 10
c) 15
d) 30

c) 15✅✅🌺

 5.1983ರ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಯಾವ ಪಂಚಾಯಿತಿಗೆ ಚುನಾವಣೆ ನಡೆಯುವುದಿಲ್ಲ?

a) ತಾಲ್ಲೂಕು ಪಂಚಾಯಿತಿ
b) ಜಿಲ್ಲಾ ಪಂಚಾಯಿತಿ
c) ಮಂಡಲ್ ಪಂಚಾಯಿತಿ
d) ಮೇಲಿನ ಎಲ್ಲದಕ್ಕೂ

a) ತಾಲ್ಲೂಕು ಪಂಚಾಯಿತಿ✅🌺✅

 6.ಸರ್ಕಾರವು ಕೆಳಗಿನವುಗಳಲ್ಲಿ ಯಾವುದನ್ನು ಗ್ರಾಮಪಂಚಾಯಿತಿಗೆ ವರ್ಗಾಯಿಸಬಹುದು?

a) ಗ್ರಾಮದ ಆಸ್ಪತ್ರೆ
b) ಗ್ರಾಮದ ದೇವಸ್ಥಾನ
c) ಗ್ರಾಮದ ವ್ಯಾಪ್ತಿಯ ಅರಣ್ಯ ನಿರ್ವಹಣೆ
d) ಯಾವುದು ಅಲ್ಲ

c) ಗ್ರಾಮದ ವ್ಯಾಪ್ತಿಯ ಅರಣ್ಯ ನಿರ್ವಹಣೆ ✅✅🌺

 7.ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ರಾಜೀನಾಮೆಯನ್ನು ಯಾರಿಗೆ ನೀಡುತ್ತಾರೆ?
a) ರಾಜ್ಯಪಾಲರಿಗೆ
b) ಮುಖ್ಯಮಂತ್ರಿ
c) ಹಣಕಾಸು ಇಲಾಖೆಯ ಕಾರ್ಯದರ್ಶಿ
d) ಜಿಲ್ಲಾಧಿಕಾರಿ

c) ಹಣಕಾಸು ಇಲಾಖೆಯ ಕಾರ್ಯದರ್ಶಿ✅✅✅

 8.ತಾಲ್ಲೂಕು ಪಂಚಾಯಿತಿಯ ಪ್ರತಿ ವಿಕೋಪಗಳಿಗೆ ತುತ್ತಾದವರಿಗೆ ಎಷ್ಟು ಹಣವನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿದ್ದಾರೆ?

a) ಒಂದು ಲಕ್ಷ
b) 50 ಸಾವಿರ
c) 25 ಸಾವಿರ
d) 10 ಸಾವಿರ

c) 25 ಸಾವಿರ💐✅✅

 9. ಜಿಲ್ಲಾ  ಪಂಚಾಯತಿಯ ಮತದಾರರ ಪಟ್ಟಿಯನ್ನು ಯಾರು  ತಯಾರಿಸುತ್ತಾರೆ ?

a) ರಾಜ್ಯ ಚುನಾವಣಾ ಆಯೋಗ
b) ಜಿಲ್ಲಾಧಿಕಾರಿ
c) ಅಸಿಸ್ಟೆಂಟ ಕಮಿಷನರ
d) ಸರ್ಕಾರ

c) ಅಸಿಸ್ಟೆಂಟ ಕಮಿಷನರ✅✅✅
(ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ ಕ್ಕೋಳಪಟು)

 10.ಕೆಳಗಿನ ಯಾವ ವಾಹನಗಳಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ವಿಧಿಸಲು, ವಿನಾಯಿತಿ ಇಲ್ಲ?

a) ಕೇಂದ್ರ, ರಾಜ್ಯ ಸರ್ಕಾರದ ವಾಹನಗಳು
b) ಡೀಲರುಗಳು ಉಪಡೀಲರುಗಳ ಮಾರಾಟಾರ್ಹ ವಾಹನಗಳು
c) ದುರಸ್ತಿಯಲ್ಲಿರುವ ವಾಹನಗಳು
d) ವರ್ಷದಲ್ಲಿ 120 ದಿನಗಳಿಗಿಂತ ಹೆಚ್ಚಿಗೆ ಹಾದು ಹೋಗುವ ಖಾಸಾಗಿ ವಾಹನಗಳು

d ವರ್ಷದಲ್ಲಿ 120 ದಿನಗಳಿಗಿಂತ ಹೆಚ್ಚಿಗೆ ಹಾದು ಹೋಗುವ ಖಾಸಾಗಿ ವಾಹನಗಳು✅✅✳

 11.ಅಧಿನಿಯಮದ 199 ಪ್ರಕರಣದ ಅನ್ವಯ ಈ ಕೆಳಗಿನದು ತೆರಿಗೆ ವಿಧಿಸುವಿಕೆಯ ವಿನಾಯಿತಿಯನ್ನು ಪಡೆದಿರುವುದಿಲ್ಲ?

a) ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೇರಿದ ಭೂಮಿ
b) ಜಿಲ್ಲಾ ಪಂಚಾಯತ್,, ತಾಲ್ಲೂಕು ಪಂಚಾಯತ್ ಗಳಿಗೆಿ ಸೇರದಿ ಭೂಮ
c) ಧರ್ಮಾರ್ಥ ಸಂಸ್ಥೆಗಳಿಗೆ ಸೇರಿದ ಭೂಮಿ
d) 1000 ಚ.ಮೀ ಗಿಂತ ಹೆಚ್ಚಿನ ಅಳತೆಯ ಭೂಮಿ

d 1000 ಚ.ಮೀ ಗಿಂತ ಹೆಚ್ಚಿನ ಅಳತೆಯ ಭೂಮಿ✳✅✅

 12.ಗ್ರಾಮ ಪಂಚಾಯಿತಿ ಲೆಕ್ಕಗಳ ಲೆಕ್ಕ ಪರಿಶೋಧನೆಯನ್ನು ನಡೆಸುವವರು

a) ರಾಜ್ಯ ಲೆಕ್ಕಪತ್ರಗಳ ನಿಯಂತ್ರಕರು
b) ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು
c) ಸನ್ನದು ಪಡೆದ ಲೆಕ್ಕಿಗರು
d) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

b.ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು✅✳✅

 13.ಪಂಚಾಯಿತಿಗಳ ಹಣಕಾಸು ವಿವರಣ ಪತ್ರದಲ್ಲಿ ಕೆಳಕಂಡ ಯಾವ ಅಂಶ ಕಾಣಿಸುವುದಿಲ್ಲ?
a) ಸ್ವೀಕೃತ ಮತ್ತು ಸಂದಾಯಗಳ ಲೆಕ್ಕ
b) ಆದಾಯ ಮತ್ತು ಖರ್ಚುಗಳ ಲೆಕ್ಕ
c) ಲಾಭ ಮತ್ತು ನಷ್ಟದ ಲೆಕ್ಕ
d) ಸಂತುಲನ ಪಟ್ಟಿ

 c ಲಾಭ ಮತ್ತು ನಷ್ಟದ ಲೆಕ್ಕ ✳🌺✅

 14.ಸರಕಾರ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಥವಾ ಇನ್ನಾವುದೇ ಪ್ರಾಧಿಕಾರದಿಂದ ಬಂದ ಅನುದಾನವನ್ನು ರಿಜಿಸ್ಟರ್ ನಲ್ಲಿ ಕೆಳಕಂಡ ಸಂಖ್ಯೆಯ ಫಾರಂನಲ್ಲಿ ನಮೂದಿಸಬೇಕು
a) 45
b) 46
c) 47
d) 48

a) 45 ✳✳✳✅✅

 15 ಪಂಚಾಯತ್ ಗಳಲ್ಲಿ ರೂಪಿಸಲಾದ ಋಣ ತೀರಿಕೆ ನಿಧಿಯನ್ನು

a) ಉದ್ಯೋಗಿಗಳ ವೇತನಕ್ಕೆ ಉಪಯೋಗಿಸಬಹುದು
b) ಚುನಾಯಿತ ಸದಸ್ಯರ ಪ್ರಮಾಣ ಭತ್ಯೆಗೆ ಉಪಯೋಗಿಸಬಹುದು
c) ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಮಾಣ ಭತ್ಯೆಗೆ ಉಪಯೋಗಿಸಬಹುದು
d) ಬಾಕಿಯಿರುವ ಸಾಲದ ಮರುಪಾವತಿಗೆ ಉಪಯೋಗಿಸಬಹುದು

 d) ಬಾಕಿಯಿರುವ ಸಾಲದ ಮರುಪಾವತಿಗೆ ಉಪಯೋಗಿಸಬಹುದ✅✅✳🌺💐

 16.ಅಧ್ಯಕ್ಷರ ಪ್ರಮಾಣ ಭತ್ಯೆಯ ಕೋರಿಕೆಗಳನ್ನು ಅನುಮೋದಿಸುವವರು ಯಾರು?

a) ಸ್ವತಃ ಅಧ್ಯಕ್ಷರು
b) ಅಧ್ಯಕ್ಷರು ಮತ್ತು ಉಪಾಧ್ಯಕರುರಿಬ್ಬರೂ
c) ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ
d) ತಾಲ್ಲೂಕು ಪಂಚಾಯಿತಿಯ ಸಭೆಯಲ್ಲಿ

c) ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ✅✳🌺

 17.ನೀಡಲಾದ (ಟೆಂಡರ್ಡ್) ಮತಪತ್ರ ಯಾವುದೆಂದರೆ

a) ಪ್ರಿಸೈಡಿಂಗ್ ಅಧಿಕಾರಿ ಹಾಕಿದ ಮತಪತ್ರ
b) ಮತದಾನ ಅಧಿಕಾರಿ ಹಾಕಿದ ಮತಪತ್ರ
c) ಈಗಾಗಲೇ ಯಾರ ಹೆಸರಿನಲ್ಲಿ ಮತದಾನ ಮಾಡಲಾಗಿದೆಯೋ ಅಂತಹ ವ್ಯಕ್ತಿಗೆ ನೀಡಿದ ಮತಪತ್ರ
d) ಮತಪೆಟ್ಟಿಗೆಯಲ್ಲಿ ಹಾಕುವುದಕ್ಕೆ ಅನುಮತಿ ಅಗತ್ಯವಾಗಿರುವಂತಹ ಮತಪತ್ರ

c) ಈಗಾಗಲೇ ಯಾರ ಹೆಸರಿನಲ್ಲಿ ಮತದಾನ ಮಾಡಲಾಗಿದೆಯೋ ಅಂತಹ ವ್ಯಕ್ತಿಗೆ ನೀಡಿದ ಮತಪತ್ರ✅💐🌺✳

*@Purnachandra group*

 18.ರಘು ಮತ್ತು ಅವನ ಕುಟುಂಬವು ಜನವರಿಯಲ್ಲಿ ಮತ್ತೊಂದು ಜಿಲ್ಲೆಗೆ ಹೋಗಿ ಸೆಪ್ಟೆಂಬರ್ ನಲ್ಲಿ ಹಿಂತಿರುಗಿದರು. ಅವನು REGS ನಲ್ಲಿ ನೊಂದಾಯಿಸಲು ಗ್ರಾಮ ಪಂಚಾಯತ್ ಅವರನ್ನು ಸಂಪರ್ಕಿಸಿದಾಗ ಅವರು ಅವನಿಗೆ ಹೀಗೆ ಹೇಳಿದರು.

a) ಅವನ ಕುಟುಂಬವು REGS ಅಡಿಯಲ್ಲಿ ಅನ್ವಯಿಸುವುದಿಲ್ಲ.
b) ಅವನ ಕುಟುಂಬವು REGS ಗೆ ಅನ್ವಯಿಸುತ್ತದೆ.
c) 50 ದಿನಗಳ ಕಾಲ ಮಾತ್ರ ಅನ್ವಯಿಸುತ್ತದೆ ಏಕೆಂದರೆ ಅವನು ಆರು ತಿಂಗಳುಗಳ ಕಾಲ ಆಪ್ರದೇಶದಲ್ಲಿರಲಿಲ್ಲ.
d) ಕುಟುಂಬದ ೊಬ್ಬ ಸದಸ್ಯರು ಮಾತ್ರ ಅರ್ಜಿಸಲ್ಲಿಸಬಹುದು.

b) ಅವನ ಕುಟುಂಬವು REGS ಗೆ ಅನ್ವಯಿಸುತ್ತದೆ.✅🌺✳✳

 19. ವೆಂಕಟೇಶನ ಕುಟುಂಬದಲ್ಲಿ ಅವನು, ಅವನ ಪತ್ನಿ ಮತ್ತು ಮೂರು ಗಂಡು ಮಕ್ಕಳು ಕ್ರಮವಾಗಿ 24,19 ಮತ್ತು 16 ವರ್ಷದವರು ಹಾಗೂ 45 ವಯಸ್ಸಿನ ಅವಿವಾಹಿತ ಸೋದರಿ ಇದ್ದಾರೆ. ಅವನ ಮೊದಲ ಮಗನು ಮದುವೆಯಾಗಿ ಅವನ ಪತ್ನಿ ಮತ್ತು ಮಗಳೊಡನೆ ಹತ್ತಿರದ ಗ್ರಾಮದಲ್ಲಿ ಅದೇ ಪಂಚಾಯತ್ ನಲ್ಲಿದ್ದಾರೆ. ಈಗ ಯಾರ್ಯರು ವೆಂಕಟೇಶನ ಕುಟುಂಬದವರು REGS ಯೋಜನೆಯಡಿ ಕುಟುಂಬದವರೆಂದು ನೊಂದಾಯಿಸಿಕೊಳ್ಲಬಹುದು.

a) ವೆಂಕಟೇಶ, ಅವನ ಪತ್ನಿ ಮತ್ತು ಅವಿವಾಹಿತ ಗಂಡು ಮಕ್ಕಳು
b) ವೆಂಕಟೇಶ, ಅವನ ಪತ್ನಿ ಮತ್ತು ತಂಗಿ ಹಾಗೂ ಎರಡನೇ ಮಗ
c) ವೆಂಕಟೇಶ, ಅವನ ಪತ್ನಿ, ತಂಗಿ ಮತ್ತು ಹಿರಿಯ ಇಬ್ಬರು ಗಂಡು ಮಕ್ಕಳು
d) ಕುಟುಂಬದ ಎಲ್ಲರೂ

b) ವೆಂಕಟೇಶ, ಅವನ ಪತ್ನಿ ಮತ್ತು ತಂಗಿ ಹಾಗೂ ಎರಡನೇ ಮಗ ✅✅🌺✳💐
✍🏻 *ಪೂರ್ಣ ಚಂದ್ರ*

: 20. ಸಾಮೂಹಿಕ ಶೌಚಾಲಯ ಸಂಕೀರ್ಣಗಳನ್ನು ನಿರ್ಮಿಸುವುದು ಮತ್ತು ಸುಸ್ಥಿತಿಯಲ್ಲಿಡುವುದು ಇವರ ಜವಾಬ್ದಾರಿಯಾಗಿದೆ.

a) ಗ್ರಾಮ ಪಂಚಾಯತ್
b) ರಾಜ್ಯ ಸರ್ಕಾರ
c) ಕೇಂದ್ರ ಸರ್ಕಾರ
d) ಮೇಲಿನ ಎಲ್ಲವೂ

a) ಗ್ರಾಮ ಪಂಚಾಯತ್✅✳✅💐

21.ಈ ಕೆಳಗಿನವುಗಳಲ್ಲಿ ಯಾವುದು ಸತ್ಯವಲ್ಲ.

a) ಪ್ರತಿ ಶಾಲೆಯು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ! ಶೌಚಾಲಯ ಹೊಂದಿರಬೇಕು
b) ಪ್ರತಿ ಅಂಗನವಾಡಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರಬೇಕು.
c) ಪ್ರತಿ ಶಾಲೆಯೂ ಆರೋಗ್ಯ ನೈರ್ಮಲ್ಯದಲ್ಲಿ ತರಬೇತಿ ಹೊಂದಿದ ಒಬ್ಬ ಉಪಾಧ್ಯಾಯರನ್ನು ಹೊಂದಿರಬೇಕು.
d) ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪೋಷಕರು ಉಪಾಧ್ಯಾಯರು ಹಣ ಒದಗಿಸಬೇಕು.

b) ಪ್ರತಿ ಅಂಗನವಾಡಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರ ಬೇಕು 🌺💐✳✅

 22.ರಾಜೀವ್ ಗಾಂಧಿ ಗೃಹ ನಿರ್ಮಾಣ ಸಂಸ್ಥೆ ನಿಯಮಿತ ಈ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು.....

a) ಕೇಂದ್ರ ಸರ್ಕಾರ
b) ಕರ್ನಾಟಕ ಸರ್ಕಾರ
c) ಕೇಂದ್ರ ಸರ್ಕಾರ ಮತ್ತು ಇತರ ಎಲ್ಲಾ ರಾಜ್ಯ ಸರ್ಕಾರದ ಸಹಯೋಗದಿಂದ
d) ಮೇಲಿನ ಯಾವುವೂ ಅಲ್ಲ

b) ಕರ್ನಾಟಕ ಸರ್ಕಾರ✅

*@Purnachandra group*

 23.ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಯೋಜನೆಯನ್ನು ಸಂಯೋಜಿಸುವವರು...

a) ರಾಜ್ಯ ಸರ್ಕಾರ
b) ಜಿಲ್ಲಾ ಯೋಜನಾ ಸಮಿತಿ
c) ಆರೋಗ್ಯ ಮಂತ್ರಾಲಯ
d) ಮೇಲಿನ ಯಾವುದೂ ಅಲ್ಲ

b.ಜಿಲ್ಲಾ ಯೋಜನಾ ಸಮಿತಿ✅✳🌺💐
 24.ಗ್ರಾಮ ಪಂಚಾಯಿತಿಯು ಇವುಗಳಿಗೆ ಜವಾಬ್ದಾರಿಯಾಗಿದೆ...

a) ಪ್ರತೀ ವರ್ಷ ಶೇ 10 ರಷ್ಟು ಕುಟುಂಬಗಳಿಗೆ ಶೌಚಾಲಯ ಒದಗಿಸುವುದು ಹಾಗೂ ಶೀಘ್ರವಾಗಿ ಸಂಪೂರ್ಣವಾಗಿ ಎಲ್ಲರಿಗೂ ನೀಡುವುದು
b) ಪ್ರಾಥಮಿಕ ಶಾಲೆಗೆ ಎಲ್ಲಾ ಮಕ್ಕಳನ್ನು ನೊಂದಾಯಿಸುವುದು
c) ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿ, ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು
d) ಮೇಲಿನ ಎಲ್ಲಾ ಕಾರ್ಯಗಳೂ ಹೌದು

d. ಮೇಲಿನ ಎಲ್ಲಾ ಕಾರ್ಯಗಳೂ ಹೌದು✅🌺✳💐✅
 25.ಗ್ರಾಮ ಪಂಚಾಯಿತಿ ಸಭೆಗೆ ಕನಿಷ್ಟ ಹಾಜರಾತಿ...

a) ಹತ್ತು
b) ಒಟ್ಟು ಸದಸ್ಯರ ಶೇ.10 ರಷ್ಟು
c) ಒಟ್ಟು ಸದಸ್ಯರ ಅರ್ಧಭಾಗ
d) ನಿಶ್ಚಿತವಾಗಿಲ್ಲ

c) ಒಟ್ಟು ಸದಸ್ಯರ ಅರ್ಧಭಾಗ💐💚💚🌺✅

೧.ನ್ಯಾಷನಲ್ ಪವರ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ನ ಈಶಾನ್ಯ ವಲಯದ ಕೇಂದ್ರ ಎಲ್ಲಿದೆ

ಗುವಾಹತಿ✔️✔️✔️✔️

೨. ಭಾರತದಲ್ಲಿ ಕೃಷಿ ಮಾರುಕಟ್ಟೆ ಸಂಬಂಧಿಸಿದ ಕೇಂದ್ರ ಸಂಸ್ಥೆ ಯಾವುದು

ಎನ್ ಐ ಎ ಎಮ್✔️✔️✔️

೩.ಕೇಂದ್ರ ಎಮ್ಮೆ ಸಂಶೋಧನಾ ಸಂಸ್ಥೆ ಎಲ್ಲಿದೆ

ಹಿಸ್ಸಾರ್✔️✔️✔️

೪.ಭಾರತದ ಯಾವ ರಾಜ್ಯ ವು ಅತಿ ಹೆಚ್ಚು ಸಾಸಿವೆ ಬೆಳೆಯುತ್ತದೆ

ರಾಜಸ್ಥಾನ್✔️✔️✔️

೫.ಖೋ ದರೀಬಾ ಇದು ಯಾವುದರ ಗಣಿಯಾಗಿದೆ

ತಾಮ್ರ ✔️✔️✔️✔️✔️✔️

೬.ಲೋಹಘಡ್ ಕೋಟೆ ಎಲ್ಲಿದೆ

ಭರತ್ ಪುರ✔️✔️✔️✔️✔️

೭ ಭಾರತದ ಕಲ್ಲಿದ್ದಲು ನಿಕ್ಷೇಪಗಳು ಯಾವ ರಾಜ್ಯದಲ್ಲಿ ಅತಿ ಹೆಚ್ಚು

ಜಾಖ೯ಂಡ್✔️✔️✔️✔️

೮.ನೂನ್ ಮತಿ ತೈಲ ಸಂಸ್ಕರಣ ಘಟಕ ಎಲ್ಲಿದೆ

ಅಸ್ಸಾಂ ✔️✔️✔️✔️✔️

೯.ಭಾರತದಲ್ಲಿ ಯಾವ ಪ್ರಕಾರದ ಅರಣ್ಯ ಶೇಕಡಾವಾರು ಹೆಚ್ಚು ಪ್ರಮಾಣದಲ್ಲಿದೆ

ಉಷ್ಣವಲಯದ ಪಣ೯ಪಾತಿ(ಟ್ರಾಪಿಕಲ್ ಡೆಸಿಡ್ಯುಯಸ್)✔️✔️✔️✔️

೧೦. ಅಮರ ಕಂಟಕದಲ್ಲಿ ಉಗಮವಾಗಿರುವ ನದಿ ಯಾವುದು

ನಮ೯ದಾ✔️✔️✔️✔️✔️
*ಸ್ಪರ್ಧಾ ಸಾಗರ ಚರ್ಚಾಕೂಟ          
   ಕ್ವಿಜ್ ನ ಒಂದು ನೋಟ ಉತ್ತರ ಗಳೊಂದಿಗೆ*          
   *ಶಂಕರ್ ಸಾಗರ*      
   1).ಚಿತ್ರದುರ್ಗದ ಕುರಿತು ಐತಿಹಾಸಿಕ ಕಾದಂಬರಿ ಯನ್ನು ರಚಿಸಿದವರು...

a) ಕೆ.ವಿ.ಅಯ್ಯರ್
b) ಡಿ.ವಿ.ಜಿ
c) ಕಡೆಂಗೋಡ್ಲು ಶಂಕರಭಟ್ಟ
d) ತ.ರಾ.ಸು  ✔
D✔
 2).'ಮಕ್ಕಳ ಸಾಹಿತ್ಯದ ಪಿತಾಮಹ' ಎನಿಸಿಕೊಂಡವರು...

a) ಆನಂದ
b) ಪಂಜೆ ಮಂಗೇಶ ರಾಯರು ✔
c) ಹಟ್ಟಿಯಂಗಡಿ ನಾರಾಯಣ ರಾಯರು
d) ಮಾಸ್ತಿ ವೆಂಕಟೇಶ ಅಯ್ಯಂಗಾರ್
 B✔
 3).ವರ್ಗ ಸಂಘರ್ಷವನ್ನು ಸಾಂಕೇತಿಕವಾಗಿ ಚರ್ಚಿಸಿದ ಕೃತಿ...

a) ರಾಮಧಾನ್ಯ ಚರಿತೆ
b) ರಾಮಧ್ಯಾನ ಚರಿತೆ
c) ಭುವನೈಕ ರಾಮಾ ಭ್ಯುದಯ
d) ರಾಮನಾಥ ಚರಿತೆ
A✔
4).'ಫಣಿಯಮ್ಮ' ಕಾದಂಬರಿ ಯನ್ನು ಬರೆದವರು...

a) ಕೆ.ಸರೋಜಾರಾವ್
b) ಕೊಡಗಿನ ಗೌರಮ್ಮ
c) ಎಂ.ಕೆ. ಇಂದಿರಾ
d) ತ್ರಿವೇಣಿ
C✔
5).'ಬೀchi' ಇವರ ನಿಜನಾಮ...

a) ರಾಯಸಂ ಭಿಮಸೇನ ರಾವ್
b) ಅಜ್ಜಂಪುರ ಸೀತಾರಾಮ
c) ಆನಂದ ಕಂದ
d) ಚೆನ್ನಮಲ್ಲಪ್ಪ ಗಲಗಲಿ
A✔
 6).ದ.ರಾ .ಬೇಂದ್ರೆ ಅವರಿಗೆ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ...

a) ಅರಳು ಮರಳು
b) ಉಯ್ಯಾಲೆ
c) ನಾಕುತಂತಿ
d) ಸಖೀಗೀತ
C✔
 7).'ನೆನಪಿನ ದೋಣಿಯಲಿ' ಇದು ಇವರ ಆತ್ಮಚರಿತ್ರೆ...

a) ದ.ರಾ. ಬೇಂದ್ರೆ
b) ಶಿವರಾಮ ಕಾರಂತ
c) ಮಾಸ್ತಿ ವೆಂಕಟೇಶ ಅಯ್ಯಂಗಾರ್
d) ಕುವೆಂಪು
D✔
8).'ಮಿತ್ರಾವಿಂದ ಗೋವಿಂದ' - ಇದೊಂದು...

a) ಪ್ರಬಂಧ
b) ಕಾದಂಬರಿ
c) ನಾಟಕ
d) ಕಾವ್ಯ
 C✔
 9).'ನಾಗರ ಹಾವೇ ಹಾವೊಳು ಹೂವೆ' ಪದ್ಯವನ್ನು ರಚಿಸಿದವರು ಇವರು.....

a) ಪಂಜೆ ಮಂಗೇಶ ರಾಯರು
b) ಉಳ್ಳಾಲ ಮಂಗೇಶ ರಾಯರು
c) ಟಿ.ಎಸ್.ವೆಂಕಣ್ಣಯ್ಯ
d) ಶಾಂತಕವಿ
A✔
10).'ಚಂಡ ಶಾಸನ ಪ್ರಸಂಗ' ವು ಈ ಕಾವ್ಯದಲ್ಲಿದೆ...

a) ಪಾರ್ಶ್ವನಾಥ ಪುರಾಣ
b) ಶಾಂತಿನಾಥ ಪುರಾಣ
c) ಅನಂತನಾಥ ಪುರಾಣ
d) ಅಜಿತನಾಥ ಪುರಾಣ
 C✔
11).ನಾಗವರ್ಮನ 'ಕರ್ನಾಟಕ ಕಾದಂಬರಿ' ಇದು ಈ ಪ್ರಕಾರದಲ್ಲಿದೆ...

a) ಚಂಪೂಕಾವ್ಯ
b) ನಾಟಕ
c) ಗದ್ಯ
d) ಕಾದಂಬರಿ
 A✔
12).'ಕರ್ನಾಟಕ ಸಂಗೀತ ಪಿತಾಮಹ' ಎಂಬ ಕೀರ್ತಿಗೆ ಪಾತ್ರರಾದವರು...

a) ಕನಕದಾಸರು
b) ಜಗನ್ನಾಥ ದಾಸರು
c) ವಿಜಯದಾಸರು
d) ಪುರಂದರ ದಾಸರು
D✔
13).'ಪೆಣ್ಣೆ ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂದು ಜನರ ಮನೋ ಧೋರಣೆಯನ್ನು ಪ್ರಶ್ನಿಸಿವರು...

a) ಅಕ್ಕಮಹಾದೇವಿ
b) ಸಂಚಿಹೊನ್ನಮ್ಮ
c) ಹೆಳವನಕಟ್ಟೆ ಗಿರಿಯಮ್ಮ
d) ಕಂತಿ
B✔
 14).ಯೋಗ ಭೋಗ ಸಮನ್ವಯ ತತ್ವವನ್ನು ಕಥಾ ನಾಯಕನಲ್ಲಿ ಮೇಳೈಸಿ ಕಾವ್ಯ ರಚಿಸಿದ ಜೈನ ಕವಿ...

a) ಪೊನ್ನ
b) ಜನ್ನ
c) ರತ್ನಾಕರ ವರ್ಣಿ
d) ಪಂಪ
C✔
15).ಇದರಲ್ಲಿ ಯಾವುದು ರಾಘವಾಂಕನ ಕೃತಿ ಅಲ್ಲ...

a) ವೀರೇಶ್ವರ ಚರಿತೆ
b) ಸಿದ್ಧರಾಮ ಪುರಾಣ
c) ಚಂದ್ರಪ್ರಭ ಪುರಾಣ
d) ಹರಿಹರ ಮಹತ್ವ
 C✔
16).'ಬಸವಣ್ಣ ಪ್ರಿಯ ಚೆನ್ನ ಸಂಗಯ್ಯ' ಎಂಬುದು ಈಕೆಯ ಅಂಕಿತ ನಾಮ

a) ಅಕ್ಕಮ್ಮ
b) ಮುಕ್ತಾಯಕ್ಕ
c) ಗಂಗಾಂಬಿಕೆ
d) ನಾಗಲಾಂಬಿಕೆ
C✔
17).ಇದು ಬ್ರಹ್ಮಶಿವನು ರಚಿಸಿದ ಕೃತಿ...

a) ಮದನ ತಿಲಕ
b) ಧರ್ಮಾಮೃತ
c) ಸುಕುಮಾರ ಚರಿತೆ
d) ಸಮಯ ಪರೀಕ್ಷೆ
D✔
18).'ರೂಪಕ ಚಕ್ರವರ್ತಿ' ಎಂಬ ಬಿರುದಿಗೆ ಪಾತ್ರನಾದ ಕನ್ನಡದ ಕವಿ...

a) ಕುಮಾರ ವಾಲ್ಮಿಕಿ
b) ಕುಮಾರ ವ್ಯಾಸ
c) ಭೀಮಕವಿ
d) ಲಕ್ಷ್ಮೀಶ
B✔
19).'ಕನ್ನಡ ಕವಿತೆಯೋಳ್ ಅಸಗಂಗಂ ನೂರ್ಮಡಿ' ನನ್ನ ಕಾವ್ಯ ಎಂದು ಹೇಳಿದವರು...

a) ಪೊನ್ನ
b) ರನ್ನ
c) ಕುವೆಂಪು
d) ಪಂಪ
 A✔
20). 'ಕಾವೇರಿಯಿಂದ ಮಾ ಗೋದಾ ವರಿವರಮಿರ್ಪ ನಾಡದಾ ಕನ್ನಡದೊಳ್' ಎಂಬುದಾಗಿ ಕನ್ನಡನಾಡಿನ ಸೀಮೆಯನ್ನು ಸೂಚಿಸಿದ ಕೃತಿ...

a) ವಡ್ಡಾರಾಧನೆ
b) ಕವಿರಾಜ ಮಾರ್ಗ
c) ಛಂದೋಂಬುಧಿ
d) ಆದಿಪುರಾಣ
 B✔
21).'ಆರಂಕು ಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ' ಎಂದು ಅಭಿಮಾನ ದಿಂದ ಹೇಳಿದ ಕವಿ....

a) ನಾಗವರ್ಮ
b) ನಾಗಚಂದ್ರ
c) ರನ್ನ
d) ಪಂಪ                                        D✔
22).ಕನ್ನಡದ ಓದುಗರಿಗೆ ಮಹಿಳಾ ವಿಜ್ಞಾನಿಗಳ ಸಾಧನೆಗಳನ್ನು ನಿರಂತರ ಪರಿಚಯಿಸುತ್ತಾ ಬಂದವರು ಇವರು...

a) ವಿಜಯಾ ದಬ್ಬೆ
b) ಕೆ.ಸರೋಜ
c) ನೇಮಿಚಂದ್ರ
d) ಬಿ.ಎಸ್.ಸುಮಿತ್ರಾಬಾಯಿ
C✔
23).'ಜಯ' ಎಂಬ ಕಾದಂಬರಿಯನ್ನು ಬರೆದವರು ...

a) ನಳಿನಾ ಮೂರ್ತಿ
b) ಎಂ.ಎಸ್.ವೇದಾ
c) ತಿರುಮಲಾಂಬಾ
d) ಎಚ್.ವಿ .ಸಾವಿತ್ರಮ್ಮ
D✔
24).'ಹಸಿರು ಹೊನ್ನು' ಎಂಬ ಸಸ್ಯ ವಿಜ್ಞಾನಕ್ಕೆ ಸಂಬಂದಿಸಿದ ಈ ಕೃತಿಯ ಕತೃ

a) ಭೂಸನೂರ ಮಠ
b) ಎಸ್.ವಿ.ರಂಗಣ್ಣ
c) ಬಿ.ಜಿ.ಎಲ್.ಸ್ವಾಮಿ
d) ಎ.ಎನ್. ಮೂರ್ತಿರಾವ್
C✔
25).'ಕರ್ನಾಟಕದ ವೀರಗಲ್ಲುಗಳು' ಈ ಕೃತಿಯನ್ನು ಬರೆದವರು ...

a) ಎಂ.ಎಂ.ಕಲಬುರ್ಗಿ
b) ಆರ್.ಶೇಷಶಾಸ್ತ್ರಿ
c) ಚಿನ್ನಕ್ಕ ಪಾವಟೆ
d) ಎಂ.ಚಿದಾನಂದ ಮೂರ್ತಿ
 B✔                                           *ಶಂಕರ್ ಸಾಗರ*

೧. ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯ ಗರಿಷ್ಟ ಅಧಿಕಾರವಧಿ ಎಷ್ಟು?
- 6 ತಿಂಗಳು
೨. ಅಕ್ಟೋಬರ್ 2, 2016 ರಂದು ಬಯಲು ಘೋಷಣೆಯಾದ ಶೌಚಮುಕ್ತ ಜಿಲ್ಲೆಗಳಾವುದು ?
- ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು
೩. ದೇಶದ ಎಷ್ಟು ರಾಜ್ಯಗಳು ಬಯಲು ಬಹಿರ್ದೆಶೆ ಮುಕ್ತ ರಾಜ್ಯಗಳೆಂದು ಘೋಷಿಸಲಾಗಿದೆ ಮತ್ತು ಅವು ಯಾವುವು?
3 ರಾಜ್ಯಗಳು- ತ್ರಿಪುರಾ, ಹಿಮಾಚಲ ಪ್ರದೇಶ, ಕೇರಳ
೪. MGNREGA ಜಾರಿಗೆ ಬರುವ ಪೂರ್ವದಲ್ಲಿ ಜಾರಿಯಲ್ಲಿದ್ದ ಉದ್ಯೋಗ ಯೋಜನೆ ಯಾವುದು?
ಕೂಲಿಗಾಗಿ ಕಾಳು ಯೋಜನೆ
೫. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ರಚಿಸಲಾಗಿದ್ದ ಸಮಿತಿ ಯಾವುದು?
- ಎಸ್ ವಿ ರಂಗನಾಥ್ ಸಮಿತಿ
೬. ಪುನಟಿ ಶ್ರೀಧರ್ ಸಮಿತಿ ಯಾವುದಕ್ಕೆ ಸಂಬಂಧಿಸಿದೆ?
- ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅನಧಿಕೃತವಾಗಿ ಬ್ಯಾಂಕಿನಲ್ಲಿ ಠೇವಣಿಗಳನ್ಬು ಇರಿಸಿದ್ದರ ಬಗ್ಗೆ ತನಿಖೆ
೭. ಶಿವರುದ್ರಪ್ಪ ಸಮಿತಿ ಯಾವುದಕ್ಕೆ ಸಂಬಂಧಿಸಿದೆ?
- ಇಲಾಖೆಯಲ್ಲಿ ಆರ್ಥಿಕ ಅಶಿಸ್ತು ಶೂನ್ಯೀಕರಣ ಕುರಿತು.
೮. ತಾಪಂಗಳಲ್ಲಿ ನಿರ್ಮಿಸಲಾಗಿರುವ ಸಾಮರ್ಥ್ಯ ಸೌಧಗಳ ನಿರ್ಮಾಣದ ಉದ್ದೇಶ ಏನು ?
- ಪಂಚಾಯತ್ ರಾಜ್ ಸಂಸ್ಥೆಗಳ ಸಾಮರ್ಥ್ಯಾಭಿವೃದ್ಧಿ, ಸಬಲೀಕರಣ
೯. ರಾಜೀವ್ ಗಾಂಧಿ ಸೇವಾ ಕೇಂದ್ರ ಯಾವ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತದೆ.
- MGNREGA
೧೦. ಈ ವರ್ಷದಿಂದ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ಸಹಾಯ ಧನ ಎಷ್ಟು?
- 1,50,000
1. ಭೂಗೋಳ-ಸಾಮಾನ್ಯಜ್ಞಾನ

1. ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?

Ans. ಆರ್ಯಭಟ

2. ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?

Ans. ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

3. ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?

Ans. ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

4. ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?

Ans. ಕರ್ನಾಟಕ

5. ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?

Ans. ಬಳ್ಳಾರಿ

6. ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?

Ans. ಮಧ್ಯ ಪ್ರದೇಶ

7. ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?

Ans. ಅಂಡಮಾನ್ ಮತ್ತು ನಿಕೋಬಾರ್

8. ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?

Ans. ಹರಿಯಾಣ

9. ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?

Ans. 1,91,791 ಚ.ಕಿ.ಮೀ.ಗಳು

10. ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?

Ans. ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ

11. ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?

Ans. " ಗಗನ ಚುಕ್ಕಿ " ಮತ್ತು " ಭರಚುಕ್ಕಿ"

12. ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?

Ans. ಕನ್ನಂಬಾಡಿ ಅಣೆಕಟ್ಟು

14. 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?

Ans. ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

15. ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?

Ans. ಬೀದರ್

16. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?

Ans. ಚಳ್ಳಕೆರೆ (456 ಮಿ.ಮೀ.

17. ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?

Ans. ಕರ್ನಾಟಕ

18. ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?

Ans. ಕೊಡಗು ಜಿಲ್ಲೆಯ ನಾಗರಹೊಳೆ

19. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?

Ans. ಚಾಮರಾಜನಗರ

20. ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?

Ans. ತಮಿಳುನಾಡು
2. ಭಾರತದ ಭೂಗೋಳ

1. ಭಾರತವು ಏಷ್ಯಾ ಖಂಡದಲ್ಲಿದೆ.

2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.

3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.

4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.

5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.

6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.

7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.

8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.

9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)

10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.

11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.

12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.

13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.

14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.

15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.

16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.

17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ.

18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.

19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.

20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______

21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ ಗಡಿ ಪ್ರದೇಶ.

22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ ಪ್ರದೇಶ ಎಂದು ಕರೆಯಲಾಗಿದೆ.

23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.

24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.

25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು ಸಮುದ್ರ ಎನ್ನುವರ.

26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.

27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ (ಲೈನ್ ಆಪ್ ಕಂಟ್ರೋಲ್) ಎನ್ನುವರು.

28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.

29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.

30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.

31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.

32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.

33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ ಚಿಕ್ಕ ಜಿಲ್ಲೆ-ಪಾಂಡಿಚೇರಿ

34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ.



9. ಕಣ್ಣುಗಳು

1. ಸರಾಸರಿ ಒಬ್ಬ ವ್ಯಕ್ತಿ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ 12 ಸಲ ಕಣ್ಣು ಮಿಟುಕಿಸುತ್ತಾನೆ.

2. ಮಾನವನ ಕಣ್ಣು 576 ಮೆಗಾಪಿಕ್ಸೆಲ್ ಆಗಿವೆ.

3. ಮಾನವನ ಕಣ್ಣುಗುಡ್ಡೆಗಳು ಅಂದಾಜು 28 ಗ್ರಾಂ,ನಷ್ಟು ತೂಕ ಹೊಂದಿವೆ.

4. ಕಣ್ಣು ತೆರೆದು ಸೀನುವುದು ಸಾಧ್ಯವಿಲ್ಲ.

5. ದಿನವೊಂದಕ್ಕೆ 10,000 ಕ್ಕಿಂತ ಹೆಚ್ಚುಸಲ ಕಣ್ಣು ಮಿಟುಕುತ್ತದೆ.

6. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.

7. ಕೆಲವು ವ್ಯಕ್ತಿಗಳ ಎರಡು ಕಣ್ಣುಗಳ ಬಣ್ಣವು ಬೇರೆ ಬೇರೆಯಾಗಿರುತ್ತವೆ ಈ ಸ್ಥಿತಿಯನ್ನು Heterochromia iridum ಎನ್ನುತ್ತಾರೆ.

8. ಕಣ್ಣಿನ 'ಕಾರ್ನಿಯಾ' ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ.

9. ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ.

10. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು.
ಜ್ಞಾನ ಸಾಗರ  ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:28/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best













No comments:

Post a Comment