ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:12/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
1. ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ.
2.ಕರ್ನಾಟಕ ರಾಜ್ಯ ಸಮುದ್ರ ಮಟ್ಟದಿಂದ ಸರಾಸರಿ ೧೫೦೦ ಅಡಿ ಎತ್ತರ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
3.ಭಾರತವು ಸಂಪೂರ್ಣ ಉತ್ತರಾರ್ದಗೊಲದಲ್ಲಿದೆ.
4.ಭಾರತವು ಒಟ್ಟೂ 32,87,263 (32.87 ಲಕ್ಷ) ಚದರ ಕಿ. ಮಿ ಗಳಷ್ಟು ವಿಸ್ತಾರವಾಗಿದೆ.
5.ಭಾರತವು ಪ್ರಪಂಚದ 7ನೇ ದೊಡ್ಡ ರಾಷ್ಟ್ರ ಮತ್ತು ಪ್ರಪಂಚದ ಭೂಕ್ಷೇತ್ರದ ಶೇ 2.4 ರಷ್ಟನ್ನು ಒಳಗೂಂಡಿದೆ.
6.ಭಾರತದಲ್ಲಿ ಒಟ್ಟೂ 29 ರಾಜ್ಯ ಹಾಗೂ 6 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
7.ಭಾರತವು ಪ್ರಪಂಚದ ಸರಿಸುಮಾರು ಶೇ 17.5 ರಷ್ಟು ಜನಸಂಖ್ಯೆಯನ್ನು ಹೊಂದಿದೆಹಾಗೂ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ದೇಶವಾಗಿದೆ.
8.ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ 3214 ಕಿ. ಮೀ ಮತ್ತು ಪೂರ್ವ ಪಶ್ಚಿಮವಾಗಿ ಸುಮಾರು 2933 ಕಿ. ಮೀ ವರೆಗೆ ಹಬ್ಬಿದೆ.
9.ಭಾರತದ ಅತ್ಯಂತ ದಕ್ಷಿಣ ಭಾಗವು ಗ್ರೇಟ್ ನಿಕೋಬಾರ್ ದ್ವೀಪದ "ಇಂದಿರಾ ಪಾಯಿಂಟ್".
10. ಭಾರತವು 8o 4' ಉತ್ತರ ಅಕ್ಷಾಂಶದಿಂದ 37o 6' ಉತ್ತರ ಅಕ್ಷಾಂಶದವರೆಗೆ ಹರಡಿದೆ ಹಾಗೆ 680 7 ಪೂರ್ವ ರೇಖಾಂಶದಿಂದ 970 25 ಪೂರ್ವ ರೇಖಾಂಶಗಳವರೆಗೆ ಹಬ್ಬಿದೆ.
11. 82 ½ 0 ಪೂರ್ವ ರೇಖಾಂಶವನ್ನು ಆದರಿಸಿ (ಅಲಹಾಬಾದ್) ಭಾರತದ ವೇಳೆಯನ್ನು ನಿರ್ಧರಿಸಲಾಗುತ್ತದೆ. ಇದು ಗ್ರೀನ್ವಿಚ್ (00 ರೇಖಾಂಶ) ಕಾಲಮಾನಕ್ಕಿಂತ 5 ಘಂಟೆ 30 ನಿಮಿಷ ಮುಂದೆ ಇದೆ.
12.ಭಾರತವು ಒಟ್ಟೂ 15200 ಕಿ. ಮೀ ಭೂ ಗಡಿ ಹಾಗೂ 6100 ಕಿ. ಮೀ ಕರಾವಳಿಅನ್ನು ಹೊಂದಿದೆ.
13. ಭಾರತವು 7 ರಾಷ್ಟ್ರಗಳೊಡನೆ ಭೂ ಗಡಿರೇಖೆಯನ್ನು ಹಂಚಿಕೊಂಡಿದೆ. ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಉತ್ತರದಲ್ಲಿ ಚೈನಾ,ನೇಪಾಳ ಮತ್ತು ಭೂತಾನ್ ಹಾಗೂ ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶಗಳೊಡನೆ ಭೂ ಗಡಿಯನ್ನು ಹೊಂದಿದೆ.
14. ಭಾರತದ ಪ್ರಮುಖ ಗಡಿ ರೇಖೆಗಳು
ಅ. ಪಾಕಿಸ್ತಾನ - Rad clif
ಆ. ಚೈನಾ - ಮ್ಯಾಕ್ ಮಹೊನ್
ಇ. ಅಫ್ಘಾನಿಸ್ತಾನ - Durrand
15. ಭಾರತದ ಭೂರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನು ಆದರಿಸಿ 4 ಪ್ರಧಾನ ಭೂಸ್ವರೂಪ ವಿಭಾಗಗಳಾಗಿ ವಿಂಗಡಿಸಬಹುದು.
1. ಉತ್ತರದ ಪರ್ವತಗಳು
2.ಉತ್ತರದ ಮಹಾಮೈದಾನ
3.ಪರ್ಯಾಯ ಪ್ರಸ್ತಭೂಮಿ
4.ಕರಾವಳಿ ಮೈದಾನಗಳು.
1. ಉತ್ತರದ ಪರ್ವತಗಳು
a. ಉತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನಲ್ಲಿಯೇ ಅತಿ ಎತ್ತರವಾದ ಶಿಖರಗಳು ಆಳವಾದ ಕಣಿವೆಗಳನ್ನು ಹಾಗೂ ಹಿಮನದಿಗಳನ್ನು ಒಳಗೊಂಡಿದೆ.
b.ಹಿಮಾಲಯ ಪರ್ವತ ಶ್ರೇಣಿಯು ಪಾಮಿರ್ ಗ್ರಂಥಿಯಿಂದ ಪ್ರಾರಂಭವಾಗಿ ಪೂರ್ವದಲ್ಲಿ ಅರುಣಾಚಲದವರೆಗೆ ಸುಮಾರು 2500 ಕಿ. ಮೀ ಉದ್ದವಾಗಿದೆ. ಇದು ಮಡಿಕೆ ಪರ್ವತ ಶ್ರೇಣಿಯಾಗಿದ್ದು ಮೂರು ಪ್ರಮುಖ ಶ್ರೇಣಿಯನ್ನು ಒಳಗೊಂಡಿದೆ ಅವು 1. ಶಿವಾಲಿಕ್ ಶ್ರೇಣಿ (ಹಿಮಾಲಯದ ಪಾದ ಬೆಟ್ಟಗಳು, 600-1500 ಮೀ. ಗಳಷ್ಟು ಎತ್ತರ)
2.ಹಿಮಾಚಲ (ಮದ್ಯ ಹಿಮಾಲಯ, 3600-4500 ಮೀ. ಗಳಷ್ಟು ಎತ್ತರ ಹಾಗೂ 60-80 ಕಿ. ಮೀ ಅಗಲ)
3. ಮಹಾಹಿಮಾಲಯ (ಹಿಮಾದ್ರಿ, 6000-8000 ಮೀ. ಗಿಂತಲೂ ಹೆಚ್ಚು ಎತ್ತರ)
c. ಪ್ರಪಂಚದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ (8848 ಮೀ. ಎತ್ತರ) ಇದು ನೇಪಾಳ ಮತ್ತು ಟಿಬೆಟ್ ಮದ್ಯದಲ್ಲಿದೆ ಇದು ಹಿಮಾಲಯದ ಹಿಮಾದ್ರಿ ಶ್ರೇಣಿಯಲ್ಲಿದೆ.
d. ಭಾರತದ ಎತ್ತರದ ಪರ್ವತಶ್ರೇಣಿ ಗಾಡ್ವಿನ್ ಆಸ್ಟಿನ್ ಅಥವಾ k2 (8611 ಮೀ. ಎತ್ತರ) .
2.ಉತ್ತರದ ಮಹಾಮೈದಾನ
a. ಉತ್ತರದ ಮಹಾ ಮೈದಾನವನ್ನು ಸಟ್ಲೆಜ್ ಗಂಗಾ ಮೈದಾನವೆಂತಲೂ ಕರೆಯುತ್ತಾರೆ
b.ಉತ್ತರದ ಮೈದಾನವು ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವ ಸಂಚಯನ ಮೈದಾನವಾಗಿದೆ.
c. ಹಿಮಾಲಯದ ತಪ್ಪಲಿನಲ್ಲಿ ನದಿಗಳು ಮೈದಾನವನ್ನು ಪ್ರವೇಶಿಸುವಕಡೆ ಹೊತ್ತು ತಂಡ ದಪ್ಪ ಶೀಲಾ ಚೂರುಗಳನ್ನು ಸಂಚಯಿಸಿದೆ ಇದನ್ನು ಬಬರ್ ಎಂದು ಕರೆಯುವರು.
d. ಪುರಾತನ ಕಾಲದಲ್ಲಿ ಸಂಚಯಿತವಾಗಿರುವ ಮೆಕ್ಕಲು ಮಣ್ಣಿನ ವಲಯವನ್ನು ಭಾಂಗರ್ ಎಂದು ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡಿರುವ ಮೆಕ್ಕಲುಮಣ್ಣಿನ್ನು ಖದರ್ ಎಂದು ಕರೆಯುವರು.
3.ಪರ್ಯಾಯ ಪ್ರಸ್ತಭೂಮಿ
a. ಪರ್ಯಾಯ ಪ್ರಸ್ಥಭೂಮಿ ಭಾರತದ ಭೂಸ್ವರೂಪದಲ್ಲಿ ಅತಿ ದೊಡ್ಡದು ಹಾಗು ಅತಿ ಪುರಾತನವಾದದ್ದು.
b. ಇದು ಭೂ ಖಂಡಗಳ ಆರಂಭದಲ್ಲಿದ್ದ ಗೊಂಡ್ವಾನ ಭೂರಾಶಿಯ ಒಂದು ಭಾಗವಾಗಿದೆ.
c. ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರ ಪ್ರದೇಶವಾದ ಅಣ್ಣಾಮಲೈ ಸರಣಿಯ 'ಆನೈಮುಡಿ' (2665 ಮೀಟರ್) ಪಶ್ಚಿಮಘಟ್ಟದಲ್ಲಿ.
d. ದಕ್ಷಿಣದ ದಖನ್ ಪ್ರಸ್ತಭೂಮಿಯ ಪೂರ್ವದಲ್ಲಿ ಪೂರ್ವಘಟ್ಟಗಳು ಹಾಗು ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಇದ್ದು ಇವು ನೀಲಗಿರಿ ಬೆಟ್ಟದಲ್ಲಿ ಸಂಧಿಸುತ್ತವೆ.
4.ಕರಾವಳಿ ಮೈದಾನಗಳು.
a. ಭಾರತವು ದ್ವೀಪಗಳನ್ನು ಹೊರತುಪಡಿಸಿ 6100 ಕಿ .ಮೀ ಉದ್ದವಾದ ಕರಾವಳಿಯನ್ನು ಒಳಗೊಂಡಿದೆ.
b. ಪೂರ್ವ ತೀರದಲ್ಲಿ ಉಪ್ಪು ನೀರಿನಿಂದ ನಿರ್ಮಿತವಾದ ಸರೋವರಗಳಾದ ಒಡಿಸ್ಸಾದ "ಚಿಲ್ಕಾ" ಹಾಗು ತಮಿಳುನಾಡಿನ "ಪುಲಿಕಾಟ್" ಸರೋವರಗಳು ಮುಖ್ಯವಾಗಿದೆ.
c. ಭಾರತಕ್ಕೆ ಸೇರಿದ ಒಟ್ಟು 247 ದ್ವೀಪಗಳಿವೆ .ಅವುಗಳಲ್ಲಿ 204 ದ್ವೀಪಗಳು ಬಂಗಾಳಕೊಲ್ಲಿಯಲ್ಲೂ ಮತ್ತು 43 ದ್ವೀಪಗಳು ಅರಬ್ಬೀ ಸಮುದ್ರದಲ್ಲಿವೆ.
16. ಭಾರತದ ಒಟ್ಟು ಮಳೆಯಲ್ಲಿ ಶೇ 75 ರಷ್ಟು ಮಳೆ ನೈಋತ್ಯ ಮಾನ್ಸೂನ್ ನಲ್ಲಿ ಸುರಿಯುತ್ತದೆ.
17. ಭಾರತದ ಸರಾಸರಿ ಮಳೆಯ ಪ್ರಮಾಣ 118 C . M .
18.ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ "ರೂಯ್ಲಿ " ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ, ವಾರ್ಷಿಕ ಸರಾಸರಿ ಮಳೆಯೂ 8.3 C . M .
19. ಮೇಘಾಲಯದ ಮಾಸಿನ್ರಾಮ್ ದೇಶದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಹಾಗು ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವು ಹೌದು .
20. ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ, ಅಸ್ಸಾಂ ಹಾಗು ಪೂರ್ವ ರಾಜ್ಯಗಳು ಹಾಗು ಪಶ್ಚಿಮ ಬಂಗಾಳ ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳು.
21. ರಾಜಸ್ತಾನ್ ಥಾರ್ ಮರುಭೂಮಿ ,ಪಂಜಾಬ್ , ಹರಿಯಾಣ,ಗುಜರಾತನ ಕಚ್ ,ಜಮ್ಮು ಮತ್ತು ಕಾಶ್ಮೀರ ,ಮಹಾರಾಷ್ಟ್ರದ ಪೂರ್ವಭಾಗ ,ಕರ್ನಾಟಕದ ಒಳನಾಡು ಇವು ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶಗಳಾಗಿವೆ.
22. ಭಾರತದ ಮಣ್ಣುಗಳು
ಭಾರತದಲ್ಲಿ ಮಣ್ಣಿನ ವಿಧಗಳು
A. ಮೆಕ್ಕಲು ಮಣ್ಣು
B. ಕಪ್ಪು ಮಣ್ಣು
C.ಕೆಂಪು ಮಣ್ಣು
D.ಜಂಬಿಟ್ಟಿಗೆ ಮಣ್ಣು (ಲ್ಯಾಟ್ ರೈಟ್ )ಮಣ್ಣು
E.ಮರುಭೂಮಿ ಮಣ್ಣು
F.ಪರ್ವತ ಮಣ್ಣು
A. ಮೆಕ್ಕಲು ಮಣ್ಣು
ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎನ್ನುವರು
ಇದು ಭಾರತದಾದ್ಯಂತ ಸುಮಾರು 7.7 ದಶಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಕಂಡು ಬರುತ್ತದೆ .
ಮುಖ್ಯವಾಗಿ ಉತ್ತರಪ್ರದೇಶ,ಬಿಹಾರ,ಪಶ್ಚಿಮ ಬಂಗಾಳ,ಒಡಿಸ್ಸಾ,ಪಂಜಾಬ್,ಹರಿಯಾಣ,ಅಸ್ಸಾಂ ರಾಜ್ಯಗಲ್ಲಿ ಹೆಚ್ಚು ಕಂಡು ಬರುತ್ತದೆ.
B. ಕಪ್ಪು ಮಣ್ಣು
ಕಪ್ಪು ಮಣ್ಣನ್ನು "ರೇಗೂರ್ ಮಣ್ಣು"ಎಂದೂ ಕರೆಯಲಾಗುತ್ತದೆ.
ಇದು ಹತ್ತಿ ಬೆಳೆಯಲು ಸೂಕ್ತವಾಗಿರುತ್ತದೆ ಹಾಗು ಸರಿಸುಮಾರು 5.46 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಕಂಡುಬರುತ್ತದೆ.
ಈ ಮಣ್ಣು ಅಗ್ನಿ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿದೆ.
ಇದು ಮಹಾರಾಷ್ಟ್ರ,ಗುಜರಾತ್,ಮಧ್ಯಪ್ರದೇಶ,ಆಂಧ್ರಪ್ರದೇಶ ಪಶ್ಚಿಮ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಈ ಮಣ್ಣು ಕಬ್ಬಿಣ ಸುಣ್ಣ ಹಾಗು ಮೆಗ್ನೇಷಿಯಂ ಕಾರ್ಬೊನೇಟ್ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ
C.ಕೆಂಪು ಮಣ್ಣು
ಈ ಮಣ್ಣು ಸುಮಾರು 5.18 ಲಕ್ಷ ಚ . ಕಿ .ಮೀ ಪ್ರದೇಶದಲ್ಲಿ ಕಂಡುಬರುತ್ತದೆ.
ದಕ್ಷಿಣದಲ್ಲಿ ಕನ್ಯಾಕುಮಾರಿ ಇಂದ ಉತ್ತರದಲ್ಲಿ ಮಧ್ಯಪ್ರದೇಶದ ಝಾನ್ಸಿಯವರೆಗೆ ಹಬ್ಬಿದೆ .
ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ರಾಗಿ,ಹೊಗೆಸೊಪ್ಪು ಮತ್ತು ಎಣ್ಣೆಕಾಳುಗಳು.
D.ಜಂಬಿಟ್ಟಿಗೆ ಮಣ್ಣು (ಲ್ಯಾಟ್ ರೈಟ್ )ಮಣ್ಣು
ಜಂಬಿಟ್ಟಿಗೆ ಮಣ್ಣು ಸಾಮಾನ್ಯವಾಗಿ 200 ಸೆಂ .ಮೀ ಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜಂಬಿಟ್ಟಿಗೆ ಮಣ್ಣಿನಲ್ಲಿ ಫಲವತ್ತತೆ ಅತಿ ಕಡಿಮೆ ಇರುತ್ತದೆ.
ಇದು ಭಾರತದಲ್ಲಿ ಸುಮಾರು 2.48 ಲಕ್ಷ ಚ. ಕಿ .ಮೀ ಪ್ರದೇಶದಲ್ಲಿ ಕಂಡುಬರುತ್ತದೆ.
ಪಶ್ಚಿಮ ಘಟ್ಟಗಳು ,ವಿಂಧ್ಯ,ಸಾತ್ಪುರ ಮತ್ತು ರಾಜಮಹಲ್ ಬೆಟ್ಟಗಳು ಹಾಗೂ ಪೂರ್ವಾಚಲ ಪ್ರದೇಶಗಳಲ್ಲಿ ಈ ಮಣ್ಣು ವ್ಯಾಪಕವಾಗಿ ಕಂಡುಬರುತ್ತದೆ.
ಇದು ಕಾಫಿ, ಟೀ ಮುಂತಾದ ತೋಟಗಾರಿಕೆ ಬೆಳೆಗಳಿಗೆ ಬಹು ಉಪಯುಕ್ತವಾಗಿದೆ.
E.ಮರುಭೂಮಿ ಮಣ್ಣು
ಅತಿ ಕಡಿಮೆ ಮಳೆ ಮತ್ತು ಅಧಿಕ ಉಷ್ಣಾಂಶದ ಪ್ರದೇಶದಲ್ಲಿ ಮರಳು ಮಣ್ಣು ನಿರ್ಮಾಣಗೊಳ್ಳುತ್ತದೆ.
ಇದು ಭಾರತದಲ್ಲಿ ಸುಮಾರು 1.4 ಲಕ್ಷ ಚ. ಕಿ .ಮೀ ಪ್ರದೇಶದಲ್ಲಿ ಹರಡಿದೆ.
ಸಜ್ಜೆ, ಖರ್ಜೂರ ಇತ್ಯಾದಿ ಬೆಲೆ ಇಲ್ಲಿ ಬೆಳೆಯಬಹುದು.
ಭಾರತದ ವಾಯುವ್ಯ ಭಾಗದ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಹಾಗೂ ಪಶ್ಚಿಮದ ಗುಜರಾತ್ನ ಕಛ್ ಪ್ರದೇಶ ಹಾಗೂ ಅರಾವಳಿ ಶ್ರೇಣಿಯ ಪಶ್ಚಿಮ ಭಾಗದಲ್ಲಿ ಹರಡಿದೆ.
F.ಪರ್ವತ ಮಣ್ಣು
ಕೊಳೆತ ಜೈವಿಕಾಂಶಗಳನ್ನು ಎ ಮಣ್ಣು ಅಧಿಕ ಪ್ರಮಾಣದಲ್ಲಿ ಹೊಂದಿದೆ.
ಇದು ಸಾರಜನಕ ಮತ್ತು ಸಾವಯವ ಅವಶೇಷಗಳನ್ನು ಹೆಚ್ಚಾಗಿ ಒಳಗೊಂಡಿರುತ್ತದೆ.
ಕಾಫಿ, ಚಹಾ ,ಸಂಬಾರ ಪದಾರ್ಥಗಳು ಮತ್ತು ಹಣ್ಣುಗಳಿಗೆ ಸೂಕ್ತವಾಗಿದೆ.
ಹಿಮಾಲಯದ ಪಾದ ಬೆಟ್ಟಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಪರ್ವತ ಪ್ರದೇಶಗಳಲ್ಲಿ ಈ ಮಣ್ಣು ಹರಡಿದೆ.
23. ಅತಿ ಸೂಕ್ಷ್ಮ ಕಣಗಳಿಂದ ಕೂಡಿರುವ ಮಣ್ಣನ್ನು ಜೇಡಿ (Clay) ಮಣ್ಣು ಎಂದು ಕರೆಯುವರು.
24. ಮಣ್ಣುಗಳ ಉತ್ಪತ್ತಿ,ಕನಾರಚನೆ,ರಾಸಾಯನಿಕ ಸಂಯೋಜನೆ ಹಾಗೂ ಅದರ ಬದಲಾವಣೆ ಮುಂತಾದವುಗಳ ಅಧ್ಯಯನವನ್ನು "ಮಣ್ಣಿನ ಶಾಸ್ತ್ರ" (Pedology) ಎಂದು ಕರೆಯುವರು.
25. ಭಾರತದಲ್ಲಿ ಮಧ್ಯಪ್ರದೇಶವು ಹೆಚ್ಚು ಅರಣ್ಯವನ್ನು ಹೊಂದಿದ್ದಾರೆ ಹರ್ಯಾಣ ರಾಜ್ಯವು ಕೊನೆ ಸ್ಥಾನದಲ್ಲಿದೆ ಹಾಗೆ ಕರ್ನಾಟಕವು 13 ನೇ ಸ್ಥಾನದಲ್ಲಿದೆ.
26. ಭಾರತದಲ್ಲಿ ಸುಮಾರು 523 ವನ್ಯಜೀವಿಧಾಮಗಳಿವೆ.
ಪ್ರಮುಖವಾದವು....
ತಮಿಳುನಾಡು-ಅಣ್ಣಾಮಲೈ,ಕೊಯಿಮತ್ತೂರು,ನೀಲಗಿರಿ.
ಪಶ್ಚಿಮ ಬಂಗಾಳ - ಮದಾರಿಹಾತ್, ಜಾಲ್ದಾಪಾರ.
ರಾಜಸ್ಥಾನ - ಭಾರತಪುರ,ಕಿವೋಲ ಡಿವೂ ಪಕ್ಷಿಧಾಮ.
ಹರಿಯಾಣ - ಸುಲ್ತಾನಪುರ, ಗುರೆ ಗಾoವ
ಪಂಜಾಬ್ - ಬೀರ್ ಮೊತಿಬಾಗ್, ಪಟಿಯಾಲಾ.
ಆಂಧ್ರಪ್ರದೇಶ - ಗುಂಟೂರು, ನಾಗಾರ್ಜುನ ಸಾಗರ.
27. ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.
ಹಾಗೆ ದೇಶದ ಪ್ರಮುಖ ರಾಷ್ಟೀಯ ಉದ್ಯಾನವನಗಳು.....
a. ಕಾಜಿರಂಗ National park, ಸಿಬ್ ಸಾಗರ, - ಅಸ್ಸಾಂ
b. ಸುಂದರಬನ,24 ಪರಗಣ ಜಿಲ್ಲೆ - ಪಶ್ಚಿಮ ಬಂಗಾಳ
c. ಹಜಾರೀಭಾಗ National park - ಬಿಹಾರ
d. ಗಿರ್ National park, ಜಗನ್ನಾಥ - ಗುಜರಾತ್
e. ಕನ್ಹಾ ರಾಷ್ಟ್ರೀಯ ಉದ್ಯಾನವನ,ಮಾಂಡ್ಯ ಮತ್ತು ಬಾಲಘಾಟ್ - ಮಧ್ಯಪ್ರದೇಶ.
f. ತಾಂಡೋವಾ ರಾಷ್ಟ್ರೀಯ ಉದ್ಯಾನವನ, ಚಂದ್ರಾಪುರ - ಮಹಾರಾಷ್ಟ್ರ.
28. ಭಾರತದಲ್ಲಿ ಜೈವಿಕ ವ್ಯವಸ್ಥೆಯನ್ನು ಕಾಪಾಡಲು 18 ಜೈವಿಕ ವಲಯಗಳನ್ನು ಸ್ಥಾಪಿಸಲಾಗಿದೆ.
ಅವು ನೀಲಗಿರಿ, ನಂದಾದೇವಿ, ನೋಕ್ರೆಕ್, ಗ್ರೇಟ್ ನಿಕೋಬಾರ್ ,ಮನ್ನಾರ್, ಆಖಾತ, ಮನಾಸ್ ಸುಂದರಬನ, ಸಿಮಿಲಿಪಾಲ್, ಕಾಂಚನಗಂಗಾ, ಅಮರಕಂಟಕ, ಶೀತ ಮರುಭೂಮಿ (ಹಿಮಾಚಲ ಪ್ರದೇಶ),ಪನ್ನಾ ಮತ್ತು ಶೇಷಾಚಲಂ ನೀಲಗಿರಿ ಸಂರಕ್ಷಣಾ ವಲಯ.
29. ಭಾರತದಲ್ಲಿ 99 ರಾಷ್ಟ್ರೀಯ ಉದ್ಯಾನವನ ಮತ್ತು 523 ವನ್ಯಜೀವಿ ಧಾಮಗಳಿವೆ.
30. 70 ಸಸ್ಯೋದ್ಯಾನ (ಬಟಾನಿಕಲ್ ಗಾರ್ಡನ್) ಗಳಿವೆ
31. 275 ಪ್ರಾಣಿ ಸಂಗ್ರಹಾಲಯಗಳಿವೆ.
32. 104 ಜೌಗು ಹಾಗೂ ತೇವಯುಕ್ತ ಜೈವಿಕ ಸಂರಕ್ಷಣಾ ವಲಯಗಳಿವೆ.
33. ಭಾರತದಲ್ಲಿ ಪ್ರಪಂಚದ 17 ಮಹಾಜೀವ ವೈವಿಧ್ಯತೆಯ ರಾಷ್ಟ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
34. ಪ್ರಪಂಚದ ಶೇ 8 ರಷ್ಟು ಜೀವ ವೈವಿದ್ಯತೆಯನ್ನು ಭಾರತವು ಹೊಂದಿದೆ.
35. 1 ಹೆಕ್ಟೇರ್ = 2.47 ಎಕರೆ
36. ದೇಶದಲ್ಲಿ ಬಳಕೆಗೆ ದೊರೆಯುವ ಒಟ್ಟೂ ಜಲಸಂಪತ್ತಿನ ಪ್ರಮಾಣ ಗರಿಷ್ಟ 140 ದಶಲಕ್ಷ ಹೆಕ್ಟೇರ್. ಆದರೆ ಅಭಿವೃದ್ದಿ ಪಡಿಸಿರುವ ನಿವ್ವಳ ನೀರಾವರಿ ಕ್ಷೇತ್ರ 62.2 ದಶಲಕ್ಷ ಹೆಕ್ಟೇರ್ ಮಾತ್ರ.
37. ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ನೀರಾವರಿ ಕ್ಷೇತ್ರವನ್ನು ಹೊಂದಿದೆ ನಂತರದಲ್ಲಿ ಚೈನಾ ಇದೆ.
38. ಭಾವಿ (ತೆರೆದ ಭಾವಿ ಮತ್ತು ಕೊಳವೆ ಭಾವಿ) ನೀರಾವರಿಯು ದೇಶದಲ್ಲಿ ಅತಿ ಹೆಚ್ಚು ಕೃಷಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
39. ಕುಸೆಕ್ಸ್ (Cusecs)-Cubic feet per second ಅಂದರೆ ಪ್ರತಿ ಸೆಕೆಂಡಿಗೆ ಹರಿಯುವ ಘನ ಅಡಿ ನೀರು.
40. ಕಾಲುವೆ ನೀರಾವರಿಯು ಭಾರತ್ದ 16.5 ದಶ ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರುಣಿಸುತ್ತದೆ.
41. ದಾಮೋದರ ನದಿ ಕಣಿವೆ ಯೋಜನೆಯು ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆ. ಇದು ಬಿಹಾರ ಮತ್ತು ಪಶ್ಚಿಮ ಬಂಗಾಳದ ಯೋಜನೆ ಹಾಗೂ ಇದರಿಂದ ಜಾರ್ಖಂಡ್ ಕೂಡ ಉಪಯೋಗವನ್ನು ಕಂಡಿದೆ.
42. ದಾಮೋದರ ನದಿಯು ಪಶ್ಚಿಮ ಬಂಗಾಳದ ಕಣ್ಣೇರಿನ ನದಿ ಎಂದು ಕರೆಯಲಾಗುತ್ತದೆ.
43. ಭಾಕ್ರಾ ನಂಗಲ್ (ಸಟ್ಲೆಜ಼್ ನದಿ, ಗೋವಿಂದಸಾಗರ ಜಲಾಶಯ) ಯೋಜನೆ ಇದು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೊದ್ದೇಶ ನದಿ ಕಣಿವೆ ಯೋಜನೆ. ಇದು ಪಂಜಾಬ್,ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳ ಸಂಯುಕ್ತ ಯೋಜನೆ.
44. ಕೋಸಿ ಯೋಜನೆಯು ಬಿಹಾರದ ಕಣ್ಣೇರಿನ ನದಿಯಾದ ಕೋಸಿ ನದಿಗೆ ಭಾರತ ಮತ್ತು ನೇಪಾಳ ರಾಷ್ಟ್ರಗಳ ಜಂಟಿ ಯೋಜನೆಯಾಗಿದೆ ಇದಕ್ಕೆ ಭಾರತ ಮತ್ತು ನೇಪಾಳ ಗಡಿಯಲ್ಲಿ ಹನುಮಾನ ನಗರ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.
45. ಹಿರಾಕುಡ್ ಯೋಜನೆಯು ಒರಿಸ್ಸಾದ ಕಣ್ಣೇರಿನ ನದಿಯಾದ ಮಹಾನದಿಗೆ ನಿರ್ಮಿಸಲಾಗಿದೆ ಇದು ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟೆಯನ್ನು ಸಾಂಬಾಲಾಪುರ ಜಿಲ್ಲೆಯಲ್ಲಿ ಕಟ್ಟಲಾಗಿದೆ.
46. ತುಂಗಭದ್ರಾ ಯೋಜನೆಯು ಕರ್ನಾಟಕ ಮತ್ತು ಆಂದ್ರಪ್ರದೇಶದ ಸಂಯುಕ್ತ ಯೋಜನೆಯಾಗಿದೆ ಇದಕ್ಕೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಲ್ಲಾಪುರ ಎಂಬಲ್ಲಿ ಪಂಪಾಸಾಗರ ಎಂಬ ಜಲಾಶಯವನ್ನು ನಿರ್ಮಿಸಲಾಗಿದೆ.
47. ನಾಗಾರ್ಜುನ ಸಾಗರ ಯೋಜನೆಯಲ್ಲಿ ಆಂಧ್ರಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾನದಿಗೆ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
48. ಕೃಷ್ಣಾ ಮೇಲ್ದಂಡೆ ಯೋಜನೆಯು ಕರ್ನಾಟಕದ ದೊಡ್ಡ ಯೋಜನೆಯಾಗಿದೆ. ಇದಕ್ಕೆ ಬಿಜಾಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ "ಲಾಲ್ ಬಹದ್ದೂರ್ ಶಾಸ್ತ್ರಿ" ಜಲಾಶಯ ನಿರ್ಮಿಸಲಾಗಿದೆ. ಹಾಗೂ ನಾರಾಯಣಪುರ ಬಳಿ ಮತ್ತೊಂದು ಅಣೆಕಟ್ಟು "ಬಸವ ಸಾಗರ" ನಿರ್ಮಿಸಲಾಗಿದೆ.
49. ಏಷ್ಯಾ ಖಂಡವು ಪ್ರಪಂಚದ ಒಟ್ಟೂ ಮೇಲ್ಮೈ ವಿಸ್ತೀರ್ಣದಲ್ಲಿ ಶೇ. 33 ಭಾಗವನ್ನು ಹೊಂದಿದೆ. ಮತ್ತು ಸಂಪೂರ್ಣ ಉತ್ತರ ಗೋಲಾರ್ದ ದಲ್ಲಿದೆ.
50. ಏಷ್ಯಾ ಖಂಡದ ಮೂರು ಕಡೆ ಸಾಗರಗಳು ಅಂದರೆ ಉತ್ತರದಲ್ಲಿ ಆರ್ಕ್ಟಿಕ್ ,ಪೂರ್ವದಲ್ಲಿ ಪೆಸಿಫಿಕ್ ಮತ್ತು ದಕ್ಷಿಣದಲ್ಲಿ 51. 51. ಹಿಂದೂ ಮಹಾಸಾಗರ ಮತ್ತು ಪಶ್ಚಿಮಕ್ಕೆ ಭೂಬಾಗವಾದ ಯುರೋಪ್ ಖಂಡವಿದೆ.
52. ಏಷ್ಯಾ ಮತ್ತು ಯುರೋಪ್ ಖಂಡಗಳ ಗಡಿಯು ಯೂರಲ್ ಪರ್ವತ, ಕ್ಯಾಸ್ಪಿಯನ್ ಸಮುದ್ರ , ಕಕಾಸಸ್ ಪರ್ವತ ಮತ್ತು 53. ಕಪ್ಪು ಸಮುದ್ರಗಳ ಮುಖಾಂತರ ಹಾಯ್ದುಹೋಗುತ್ತದೆ.
54. ಯುರೋಪ್ ಮತ್ತು ಏಷ್ಯಾ ಖಂಡಗಳನ್ನು ಒಟ್ಟುಗೂಡಿಸಿ "ಯುರೇಷ್ಯಾ" ಎನ್ನುತ್ತಾರೆ.
55. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಗಡಿಯು ಸೂಯೆಜ್ ಕಾಲುವೆ ಹಾಗೂ ಏಷ್ಯಾ ಮತ್ತು ಆಸ್ಟ್ರೇಲಿಯಾ ಗಡಿ ರೇಖೆಯು ನ್ಯೂಗಿನಿ ಮತ್ತು ಆಸ್ಟ್ರೇಲಿಯಾಗಳ ನಡುವೆ ಹಾಯ್ದು ಹೂಗುತ್ತದೆ.
56. ಏಷ್ಯಾದಲ್ಲಿ 48 ದೇಶಗಳಿವೆ.
57. ಏಷ್ಯಾದ ವೈವಿದ್ಯ ಸಸ್ಯವರ್ಗಗಳನ್ನು 7 ವಿಧಗಳಾಗಿ ವಿಂಗಡಿಸಲಾಗಿದೆ .ಅವು
1. ಟoಡ್ರಾ ಸಸ್ಯವರ್ಗ- ಇದು ಆರ್ಕ್ಟಿಕ್ ಕರಾವಳಿಯ ಉದ್ದಕ್ಕೂ ಕಂಡುಬರುತ್ತದೆ ಇಲ್ಲಿ ಪಾಚಿ ಮತ್ತು ಶಿಲಾವಲ್ಕಗಳು ಕಂಡುಬರುತ್ತದೆ.
2. ಕೊನಿಫೆರೆಸ್ ಅರಣ್ಯಗಳು -ಟoಡ್ರಾ ಪ್ರದೇಶದಲ್ಲಿ ಹಂಚಿಕೆಯಾಗಿದೆ .ಇವನ್ನು "ತೈಗ ಅರಣ್ಯ"ಎಂತಲೂ ಕರೆಯಲಾಗಿದೆ. ಫರ್, ಸ್ಟ್ರೂಸ್, ಲಾರ್ಚ್ ಮತ್ತು ಪೈನ್ ಇಲ್ಲಿ ಬೆಳೆಯುವ ಮುಖ್ಯ ಮರಗಳು.
3. ಸಮಶೀತೋಷ್ಣವಲಯದ ಹುಲ್ಲುಗಾವಲು ( ಸ್ಟೆಪ್ಪಿ) - ಮಧ್ಯ ಏಷ್ಯಾ ಮತ್ತು ಮರುಭೂಮಿ ಮತ್ತು ಅರೆಮರುಭೂಮಿ ಅಂಚುಗಳಲ್ಲಿ ಕಂಡುಬರುತ್ತದೆ.
4. ಮರುಭೂಮಿ ಸಸ್ಯವರ್ಗ - ಇದು ಇರಾನ್, ಅರೇಬಿಯಾ, ಥಾರ್ ಮರುಭೂಮಿಗಳಲ್ಲಿ ಕಂಡುಬರುತ್ತದೆ. ಇಲ್ಲಿ ಕುರುಚಲು ಮತ್ತು ಹುಲ್ಲುಗಳು ಮಾತ್ರ ಬೆಳೆಯುತ್ತವೆ ಮತ್ತು ಓಯಾಸಿಸ್ ಗಳ ಬಳಿ ಖರ್ಜೂರ ಮತ್ತು ತಾಳೆ ಜಾತಿಯ ಮರಗಳು ಕಂಡು ಬರುತ್ತದೆ.
5. ಮಾನ್ಸೂನ್ ಅರಣ್ಯಗಳು - ದಕ್ಷಿಣ, ನೈರುತ್ಯ ಮತ್ತು ಪೂರ್ವ ಏಷ್ಯಾ ಭಾಗದಲ್ಲಿ ಕಂಡು ಬರುತ್ತದೆ.
6. ಸಮಭಾಜಕ ವೃತ್ತ ಪ್ರದೇಶದ ಅರಣ್ಯಗಳು - ಇದು ಹೆಚ್ಚಾಗಿ ಪೂರ್ವ ಇಂಡೀಸ್ ಮತ್ತು ಅಧಿಕ ಮಳೆ ಬೀಳುವ ಮಾನ್ಸೂನ್ ಪ್ರದೇಶದಲ್ಲಿ ಕಂಡು ಬರುತ್ತದೆ.
7. ಮೆಡಿಟರೇನಿಯನ್ ಸಸ್ಯವರ್ಗ - ಏಷ್ಯಾದ ನೈರುತ್ಯ ಭಾಗಗಳಲ್ಲಿ ಕಂಡು ಬರುತ್ತದೆ.
58. ಕಲ್ಲಿದ್ದಲು ನಿಕ್ಷೇಪ ಮತ್ತು ಉತ್ಪಾದನೆಯಲ್ಲಿ ಚೈನಾ ಇಡೀ ವಿಶ್ವದಲ್ಲೇ ಪ್ರಥಮ.
59. ಸೌದಿ ಅರೇಬಿಯಾ ಪ್ರಪಂಚದಲ್ಲೇ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ದೇಶ.
60. ಪೆಟ್ರೋಲಿಯಂ (Petroleum) ಶಬ್ದವು "Petra" ಎಂದರೆ "ಕಲ್ಲು" ಮತ್ತು "Oleum" ಎಂದರೆ "ತೈಲ" ಎಂಬ ಎರಡು ಲ್ಯಾಟಿನ್ ಭಾಷಾ ಪದಗಳ ಸಂಯೋಜನೆ.
61. ಚೈನಾ ದೇಶದ ಪ್ರಮುಖ ಕೈಗಾರಿಕಾ ಪ್ರದೇಶಗಳೆಂದರೆ
a. ಮಂಚೂರಿಯಾ - ಉಕ್ಕು, ಇಂಜಿನಿಯರಿಂಗ್,ರಾಸಾಯನಿಕ ಕೈಗಾರಿಕೆ.
b. ಬೀಜಿಂಗ್ - ಇಂಜಿನಿಯರಿಂಗ್, ಹಡಗು ,ಜವಳಿ , ರಾಸಾಯನಿಕ.
c. ಶಾನ್ಶಿ-ಬಾವಟೊವ್ - ಕಬ್ಬಿಣ, ಉಕ್ಕು , ಕೃಷಿ ಉಪಕರಣಗಳು.
d. ಚಾಂಗ್ ಜಿಯಾಂಗ್ - ಜವಳಿ, ಹಡಗು ಮತ್ತು ಉಕ್ಕು.
e. ವುಹಾನ್ - ಲೋಹ ತಯಾರಿಕೆ ಮತ್ತು ಬೃಹತ್ ಕೈಗಾರಿಕಾ ಸರಕು ತಯಾರಿಕೆ.
62. ಭಾರತದ ಪ್ರಮುಖ ಕೈಗಾರಿಕಾ ನೆಲೆಗಳು
1. ಹೂಗ್ಲಿ - ಕೋಲ್ಕತ್ತಾ ಪ್ರದೇಶ
2. ಮುಂಬೈ- ಪುಣೆ ಪ್ರದೇಶ
3. ಅಹ್ಮದಾಬಾದ್ - ವಡೋದರಾ
4. ಮದುರೈ - ಕೊಯಮತ್ತೂರ್ - ಬೆಂಗಳೂರು
5. ಛೋಟನಾಗಪುರ
6. ದೆಹಲಿ - ಮೀರತ್
7. ವಿಶಾಖಪಟ್ಟಣ
8. ಕೊಲ್ಲಂ - ತಿರುವನಂತಪುರ
63. ಪ್ರಪಂಚದ ಒಟ್ಟೂ ಜನಸಂಖ್ಯೆಯ ಶೇ. 60 ಭಾಗದಷ್ಟು ಜನ ಏಷ್ಯಾ ಖಂಡ ದಲ್ಲಿದ್ದಾರೆ.
64. ಏಷ್ಯಾದ ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿ. ಮೀ. ಗೆ 96 ಜನರು.
65. ವಿಶ್ವದ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ನಾ ಎತ್ತರ 8848 ಮೀ.
66. ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಮೃತ ಸಮುದ್ರ.
67. ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಕಾರಾಕೊರಂ ಪರ್ವತ ಸರಣಿಯಲ್ಲಿವೆ.
68. ಟಿಬೆಟ್ ಪ್ರಪಂಚದ ಅತಿ ಎತ್ತರದ ಪ್ರಸ್ಥಭೂಮಿ ಇದನ್ನು ಪ್ರಪಂಚದ ಮೇಲ್ಛಾವಣಿ ಎನ್ನುವರು.
69. ಕ್ಯಾಸ್ಪಿಯನ್ ಸಮುದ್ರ ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿಯಾಗಿದೆ.
70. ದಕ್ಷಿಣ ಸೈಬೀರಿಯಾದಲ್ಲಿರುವ ಬೈಕಲ್ ಸರೋವರವು ಪ್ರಪಂಚದಲ್ಲೇ ಆಳವುಳ್ಳದ್ದು.
71. ಕ್ಷೇತ್ರ ಮತ್ತು ಜನಸಂಖ್ಯೆಯಲ್ಲಿ ಏಷ್ಯಾದ ಚಿಕ್ಕ ದೇಶ ಮಾಲ್ಡೀವ್ಸ್.
ಸಾಮಾನ್ಯ ವಿಜ್ಞಾನ
1. ಜೀವಿಗಳು ವಾಸಿಸುವ ಭೂ ಪ್ರದೇಶವನ್ನು "ಭೂ ಆವಾಸ" (terrestrial habitat) ಮತ್ತು ಜಲ ಸಂಚಯಗಳಾದ ಹೊಂಡ , ಕೆರೆ, ಕಟ್ಟೆ, ಚಿಲುಮೆ, ಹಳ್ಳ, ನದಿ ಮತ್ತು ಸಮುದ್ರಗಳನ್ನು "ಜಲ ಆವಾಸ" (aquatic habitat) ಎನ್ನುವರು.
2. ನೀರಿನಲ್ಲಿ ಕರಗಿರುವ ಉಪ್ಪು ಮುಂತಾದ ರಾಸಾಯನಿಕಗಳನ್ನು ನೀರಿನ ಲವಣಾಂಶ (salinity) ಎನ್ನುವರು.
3. ನೀರಿನ ಲವಣಾಂಶಗಳ ಪ್ರಮಾಣವನ್ನು ಅನುಸರಿಸಿ ನೀರನ್ನು ಮೂರು ರೀತಿ ಗುರುತಿಸಲಾಗುತ್ತದೆ ಅದು
1. ಸಿಹಿ ನೀರು (freshwater) ಲವಣಾಂಶ ಶೇ 1 ಕ್ಕಿಂತ ಕಡಿಮೆ
2.ಸಮುದ್ರದ ನೀರು (marine water) ಲವಣಾಂಶ ಶೇ 3.5 ಕ್ಕಿಂತ ಹೆಚ್ಚು
3.ಅಳಿವೆ ನೀರು (estuarine water) ಲವಣಾಂಶ ಸಿಹಿ ನೀರು ಮತ್ತು ಸಮುದ್ರ ನೀರಿನ ನಡುವಿನ ಸ್ಥಿತಿ.
4. ದ್ಯುತಿ ಸಂಶ್ಲೇಷಣ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳಿಗೆ "ಸ್ವ ಪೋಷಿತಗಳು" ಎನ್ನುತ್ತಾರೆ.
5. ಶರೀರದಲ್ಲಿರುವ ದ್ರವಾಗಳೆಂದರೆ ರಕ್ತ, ದುಗ್ದರಸ (Lymph - ರಕ್ತದಂತೆಯೇ ಇದ್ದು ಕೆಂಪು ಬಣ್ಣದ ರಕ್ತ ಕಣಗಳು ಇಲ್ಲದೆ ಬಣ್ಣವಿಲ್ಲದ ದ್ರವ), ಅಂಗಾಂಶದ ದ್ರವ (ಜೀವಕೋಶಗಳನ್ನು ಸುತ್ತುವರಿದಿರುವ ದ್ರವ)
6. ಆಕಶೇರುಕಗಳು(Inverte brates) - ಬೆನ್ನೆಲುಬು ಇಲ್ಲದ ಪ್ರಾಣಿಗಳು : ಸ್ಪಾಂಜು ಪ್ರಾಣಿ, ಹೈಡ್ರಾ, ಹವಳದ ಹುಳು, ಅಂಬಲಿ ಮೀನು, ಸಮುದ್ರ ಕಮಲ, ಸೀಗಡಿ ಮೀನು, ನೀರು ಚೇಳು, ವಾಟರ್ ಬೀಟಲ್, ಸಿಂಪೆ ಹುಳು, ಕಪ್ಪೆ ಚಿಪ್ಪು ಹುಳು, ಮುತ್ತಿನ ಚಿಪ್ಪು ಹುಳು, ನಕ್ಷತ್ರ ಮೀನು, ಆಕ್ಟೋಪಸ್ ಇತ್ಯಾದಿ.
7. ಕಶೇರುಕಗಳು (vertebrates) - ಬೆನ್ನೆಲುಬು ಇರುವ ಪ್ರಾಣಿಗಳು : ಮೀನು , ಕಪ್ಪೆ, ಆಮೆ, ಮೊಸಳೆ, ತಿಮಿಂಗಿಲ, ಡಾಲ್ಫಿನ್, ಸೀಲ್ಸ್, ವಾಲ್ರುಸ್.
8. ಜೌಗು ಪ್ರದೇಶದಲ್ಲಿ ಬೆಳೆಯುವ ಸಸ್ಯಗಳಿಗೆ "ಜಲ ಸಸ್ಯಗಳು" (hydrophytes)
9. ಸಾಕಷ್ಟು ಮಳೆ ಬೀಳುವ ಆದರೆ ನೀರು ನಿಂತು ಜೌಗು ಆಗದ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳಿಗೆ "ಮೆಸೋಫೈಟ್ಸ್ " (mesophytes)
10. ಕಡಿಮೆ ಮಳೆ ಬೀಳುವ ಮರುಭೂಮಿ ಯಂತಹ ಒಣ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು "ಶುಷ್ಕ ಸಸ್ಯಗಳು" (xerophytes)
11. ಅತಿ ಕಡಿಮೆ ಉಷ್ಣತೆಯ ಮಂಜುಗೆಡ್ಡೆ ಆವರಿಸಿರುವ ಧ್ರುವ ಪ್ರದೇಶದ ಭಾಗದಲ್ಲಿ ಬೆಳೆಯುವ ಸಸ್ಯಗಳಿಗೆ "ಧ್ರುವ ಪ್ರದೇಶದ ಸಸ್ಯಗಳು" (cryophytes) ಎನ್ನುವರು.
12. ಮಳೆಯ ಪ್ರಮಾಣವನ್ನು ಆಧರಿಸಿ ಭೂ ಆವಾಸದಲ್ಲಿ ಮೂರು ಬಗೆಯ ಸಸ್ಯರಾಶಿಯ ವಿನ್ಯಾಸ ಕಾಣುತ್ತೇವೆ.
ಅವು, ಅರಣ್ಯ ( ಮಳೆಯ ಪ್ರಮಾಣ ವರ್ಷಕ್ಕೆ 200 ರಿಂದ 400 cm), ಹುಲ್ಲುಗಾವಲು (ಮಳೆಯ ಪ್ರಮಾಣ ವರ್ಷಕ್ಕೆ 25 ರಿಂದ 75 cm) ಮತ್ತು ಮರುಭೂಮಿ ಮಳೆಯ ಪ್ರಮಾಣ ವರ್ಷಕ್ಕೆ 25 cm ಗಿಂತ ಕಡಿಮೆ).
13. ಮರಗಳನ್ನು ಕಡಿದು ಅರಣ್ಯವನ್ನು ನಾಶ ಮಾಡುವುದರಿಂದ ಆ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ಕೊಳೆಯುವ ಸೇಂದ್ರಿಯ ವಸ್ತುವಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ ಕ್ರಮೇಣ ಮಣ್ಣು ಮರಳಿನಂತಾಗಿ ಆ ಪ್ರದೇಶವು ಮರಳುಗಾಡು ಆಗುತ್ತದೆ ಈ ಕ್ರಿಯೆಯನ್ನು ಮರುಭೂಮೀಕರಣ (desertification) ಎನ್ನುವರು.
14. ತಿಮಿಂಗಿಲಗಳು ನೀರಿನಲ್ಲಿ ಬದುಕುತ್ತಿದ್ದರು ಅವು ಶ್ವಾಸಕೋಶಗಳ ಮೂಲಕ ಉಸಿರಾಡುತ್ತವೆ.
15. ಇವು ಗಾಳಿಯನ್ನು ತೆಗೆದುಕೊಳ್ಳಲು ನೀರಿನ ಮೇಲ್ಭಾಗಕ್ಕೆ ಬಂದು ತಮ್ಮ ನೆತ್ತಿಯ ಭಾಗದಲ್ಲಿನ ಮೂಗಿನ ರಂದ್ರವನ್ನು ಉಪಯೋಗಿಸುತ್ತದೆ.
16. ಮೀನುಗಳಲ್ಲಿ ಚರ್ಮದ ಮೇಲೆ ಹುರುಪೆಗಳ (scales) ಅಥವಾ ಅಸ್ಥಿತಟ್ಟೆಗಳ (bony plates) ಹೊದಿಕೆ ಇರುತ್ತದೆ.
17. ಬಾವುಲಿಗಳಲ್ಲಿ ಮುಂಗಾಲುಗಳು ಮತ್ತು ಹಿಇಂಗಾಲುಗಳ ನಡುವೆ ಚರ್ಮವು ವಿಸ್ತಾರಗೊಂಡಿರುತ್ತದೆ ಇದನ್ನು ಪಾಟಾಜಿಯಂ (patagium) ಎನ್ನುತ್ತಾರೆ.
18. ಊಸರವಳ್ಳಿ ಯು ಶತ್ರುಗಳಿಂದ ರಕ್ಷಿಸಿಕೊಳ್ಳಲು ತನ್ನ ದೇಹದ ಬಣ್ಣವನ್ನು ಬದಲಿಸುತ್ತದೆ ಇದನ್ನು ಕ್ಯಾಮೋ ಫ್ಲೇಜ಼್ (camouflage) ಎನ್ನುವರು.
19. ಸಸ್ಯಗಳ ಕಾಂಡದ ತುಂಡನ್ನು ನಾಟಿಮಾಡುವುದರ ಮೂಲಕ ಹೊಸ ಸಸ್ಯಗಳನ್ನು ಬೆಳೆಸುವುದಕ್ಕೆ "ಕಾಯಜ ರೀತಿಯ ಸಂತಾನೋತ್ಪತ್ತಿ" ಎನ್ನುವರು.
20. ಸಸ್ಯಗಳ ಎಲೆಗಳು ಕ್ಲೋರೊಪ್ಲ್ಯಾಸ್ಟ್ (ಹರಿದ್ರೇಣು) ಗಳನ್ನು ಒಳಗೊಂಡಿರುತ್ತದೆ ಇವು ದ್ಯುತಿಸಂಶ್ಲೇಷಣೆಯನ್ನು ನಡೆಸುತ್ತದೆ.
21. ಬ್ರಾಯೋಫಿಲಂ (Bryophyllum) ನಂತಹ ಸಸ್ಯದ ಎಲೆಗಳ ಅಂಚಿನಲ್ಲಿ ಮೊಗ್ಗುಗಳು ಇದ್ದು ಈ ಮೊಗ್ಗುಗಳು ನೆಲೆದ ಸಂಪರ್ಕಕ್ಕೆ ಬಂದಾಗ ಮೊಳಕೆಯೊಡೆದು ಬೇರು ಬಿಟ್ಟು ಹೊಸ ಸಸ್ಯಗಳಾಗಿ ಬೆಳೆಯುತ್ತದೆ.
22. ಹೂವಿನಲ್ಲಿ ಕೇಸರಗಳು ಸಂತಾನೋತ್ಪತ್ತಿಯ ಗಂಡು ಭಾಗಗಳಾಗಿವೆ ಮತ್ತು ಶಲಾಕೆಗಳು ಹೆಣ್ಣು ಭಾಗಗಳಾಗಿವೆ.
23. ನಮ್ಮ ಸುತ್ತಲೂ ಇರುವ ವಸ್ತುಗಳು ಪರಮಾಣುಗಳು (atoms) ಎಂದು ಕರೆಯುವ ಸೂಕ್ಷ್ಮಕಣಾಗಳಿಂದಾಗಿವೆ.
24. ಪರಮಾಣುವು ಪ್ರೊಟಾನ್, ನ್ಯೂಟ್ರಾನ್ ಮತ್ತು ಇಲೆಕ್ಟ್ರಾನ್ ಗಳೆಂಬ ಮೂರು ಮೂಲಭೂತ ಕಣಗಳಿಂದಾಗಿದೆ.
25. ಪರಮಾಣುವಿನ ಕೇಂದ್ರ ಭಾಗವನ್ನು ಬೀಜಕೇಂದ್ರ (nucleus) ಎನ್ನುವರು ಮತ್ತು ಬೀಜಕೇಂದ್ರವು ಪ್ರೋಟಾನ್ ಮತ್ತು ನ್ಯೂಟ್ರಾನ್ಗಳಿಂದ ಕೂಡಿದೆ. ಇಲೆಕ್ಟ್ರಾನ್ ಗಳು ಬೀಜಕೇಂದ್ರದ ಸುತ್ತ ವಿವಿದ ದೀರ್ಘ ವೃತ್ತಾಕಾರದ ಕಕ್ಷೆಗಳಲ್ಲಿ ಸುತ್ತುತ್ತವೆ.
26. ವಸ್ತುಗಳಲ್ಲಿರುವ ಪರಮಾಣುಗಳನ್ನು ಆಧರಿಸಿ ಅವುಗಳನ್ನು ಧಾತುಗಳು ಮತ್ತು ಸಂಯುಕ್ತಗಳು ಎಂದು ವರ್ಗೀಕರಿಸಲಾಗಿದೆ.
27. ಒಂದೇ ವಿಧದ ಪರಮಾಣುವಿನಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಧಾತು ಎನ್ನುವರು.
28. ಆಕ್ಸಿಜನ್, ಚಿನ್ನ, ಬೆಳ್ಳಿ, ಕಬ್ಬಿಣ, ತಾಮ್ರ ಮತ್ತು ಅಲ್ಯೂಮಿನಿಯಂ ಧಾತುಗಳಿಗೆ ಉದಾಹರಣೆ. ಸುಮಾರು 90 ಧಾತುಗಳು ನೈಸರ್ಗಿಕವಾಗಿ ದೊರೆತಿವೆ ಮತ್ತು ಕೆಲವು ಧಾತುಗಳನ್ನು ಕೃತಕವಾಗಿ ತಯಾರಿಸಲಾಗಿದೆ.
29. ಎಲ್ಲಾ ಧಾತುಗಳನ್ನು ವ್ಯವಸ್ಥಿತವಾಗಿ ಕೋಷ್ಟಕವೊಂದರಲ್ಲಿ ಮೆಂಡಲೀವ್ ಜೋಡಿಸಿದ್ದಾರೆ ಈ ಕೋಷ್ಟಕವನ್ನು ಮೆಂಡಲೀವ್ ಆವರ್ತಕ ಕೋಷ್ಟಕ ಎನ್ನುವರು.
30. ಎರಡು ಅಥವಾ ಹೆಚ್ಚು ಧಾತುಗಳು ನಿರ್ಧಿಷ್ಟ ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗ ಗೊಂಡು ಉಂಟಾಗುವುದೇ ಸಂಯುಕ್ತ ವಸ್ತು.
31. ಧಾತು ಎಂಬ ಪದವನ್ನು ಮೊದಲು ಬಳಕೆಗೆ ತಂದ ವಿಜ್ಞಾನಿ ರಾಬರ್ಟ್ ಬಾಯಲ್.
32. ಧಾತುವಿನ ವ್ಯಾಖ್ಯೆಯನ್ನು ಮೊದಲು ನೀಡಿದ್ದು ಫ್ರೆಂಚ್ ವಿಜ್ಞಾನಿ ಲೆವಾಸಿಯೋ ಅವರ ಪ್ರಕಾರ ರಾಸಾಯನಿಕವಾಗಿ ಸರಳ ವಸ್ತುಗಳಾಗಿ ವಿಭಜಿಸಲು ಸಾಧ್ಯವಿಲ್ಲದ ಮೂಲ ದ್ರವ್ಯವೇ ಧಾತು.
33. ಕೆಲವು ಧಾತುಗಳು ತಮ್ಮ ವಿಶಿಷ್ಟ ಗುಣಗಳ ಕಾರಣದಿಂದ ಸಂಯೋಗ ಹೊಂದಿ ವಸ್ತುಗಳಾಗಲಾರವು ಅಂತಹ ಧಾತುಗಳನ್ನು "ಜಡಾನಿಲ" (Inert gases) ಎನ್ನುವರು. ಉದಾ- ಹೀಲಿಯಂ, ನಿಯಾನ್, ಆರ್ಗಾನ್.
34. ಜೆ ಜೆ ಬರ್ಜೀಲಿಯಸ್ ಎಂಬ ಸ್ವೀಡಿಷ್ ರಸಾಯನ ತಜ್ಞ ಧಾತುಗಳನ್ನು ಚಿತ್ರದ ಮೂಲಕ ಸೂಚಿಸುವುದನ್ನ ಬಿಟ್ಟು ಸಂಕೇತ ಬಳಸಿ ಬರೆಯುವುದನ್ನು ಮೊದಲ ಬಾರಿಗೆ ಬಳಕೆಗೆ ತಂದ.
35. ನೀರು ಒಂದು ಸಂಯುಕ್ತ ವಸ್ತು ಎಂದು ಇಂಗ್ಲೀಷ್ ವಿಜ್ಞಾನಿ ಹೆನ್ರಿ ಕ್ಯಾವೆಂಡಿಶ್ ಪ್ರತಿಪಾದಿಸಿದರು.
36. ಸಂಯುಕ್ತ ವಸ್ತುವಿಗೆ ಉದಾಹರಣೆ, ಹೈಡ್ರೋಕ್ಲೂರಿಕ್ ಆಮ್ಲ (ಹೈಡ್ರೋಜನ್ + ಕ್ಲೋರಿನ್ - HC1)
37. ತಾಮ್ರದ ಲ್ಯಾಟಿನ್ ಹೆಸರು ಕುಪ್ರಮ್ ಸಂಕೇತ Cu, ಬೆಳ್ಳಿ - ಅರ್ಜೆಂಟೆಮ್ ಸಂಕೇತ Ag, ಚಿನ್ನ - ಅರ್ರಮ್ ಸಂಕೇತ Au, ಪಾದರಸ - ಹೈಡ್ರಾರ್ಜಿರಂ ಸಂಕೇತ Hg, ಪೊಟ್ಯಾಸಿಯಂ - ಕೇಲಿಯಮ್ ಸಂಕೇತ K, ಕಬ್ಬಿಣ - ಫೆರಮ್ ಸಂಕೇತ Fe, ಸೀಸ - ಪ್ಲಂಬಮ್ ಸಂಕೇತ Pb.
38. ಸಂಯುಕ್ತ ವಸ್ತುಗಳಿಗೆ ಉದಾಹರಣೆ ಹೈಡ್ರೋಕ್ಲೋರಿಕ್ ಆಮ್ಲ ( ಹೈಡ್ರೋಜನ್ + ಕ್ಲೋರಿನ್ HC1) , ಅಮೋನಿಯಾ ( ನೈಟ್ರೋಜೆನ್ + ಹೈಡ್ರೋಜೆನ್ NH3), ನೀರು ( ಹೈಡ್ರೋಜೆನ್ + ಆಕ್ಸಿಜನ್ ಏಚ್2ಓ), ಪೊಟ್ಯಾಷಿಯಂ ಪರ್ಮಾಂಗನೇಟ್ (ಪೊಟ್ಯಾಸಿಯಂ + ಮ್ಯಾಂಗನೀಸ್ + ಆಕ್ಸಿಜನ್ KMnO4), ಕಾರ್ಬನ್ ಡೈ ಆಕ್ಸೈಡ್ (ಕಾರ್ಬನ್ + ಆಕ್ಸಿಜನ್ CO2).
39. ತೆಳುವಾದ ಹಾಳೆಗಳನ್ನು ತಯಾರಿಸುವಂತಹ ಧಾತುಗಳ ಲಕ್ಷಣವನ್ನು ಪತ್ರಶೀಲತ್ವ ಅಥವಾ ಕುಟ್ಯತೆ ಎಂದು ಮತ್ತು ತಂತಿಗಳನ್ನು ತಯಾರಿಸುವಂತಹ ಧಾತುಗಳ ಲಕ್ಷಣಗಳನ್ನು ತಂತುಶೀಲಾತ್ವ ಅಥವಾ ತನ್ಯತೆ ಎನ್ನುವರು.
40. ನಮ್ಮ ದೇಹದಲ್ಲಿ ಸುಮಾರು 20ಕ್ಕೂ ಹೆಚ್ಚು ಧಾತುಗಳಿವೆ ಉದಾ- ಸೋಡಿಯಮ್, ಕ್ಯಾಲ್ಷಿಯಂ, ಆಕ್ಸಿಜನ್, ಹೈಡ್ರೋಜೆನ್.
41. ರಕ್ತದ ಹಿಮೋಗ್ಲೋಬಿನ್ ನಲ್ಲಿರುವ ಕಬ್ಬಿಣವು ಧಾತು ರೂಪದಲ್ಲಿಲ್ಲ ಅದು ಸಂಯುಕ್ತ ರೂಪದಲ್ಲಿದೆ.
42. ರಿಂಗಣಿಸು ವ ಶಬ್ಧವನ್ನುಂಟು ಮಾಡುವ ಧಾತುಗಳನ್ನು ಸೋನಾರಸ್ (sonorous) ಎನ್ನುವರು.
43. ಗಟ್ಟಿ, ಮೇಲ್ಮೈ ಹೊಳಪು, ಪತ್ರಶೀಲತ್ವ, ತಂತುಶೀಲತ್ವ, ಉಷ್ಣ ಮತ್ತು ವಿದ್ಯುತ್ ವಾಹಕ ಲಕ್ಷಣಗಳನ್ನು ಹೊಂದಿರುವ
44. ಧಾತುಗಳನ್ನು ಲೋಹಗಳು (ಕಬ್ಬಿಣ, ತಾಮ್ರ, ಅಲ್ಯೂಮಿನಿಯಂ...) ಎನ್ನುವರು ಮತ್ತು ಈ ಯಾವಾಗುಣಗಳನ್ನು ಹೊಂದಿರದ ಧಾತುಗಳನ್ನು ಅಲೋಹಗಳು ( ಗಂಧಕ, ಕಾರ್ಬನ್, ಆಕ್ಸಿಜನ್, ರಂಜಕ)ಎನ್ನುವರು.
45. ಜರ್ಮೇನಿಯಮ್ ಮತ್ತು ಬೋರಾನ್ ಧಾತುಗಳ ವಾಹಕತೆಯು ಲೋಹ ಮತ್ತು ಅಲೋಹಗಳ ನಡುವೆ ಇರುವುದರಿಂದ ಇವನ್ನೂ ಲೋಹ ಅಥವಾ ಅಲೋಹ ಎಂದು ವರ್ಗೀಕರಿಸಲಾಗುವುದಿಲ್ಲ. ಇವನ್ನೂ "ಲೋಹಾಭ" ಗಳು ಎನ್ನುವರು.
46. ಜಡಅನಿಲಗಳಿಗೆ ಬಣ್ಣ ಮತ್ತು ವಾಸನೆಯಿರುವುದಿಲ್ಲ, ಸುಲಭ ವಾಗಿ ದೃುವೀಕರಿಸಬಹುದೂ, ದ್ರವಗಳಲ್ಲಿ ಕರಗುತ್ತವೆ ಮತ್ತು ಕಡಿಮೆ ಕರಗುವ ಮತ್ತು ಕುದಿಯುವ ಬಿಂದು ಹೊಂದಿದೆ.
47. ಧಾತುಗಳನ್ನು ಲೋಹ, ಅಲೋಹ ಮತ್ತು ಲೋಹಾಭಗಳೆಂದು ವರ್ಗೀಕರಿಸಲಾಗಿದೆ.
48. ಪೊಟ್ಯಾಸಿಯಂ ಒಂದು ಮೃದು ಲೋಹ
49. ಅಲ್ಯೂಮಿನಿಯಂ ಒಂದು ಉತ್ತಮ ಉಷ್ಣ ಮತ್ತು ವಿದ್ಯುತ್ ವಾಹಕ.
50. ಒಂದು ದ್ರವವು ಕುಡಿಯಲಾರಂಭಿಸುವ ಕನಿಷ್ಟ ಉಷ್ಣತೆಯೇ ಆ ದ್ರವದ ಕುಡಿಯುವ ಬಿಂದು.
51. ಸಮುದ್ರ ಮಟ್ಟದಲ್ಲಿ ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್.
52. ಕೆಲವು ಘನ ವಸ್ತುಗಳು ಶಾಖ ಕೊಟ್ಟಾಗ ದ್ರವರೂಪಕ್ಕೆ ಕರಗದೆ ನೇರವಾಗಿ ಆವಿಯಾಗಿ ಪರಿವರ್ತನೆಯಾಗುತ್ತದೆ ಈ ಪ್ರಕ್ರಿಯೆಗೆ ಉತ್ಪತನ (sublimation) ಎನ್ನುವರು.
53. ಆಯಸ್ಕಾಂತವನ್ನು ಉಪಯೋಗಿಸಿ ಮಿಶ್ರಣದಲ್ಲಿನ ವಸ್ತುಗಳನ್ನು ಬೇರ್ಪಡಿಸುವ ವಿಧಾನಕ್ಕೆ ಕಾಂತೀಯ ಬೇರ್ಪಡಿಸುವಿಕೆ ಎನ್ನುವರು.
54. ಒಂದರೊಡನೆ ಒಂದು ಬೆರೆಯದ ದ್ರವಗಳನ್ನು ಅಮಿಶ್ರ ಣೀಯ ದ್ರವಗಳು (immiscible liquids) ಎನ್ನುವರು. ಇದನ್ನು ಆಲಿಕೆ ವಿಧಾನದಿಂದ ಪರಸ್ಪರ ಪ್ರತ್ಯೇಕಿಸಬಹುದು.
55. ದ್ರವಗಳು ಒಂದರೊಡನೆಒಂದು ಬೆರೆಯುವಂತಿದ್ದರೆ ಅವುಗಳನ್ನು ಮಿಶ್ರ ಣೀಯ ದ್ರವಗಳು (miscible liquids) ಎನ್ನುವರು.
56. ಬೇರೆ ಬೇರೆ ಕುಡಿಯುವ ಬಿಂದು ಹೊಂದಿರುವ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಮಿಶ್ರ ಣೀಯ ದ್ರವಗಳನ್ನು "ಅಂಶಿಕ ಅಸವನ" (fractional distillation) ವಿಧಾನದಿಂದ ಪ್ರತ್ಯೇಕಿಸಬಹುದು.
57. ವಸ್ತು ಗಳು ತಮ್ಮ ಮೂಲಕ ವಿದ್ಯುತ್ನ್ನು ಹರಿಯಲು ಬಿಟ್ಟರೆ ಅವನ್ನು ವಿದ್ಯುತ್ ವಾಹಕಗಳು (conductors) ಎನ್ನುವರು.
58. ವಸ್ತು ಗಳು ತಮ್ಮ ಮೂಲಕ ವಿದ್ಯುತ್ನ್ನು ಹರಿಯಲು ಬಿಡದಿದ್ದರೆ ಅವನ್ನು ವಿದ್ಯುತ್ ನಿರೋಧಕಗಳು (insulators) ಎನ್ನುವರು.
59. ಭೂಮಿಯ ಮೇಲೆ 100 k g ತೂಗುವ ವ್ಯಕ್ತಿ ಚಂದ್ರನ ಮೇಲೆ 16.67 kg ತೂಗುತ್ತಾನೆ.
60. ಕ್ರಿ. ಪೂ 2400-1800 ರಷ್ಟು ಹಿಂದೆಯೇ ಸಾಮಾನ್ಯ ತುಲಾಯಂತ್ರ (ತೂಕದ ಯಂತ್ರ) ವನ್ನು ಬಳಸಿದಕ್ಕೆ ಇಂಡಸ್ ವ್ಯಾಲಿಯಲ್ಲಿ ಪುರಾವೆಗಳು ದೊರೆತಿವೆ.
61. ಅಂತರಾಷ್ಟ್ರೀಯ ಪದ್ದತಿಯ ದ್ರವ್ಯರಾಶಿಯ ಮೂಲಮಾನ kg.
62. ರಾಬರ್ಟ್ ಹುಕ್ ಎನ್ನುವ ವಿಜ್ಞಾನಿ 1678 ರಲ್ಲಿ ವಸ್ತುಗಳ ತೂಕವನ್ನು ಅಳೆಯುವ ಸ್ಟ್ರಿಂಗ್ ತ್ರಾಸ (spring balance) ಎನ್ನುವ ಸಾಧನವನ್ನು ಕಂಡು ಹಿಡಿದನು.
63. ಅಂತರರಾಷ್ಟ್ರೀಯ ಪದ್ದತಿಯಲ್ಲಿ ತೂಕದ ಮೂಲಮಾನ ನ್ಯೂಟನ್ (N).
64. ಅಂತಾರಾಷ್ಟ್ರೀಯ ಪದ್ದತಿಯಲ್ಲಿ ಸಾಂದ್ರತೆಯ ಮೂಲಮಾನ kg/m3.
65. ಯಾವುದೇ ವಸ್ತು ನೀರಿನಲ್ಲಿ ಭಾಗಶಃ ಅಥವಾ ಪೂರ್ಣವಾಗಿ ಮುಳುಗಿದಾಗ ನೀರು ಆ ವಸ್ತುವಿನ ಮೇಲೆ ಮೇಲ್ಮುಖ ಬಲವನ್ನು ಪ್ರಯೋಗಿಸುತ್ತದೆ ನೀರಿನ ಈ ಗುಣಕ್ಕೆ "ಪ್ಲವನತೆ" ಅಥವಾ " ಪ್ಲವನ ಬಲ" (buoyant force) ಎಂದು ಹೆಸರು.
66. ಪ್ಲವನ ಬಲವು ವಸ್ತುವಿನ ತೂಕಕ್ಕಿಂತ ಜಾಸ್ತಿ ಇದ್ದರೆ ವಸ್ತುತೆಲುತ್ತದೆ ಕಡಿಮೆ ಇದ್ದರೆ ವಸ್ತು ಮುಳುಗುತ್ತದೆ.
67. ನೀರಿನ ಸಾಂದ್ರತೆಯನ್ನು ಕಂಡುಹಿಡಿಯಲು ಉಪಯೋಗಿಸುವ ಉಪಕರಣವೇ ಹೈಡ್ರೋಮೀಟರ್.
68. ಯಾವುದೇ ದ್ರವದ ಸಾಂದ್ರತೆ ಮತ್ತು ನೀರಿನ ಸಾಂದ್ರತೆಗಳ ಅನುಪಾತವನ್ನೇ ಆ ದ್ರವದ ಸಾಪೇಕ್ಷ ಸಾಂದ್ರತೆ ಎನ್ನುವರು.
69. ಬೇರೆ ಬೇರೆ ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಕಂಡುಹಿಡಿಯಲು ಪ್ರತ್ಯೇಕವಾದ ಹೈಡ್ರೋಮೀಟರ್ಗಳು ಲಭ್ಯವಿದೆ ಅವು...
ಹಾಲು - ಲ್ಯಾಕ್ಟೋಮೀಟರ್
ಮೂತ್ರ - ಯೂರಿನೋ ಮೀಟರ್
ಆಮ್ಲ - ಅಸಿಡೊಮೀಟರ್
70. ನೀರಿನಲ್ಲಿ ಮುಳುಗಿದ ವಸ್ತು ಅನುಭವಿಸುವ ತೋರಿಕೆಯ ತೂಕ ನಷ್ಟಕ್ಕೆ ನೀರಿನ ಮೇಲ್ಮುಖ ಬಲವೇ ಕಾರಣ ಎಂದು ವಾದಿಸಿದವರು ಗ್ರೀಕ್ ದೇಶದ ಆರ್ಕಿಮಿಡೀಸ್ . ಇದು ಆರ್ಕಿಮಿಡೀಸ್ ತತ್ವಯೆಂದೇ ಹೆಸರಾಗಿದೆ.
71. ಹೈಡ್ರೋಮೀಟರ್ ಆರ್ಕಿಮಿಡೀಸನ ತತ್ವದ ಮೇಲೆ ಕೆಲಸಮಾಡುತ್ತದೆ.
72. ಜೀವಿಗಳು ಆಹಾರವನ್ನು ದೊರಕಿಸಿಕೊಳ್ಳುವ ವಿಧಾನವನ್ನು ಆಧರಿಸಿ ನಾಲ್ಕು ಬಗೆಯ ಪೋಷಣೆಯನ್ನು ಗುರ್ತಿಸಲಾಗಿದೆ. ಅವು
1.ಘನ ಆಹಾರ ಪೋಷಣೆ (Holozonic Nutrition) - ಈ ವಿಧದಲ್ಲಿ ಜೀವಿಗಳು ಆಹಾರವನ್ನು ಇಡಿಯಾಗಿ ನುಂಗುತ್ತವೆ ( ಗುಬ್ಬಚ್ಚಿ, ಪಾರಿವಾಳ)
2. ಸಸ್ಯರೀತಿ ಪೋಷಣೆ (Holophytic Nutrition)- ಸಸ್ಯಗಳು ತಮ್ಮ ಆಹಾರವನ್ನು ತಾವೇ ತಮ್ಮ ಎಲೆಗಳಲ್ಲಿ ತಯಾರಿಸಿಕೊಳ್ಳುತ್ತವೆ. ಇದಕ್ಕೆ ಸಸ್ಯರೀತಿ ಪೋಷಣೆಯೆನ್ನುವರು.
3.ಕೊಳೆತಿ ನಿ ಪೋಷಣೆ (Saprophytic Nutrition) - ಕೊಳೆಯುವ ವಸ್ತುವಿನಿಂದ ಜೀವಿಗಳು ಪೋಷಣೆ ಪಡೆಯುವುದನ್ನು ಕೊಳೆತಿ ನಿ ಪೋಷಣೆಯೆನ್ನುವರು. ಉದಾ-ಬೂಷ್ಟು
4.ಪರಾವಲಂಬಿ ಪೋಷಣೆ (Parasitic Nutrition)- ಅನ್ಯಜೀವಿಯ ದೇಹದೊಳಗೆ ವಾಸಿಸುತ್ತಾ ಅವುಗಳಿಂದಲೇ ತಮ್ಮ ಆಹಾರ ದೊರಕಿಸಿಕೊಳ್ಳುವ ಜೀವಿಗಳಿ ಪರಾವಲಂಬಿ ಪೋಷಣೆಯೆನ್ನುವರು. ಉದಾ-ಹೇನು, ಹೊಟ್ಟೆಯಲ್ಲಿರುವ ಹುಳುಗಳು (worms).
73. ಪರಾವಲಂಬಿಇಂದ ಪೋಷಣೆ ಪಡೆವ ಪ್ಲಾಸ್ಮೂಡಿಯಮ್ ಜೀವಿಯು ಮಲೇರಿಯಾ ಹಾಗೂ ಎಂಟಮೀಬಾ ಹಿಸ್ಟೋ ಲಿಟಿಕಾ ದಿಂದ ರಕ್ತಭೇದಿ ಉಂಟಾಗುತ್ತದೆ.
74. ಒಂದು ಜಂತು ಹುಳುವು ದಿನಕ್ಕೆ 200000 ಮೊಟ್ಟೆಗಳನ್ನಿಡುತ್ತದೆ.
75. ಮಾನವನ ದೊಡ್ಡ ಕರುಳಿನಲ್ಲಿರುವ ಇಸ್ಟಿ ರೀಶಿಯಕೊಲಿ ಎಂಬ ಬ್ಯಾಕ್ಟೀರಿಯಾ ಮಾನವನಿಗೆ ಉಪಕಾರಿಯಾಗಿದೆ ಇದು ಸೆಲ್ಯುಲೋಸ್ (cellulose) ಎಂಬ ಕಾರ್ಬೋಹೈಡ್ರೇಟ್ ಅನ್ನು ಜೀರ್ಣಿಸಿಕೊಡುತ್ತದೆ.
76. ಆಹಾರದ ಆಕರವನ್ನು ಆಧಾರವಾಗಿಟ್ಟುಕೊಂಡು ಜೀವಿಗಳನ್ನು ಸ್ವಪೋಷಿತ ( ಉದಾ-ಸಸ್ಯಗಳು) ಮತ್ತು ಪರಪೋಷಿತ ಜೀವಿಗಳು (ಪಕ್ಷಿ, ಕೀಟ, ಪ್ರಾಣಿಗಳು) ಎಂದು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
77. ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಕೇವಲ 0.02% ರಷ್ಟನ್ನು ಮಾತ್ರ ಸಸ್ಯಗಳು ದ್ಯುತಿಸಂಶ್ಲೇಷಣೆಗೆ ಉಪಯೋಗಿಸುತ್ತವೆ.
78. ನಮ್ಮ ದೇಹದ 2/3 ಭಾಗ ಮತ್ತು ರಕ್ತದ 9/10 ಭಾಗ ನೀರಿನಿಂದ ಕೂಡಿದೆ.
79. ನೀರು ಒಂದು ಸಂಯುಕ್ತವಾಗಿದ್ದು ಹೈಡ್ರೋಜನ್ 2 ಮತ್ತು ಆಕ್ಸಿಜನ್ 1 ಅನುಪಾತ ಪ್ರಮಾಣದಲ್ಲಿದೆ.
80. ಸಮುದ್ರ ಮಟ್ಟದಲ್ಲಿ ನೀರಿನ ಕೂಡಿ ಬಿಂದು 100 ಡಿಗ್ರೀ ಸೆಲ್ಸಿಯಸ್.
81. ನೀರನ್ನು 0 ಡಿಗ್ರೀ ಇಂದ 4 ಡಿಗ್ರೀ ವರೆಗೆ ಕಾಯಿಸಿದಾಗ ಸಂಕುಚಿಸುತ್ತದೆ 4 ಡಿಗ್ರೀ ನಂತರ ವ್ಯಾಕೋಚಿಸುತ್ತದೆ.
82. 4 ಡಿಗ್ರೀ ಯಲ್ಲಿ ನೀರಿನ ಗಾತ್ರವು ಕಡಿಮೆ ಇದ್ದು ಸಾಂದ್ರತೆಯು ಜಾಸ್ತಿ ಇರುತ್ತದೆ.
ಇತಿಹಾಸ
ಕ್ರೈಸ್ತಮತ
ಕ್ರೈಸ್ತಮತದ ಸ್ಥಾಪಕ ಯೇಸು ಕ್ರಿಸ್ತ ಇವರ ಪವಿತ್ರ ಗ್ರಂಥ ಬೈಬಲ್.
ಯೇಸು ಯೆಹೂದಿ (ಹೀಬ್ರು) ಸಂತತಿಯವ.
ಯೇಸು ಕ್ರಿಸ್ತನು ಇಸ್ರೇಲ್ ನ ಬೆತ್ಲಹೆಮ್ ಎಂಬಲ್ಲಿ ಮೇರಿ ಎಂಬಾಕೆಯ ಮಗನಾಗಿ ಜನಿಸಿದನು .
ನಾವೆಲ್ಲಾ ದೇವರ ಮಕ್ಕಳು , ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ ಇವು ಯೇಸುವಿನ ಕೆಲವು ಪ್ರಮುಖ ಬೋಧನೆಗಳು.
ಇಸ್ಲಾಮ್ ಮತ
ಮಹಮ್ಮದ್ ಪೈಗಂಬರ್ ಅಸ್ಲಾಮ್ ಮಠದ ಸ್ಥಾಪಕ. ಇವನು ಅರಬ್ ದೇಶದ ಮೆಕ್ಕಾ ಎಂಬ ನಗರದಲ್ಲಿ ಜನಿಸಿದನು.
ಪೈಗಂಬರ್ ತಂದೆ ಅಬ್ದುಲ್ಲಾ ತಾಯಿ ಅಮೀನಾ .
ಖದೀಜಾ ಎಂಬ ಧನಿಕ ವಿಧವೆಯನ್ನು ಪೈಗಂಬರ್ ಮದುವೆಯಾದರು.
ಇಸ್ಲಾಮ್ ಪಂಥದ ಪವಿತ್ರ ಗ್ರಂಥ ಖುರಾನ್ ಇದು ಅರೇಬಿಕ್ ಭಾಷೆಯಲ್ಲಿದೆ .
ಇಸ್ಲಾಮ್ ಪದದ ಅರ್ಥ ಶರಣಾಗತಿ ,ಮುಸ್ಲಿಂ ಎಂದರೆ ದೇವರಿಗೆ ಶರಣಾದವರು.
ಪೈಗಂಬರ್ ಮೆಕ್ಕಾ ನಗರದಿಂದ ಮದೀನಾ ನಗರಕ್ಕೆ ಹೋದವರ್ಷದಿಂದಲೇ ಮುಸಲ್ಮಾನರ ಹಿಜರಿ ಶಕೆ ಆರಂಭವಾಯಿತು.
ಅರೇಬಿಯನ್ ನೈಟ್ಸ್ ,ಉಮ್ಮರ್ ಖಯ್ಯಾಮನ ರುಬಿಯಾತ ಮತ್ತು ಫಿರ್ದೂಸಿಯ ಷ ನಾಮ ಇವು ಪರ್ಷಿಯಾಯಾಂ ಭಾಷೆಯ ಶ್ರೇಷ್ಠ ಕೃತಿಗಳು.
ಪ್ಯಾಲೆಸ್ಟೈನ್ ಹಾಗು ಅದರ ರಾಜಧಾನಿ ಜೆರುಸೆಲೆಮ್ ವಶಪಡಿಸಿಕೊಳ್ಳುವುದಕ್ಕಾಗಿ ಕ್ರೈಸ್ತರು ಮತ್ತು ಮುಸಲ್ಮಾನರು ಒಂಬತ್ತುಬಾರಿ ಯುದ್ಧ ನಡೆಸಿದರು ಇವನ್ನು ಮತೀಯ ಯುದ್ಧಗಳು (ಕ್ರೂಸೇಡ್ಸ್) ಎನ್ನುತ್ತಾರೆ.
ಮಂಗೋಲರು
ಮಂಗೋಲಿಯಾ ಮಧ್ಯ ಏಷ್ಯಾದ ಸಮೃದ್ಧ ಹುಲ್ಲುಮೈದಾನಗಳ ನಾಡು,
ಚ ನಂಗೀಸ್ ಖಾನ್ ಮಂಗೋಲರನ್ನು ಒಟ್ಟುಗೂಡಿಸಿ ವಿಶಾಲ ಸಾಮ್ರಾಜ್ಯವನ್ನು ಕಟ್ಟಿದನು .
ಕುಬ್ಲಾಯ್ ಖಾನ್ ಚ ನಂಗೀಸ್ ಖಾನನ ಮೊಮ್ಮಗ ಇವನು ಇಡೀ ಚೀನಾ ದೇಶದ ಚಕ್ರವರ್ತಿ ಯಾಗಿ ಮೆರೆದನು.ನಂತರ ಇವನು ಬೌದ್ಧ ಮತಕ್ಕೆ ಪರಿವರ್ತನೆಯಾದನು .
ತೈಮೂರ್ ಕುಬ್ಲಾಯ್ ಖಾನನ ಸಾಮ್ರಾಜ್ಯವನ್ನು ಮತ್ತೊಮ್ಮೆ ಕಟ್ಟಿದನು.ಭಾರತವನ್ನು ಆಕ್ರಮಣ ಮಾಡಿ ಮೊಗಲ್ (ಮಂಗೋಲ್ ) ರಾಜ್ಯವನ್ನು ಸ್ಥಾಪಿಸಿದ ಬಾಬರ್ ಇದೆ ಸಂತತಿಯವನು.
ಅಟ್ಟೋಮನ್ ಟರ್ಕರು
ಅಲೆಮಾರಿಗಳಾದ ಟರ್ಕರ ಮೂಲ ಸ್ಥಾನ ಮದ್ಯ ಏಷ್ಯಾದ ತುರ್ಕಿಸ್ತಾನ .ಇವರು ಇಸ್ಲಾಮ್ ಮತಾನುಯಾಯಯಿಗಳು .
1. ರಜಪೂತ ಸ್ತ್ರೀಯರು ತಮ್ಮ ಪತಿಯನ್ನು ಯುದ್ಧದಲ್ಲಿ ಕಳೆದುಕೊಂಡಾಗ ಸಾಮೂಹಿಕ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದರು ಈ ರೂಡಿಯನ್ನು ಜೋಹಾರ್ ಎನ್ನುವರು.
2. gwalior ಕೋಟೆಯನ್ನು ಭಾರತದ ಕೋಟೆಗಳ ಕೊರಳ ಹಾರದ ಮುತ್ತು ಎಂದು ಕರೆದಿದ್ದಾರೆ.
3. pruthwi raajanu ಮಹಮ್ಮದ್ ಘೋರಿ ಆಕ್ರಮಣಗಳನ್ನು ವಿರೋದಿಸಿದನು ಮತ್ತು ರಜಪೂತ ಅರಸರನ್ನು ಒಗೂಡಿಸಿ ಘೋರಿಯನ್ನು ಕದನದಲ್ಲಿ ಸೊಲೊಸಿ ಅವನಿಗೆ ಕ್ಷಮಾದಾನ ನೀಡಿದನು.
ಅದರ ಮುಂದಿನ ವರ್ಷವೇ ನಡೆದ ಮತ್ತೊಂದು ಯುದ್ಧದಲ್ಲಿ ಸೋತು ಶತ್ರು ಸೈನಿಕರಿಗೆ ಸೆರೆಸಿಕ್ಕಿದನು.ಇದು ದಿಲ್ಲಿ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು.
4. ಪೃಥ್ವಿರಾಜರಾಸೋ ಹಿಂದಿ ಮಹಾಕಾವ್ಯದಲ್ಲಿ ಚಾಂದ್ ಬರ್ದಾಯಿ ಎಂಬ ಕವಿ ಪೃಥ್ವಿರಾಜನ ಪರಾಕ್ರಮವನ್ನು ವರ್ಣಿಸಿದ್ದಾನೆ.
5. ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಕವಿರಾಜಮಾರ್ಗ ವನ್ನು ಶ್ರೀವಿಜಯ ಎಂಬುವವನು ರಚಿಸಿದನು.ದೊರೆತಿರುವ ಕನ್ನಡ ಗ್ರಂಥಗಳಲ್ಲಿ ಇದು ಅತ್ಯಂತ ಪ್ರಾಚೀನ ವಾದುದು ಇದರ ಕಾಲ 9 ನೇ ಶತಮಾನ.
6. ಪಂಪನು ವೇಮುಲವಾಡದ ಮಾಂಡಲಿಕ ಅರಿಕೇಸರಿಯ ಆಸ್ಥಾನದಲ್ಲಿದ್ದನು .
7. "ವಿಕ್ರಮಾರ್ಜುನ ವಿಜಯ" ಅಥವಾ "ಪಂಪಭಾರತ" ಪಂಪನ ಪ್ರಮುಖ ಮಹಾಕಾವ್ಯ.
8. ಎಲ್ಲೋರಾದ ಕೈಲಾಸಮಂದಿರವನ್ನು ನಿರ್ಮಿಸಿದ ಕೀರ್ತಿ ರಾಷ್ಟ್ರಕೂಟ ಒಂದನೇ ಕೃಷ್ಣನಿಗೆ ಸಲ್ಲುತ್ತದೆ.
9. ವಿಶ್ವದ ನಾಲ್ಕು ವಿಶಾಲ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಅಮೋಘ ವರ್ಷ ನೃಪತುಂಗನ ಸಾಮ್ರಾಜ್ಯವೂ ಒಂದು ಎಂದು ಆಗ ಭೇಟಿ ಕೊಟ್ಟಿದ್ದ ವಿದೇಶಿ ಪ್ರವಾಸಿ ಸುಲೈಮಾನ್ ಬರೆದಿದ್ದಾನೆ (ಮಿಕ್ಕವು ರೋಮನ್,ಅರಬ್ಬ್,ಚೈನಾ.)
10. ರಾಮೇಶ್ವರದ ವರೆಗೂ ಜಯಭೇರಿ ಬಾರಿಸಿ ಅಲ್ಲಿ ವಿಜಯ ಸ್ತನೆಂಬ ನಿರ್ಮಿಸಿದವನು ರಾಷ್ಟ್ರಕೂಟ ಮೂರನೆಯ ಕೃಷ್ಣ.
11. ರಾಷ್ಟ್ರಕೂಟ ಮೂರನೆಯ ಕೃಷ್ಣ ಪಾಂಡ್ಯ ,ಚೇರರನ್ನು ಸೋಲಿಸಿದ್ದಲ್ಲದೆ ಸಿಂಹಳದ ಅರಸನಿಂದ ಕಪ್ಪಸಂಗ್ರಹಿಸಿದನು.
12. ಕವಿ ಪೊನ್ನನು ರಾಷ್ಟ್ರಕೂಟ ಮೂರನೆಯ ಕೃಷ್ಣ ನ ಆಶ್ರಯ ಪಡೆದಿದ್ದನು.
13. ಬೀದರ್ ಜಿಲ್ಲೆ ಬಸವಕಲ್ಯಾಣವು ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು.
14. ಆರನೆಯ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯರ ಶ್ರೇಷ್ಠ ಚಕ್ರವರ್ತಿ ಇವನು ವಿಕ್ರಮ ಶಕೆಯನ್ನು ಆರಂಭಿಸಿದನು.
ಇವನ ಆಶ್ರಯದಲ್ಲಿ ಬಿಲ್ಹಣನು ವಿಕ್ರಮಾಂಕದೇವಚರಿತ ಎಂಬ ಮಹಾ ಕಾವ್ಯವನ್ನು ಮತ್ತು ವಿಜ್ಞಾನೇಶ್ವರನು ಮಿತಾಕ್ಷರ ಸಂಹಿತೆ (ಹಿಂದೂ ಕಾನೂನು ಪದ್ಧತಿ) ಯನ್ನು ರಚಿಸಿದನು.
15. ವಿಕ್ರಮಾದಿತ್ಯನ ಮಗನಾದ ಮುಮ್ಮಡಿ ಸೋಮೇಶ್ವರನು ಮಾನಸೋಲ್ಲಾಸ ಎಂಬ ಖ್ಯಾತ ಸಂಸ್ಕೃತ ಗ್ರಂಥ ವನ್ನು ರಚಿಸಿದನು.
16. ಕವಿ ಚಕ್ರವರ್ತಿ ರನ್ನನು ಸಾಹಸಭೀಮವಿಜಯ ಅಥವಾ ಗದಾಯುದ್ಧ ಎಂಬ ಕಾವ್ಯವನ್ನು ರಚಿಸಿದನು.
17. ತಂಜಾವೂರಿನ ಬೃಹದೀಶ್ವರ ದೇವಾಲಯವು ಎತ್ತರ ಹಾಗು ಗಾತ್ರದಲ್ಲಿ ಭಾರತದಲ್ಲಿಯೇ ಅತಿ ದೊಡ್ಡದಾದ ದೇವಾಲಯ ಇದನ್ನು ಚೋಳ ರಾಜನಾದ ರಾಜರಾಜ ಚೋಳನು ನಿರ್ಮಿಸಿದನು .
18. ಶಂಕರಾಚಾರ್ಯರು ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರು .ಶಿವಗುರು ಮತ್ತು ಆರ್ಯಾಂಬೆ ಶಂಕರರ ತಂದೆ ಮತ್ತು ತಾಯಿ.
19. ಶಂಕರರು ಅದ್ವೈತ ತತ್ವವನ್ನು ಪ್ರತಿಪಾದಿಸಿದರು.
20. ಶಂಕರರು ಬದರಿ (ಉತ್ತರಾಖಂಡ), ದ್ವಾರಕೆ (ಗುಜರಾತ್), ಪುರಿ (ಒಡಿಸ್ಸಾ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು.
21. ಶಂಕರರ ಕೃತಿಗಳು ಪ್ರಮುಖವಾದವು ಭಜಗೋವಿಂದಂ.
22. ರಾಮಾನುಜರು ಚನ್ನೈ ಸಮೀಪದ ಶ್ರೀ ಪೆರಂಬದೂರಿನಲ್ಲಿ ಜನಿಸಿದರು.
23. ರಾಮಾನುಜರ ತಂದೆ ಕೇಶವ ದೀಕ್ಷಿತರು ತಾಯಿ ಕಾಂತಿಮತಿ.ಇವರು ವಿಶಿಷ್ಟಾದ್ವೈತ ತತ್ವವನ್ನು ಪ್ರತಿಪಾದಿಸಿದರು.
24. ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯವರು.
25. ಬಸವೇಶ್ವರರ ತಂದೆ ಮಾದರಸ ತಾಯಿ ಮಾದಲಾಂಬಿಕೆ.
26. ಬಸವತತ್ವವನ್ನು ಶಕ್ತಿ ವಿಶಿಷ್ಟಾದ್ವೈತ ಎಂದು ಕರೆಯುತ್ತಾರೆ.
27. ಕಲ್ಯಾಣದ ಕಲಚೂರಿ ವಂಶದ ಬಿಜ್ಜಳನಲ್ಲಿ ಬಸವೇಶ್ವರರು ಭಂಡಾರದ ಅಧಿಕಾರಿಯಾಗಿದ್ದರು.
28. ಶ್ರೀ ಮಧ್ವಾಚಾರ್ಯರು ಉಡುಪಿಯ ಪಾಜಕ (ಬೆಳ್ಳೆ) ಗ್ರಾಮದಲ್ಲಿ ಜನಿಸಿದರು.
29. ಮಧ್ವರು ಒಟ್ಟು 37 ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದರು.
30. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು.
31. ಕೃಷ್ಣನ ಪೂಜೆಯನ್ನು ಅಷ್ಟಮಠಗಳ ಯತಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ಪರ್ಯಾಯ ಮಾಡಬೇಕೆಂದು ವ್ಯವಸ್ಥೆ ಮಾಡಿದರು ನಂತರ ವಾದಿರಾಜರು ಎರಡು ವರ್ಷಗಳಿಗೆ ಪರ್ಯಾಯವನ್ನು ವಿಸ್ತರಿಸಿದರು.
32. ಭಾರತದ ಮೇಲೆ ಮೊದಲಿಗೆ ಅರಬ್ಬರ ದಂಡು ಕ್ರಿ .ಶ 712 ರಲ್ಲಿ ಸಿಂದ್ ಮತ್ತು ಮುಲ್ತಾನ್ ಪ್ರದೇಶಗಳನ್ನು ವಶಪಡಿಸಿಕೊಂಡರು.
33. ಅರಬ್ಬರ ಧಾಳಿಯಾದ ಸುಮಾರು ಮೂರು ಶತಮಾನಗಳ ನಂತರ ಟರ್ಕಿಯ ಮಹಮ್ಮದ್ ಘಜನಿ ಭಾರತದ ಮೇಲೆ 17 ಬಾರಿ ದಾಳಿ ನಡೆಸಿದ.
ಇವರ ಮೂಲ ಉದ್ದೇಶಗಳು ಸಂಪತ್ತಿನ ಲೂಟಿ ,ರಾಜ್ಯ ವಿಸ್ತರಣೆ ಮತ್ತು ಮತಪ್ರಸಾರ.
34. ಹನ್ನೆರಡನೇ ಶತಮಾನದ ಕೊನೆಯ ಭಾಗದಲ್ಲಿ ಮೊಹಮ್ಮದ್ ಘೋರಿಯು ಭಾರತದಮೇಲೆ ಧಾಳಿ ನಡೆಸಿದನು ನಂತರ ಪೃಥ್ವಿರಾಜ್ ಚೌಹಾಣ್ ಘೋರಿಯನ್ನು ಸೋಲಿಸಿದರು ಕೊಲ್ಲದೆ ಬಿಟ್ಟನು. ನಂತರದಲ್ಲಿ ಘೋರಿಯು ಪುನಃ ದಂಡೆತ್ತಿಬಂದು ಪೃಥ್ವಿರಾಜ್ನನ್ನ ಸೋಲಿಸಿ ಕೊಲ್ಲಿಸಿದನು.ದಿಲ್ಲಿ ಘೋರಿಯ ವಶವಾಯಿತು ಅವನು ಅದನ್ನು ತನ್ನ ಸೇನಾನಿ ಕುತ್ಬುದ್ದಿನ್ ಐಬಕ್ ಗೆ ಹಸ್ತಾಂತರಿಸಿದನು .
35. ಕುತ್ಬುದ್ದಿನ್ ಐಬಕ್ ಪ್ರಾರಂಭದಲ್ಲಿ ಗುಲಾಮನಾಗಿದ್ದ ಹಾಗಾಗಿ ಇವನದು "ಗುಲಾಮಿ" ಸಂತತಿ ಯಾಯಿತು.
ಇವನು ತನ್ನ ವಿಜಯದ ಸಂಕೇತವಾಗಿ ದಿಲ್ಲಿಯ ಮೆಹ್ರೌಲಿ ಎಂಬಲ್ಲಿ ಕುತುಬ್ ಮಿನಾರನ್ನು ನಿರ್ಮಿಸಲು ಪ್ರಾರಂಭಿಸಿದನು ಇದು ಇಲ್ತಮಿಶ್ನ ನ ಕಾಲದಲ್ಲಿ ಪೂರ್ಣಗೊಂಡಿತು.
36. ಗುಲಾಮಿ ಸಂತತಿಯ ನಂತರ ಖಿಲ್ಜಿ ವಂಶ ಅಧಿಕಾರಕ್ಕೇರಿತು .
37. ಖಿಲ್ಜಿ ಸಂತತಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ಪ್ರಮುಖನಾದವನು ಇವನು ಇಡೀ ಭಾರತದೇಶವನ್ನು ಗೆಲ್ಲಬೇಕೆಂಬ ಆಕಾಂಕ್ಷೆ ಹೊಂದಿದ್ದನು .ಪ್ರಾರಂಭದಲ್ಲಿ ಇಡೀ ಉತ್ತರ ಭಾರತವನ್ನು ಗೆದ್ದನು ನಂತರ ತನ್ನ ಸೇನಾನಿ ಮಲ್ಲಿಕಾಫರ್ನನ್ನ ಭಾರಿ ಸೇನೆ ಯೊಂದಿಗೆ ದಕ್ಷಿಣ ಭಾರತಕ್ಕೆ ಕಳುಹಿಸಿದನು. ಮಲ್ಲಿಕಾಫರನು ದಕ್ಷಿಣದ ನಾಲ್ಕು ರಾಜ್ಯಗಳಾದ ಮಹಾರಾಷ್ಟ್ರದ ಯಾದವ "ದೇವಗಿರಿ",ಆಂಧ್ರದ ಕಾಕತಿಯ "ವಾರಂಗಲ್ಲು" ,ಹೊಯ್ಸಳರ "ದೋರಸಮುದ್ರ" ಮತ್ತು ತಮಿಳುನಾಡಿನ ಪಾಂಡ್ಯ "ಮದುರೈ" ಯನ್ನು ಕೊಳ್ಳೆಹೊಡಿದು ಎಲ್ಲಾದೇವಾಲಯಗಳಿಂದ ಧನಕನಕಾದಿಗಳನ್ನು ಲೂಟಿಮಾಡಿದನು.
38. ನಂತರ ಮಲ್ಲಿಕಾಫರನು ಅಲ್ಲಾವುದ್ದೀನನನ್ನು ಕೊಂಡು ಅಧಿಕಾರಕ್ಕೇರಿದನು ಆದರೆ ಅವನನ್ನು ಕೊಲ್ಲಲಾಯಿತು.
39. ಅಲ್ಪ ಕಾಲದಲ್ಲೇ ಖಿಲ್ಜಿ ಸುಲ್ತಾನರ ಆಳ್ವಿಕೆ ಕೊನೆಯಾಯಿತು ನಂತರ ತುಘಲಕರು ಅಧಿಕಾರಕ್ಕೆ ಬಂದರು.
40. ತುಘಲಕ ರಲ್ಲಿ ಮಹಮ್ಮದ್ ಬಿನ್ ತುಘಲಕ ಪ್ರಮುಖನು .
41. ಮಹಮ್ಮದ್ ಬಿನ್ ತುಗ್ಲಕ್ ವಿಚಿತ್ರ ಗುಣಸ್ವಭಾವದವನು ಇವನ್ನು ಹುಚ್ಚು ದೊರೆ ಎಂದು ಕರೆಯುತ್ತಾರೆ.
ಇವನು ದಿಲ್ಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದನು.
ನಂತರ ದೇವಗಿರಿಯಿಂದ ಮತ್ತೆ ದಿಲ್ಲಿಗೆ ವರ್ಗಾವಣೆ ಮಾಡಿದನು.
42. ಸಂತ ಶ್ರೀ ಚೈತನ್ಯರು ಪಶ್ಚಿಮ ಬಂಗಾಳದಲ್ಲಿ ಜನಿಸಿದರು.
43. ಸಿಖ್ ಪಂಥದ ಸ್ತಾಪಕರು ಗುರು ನಾನಕ್ ಇವರ ಪವಿತ್ರ ಗ್ರಂಥ "ಗ್ರಂಥ ಸಾಹಿಬ್" . ಇವರು ಹಿಂದೂ ಮತ್ತು ಮುಸ್ಲಿಂ ಮತಗಳ ಸಮಾನ ಅಂಶಗಳನ್ನು ಒತ್ತಿ ಹೇಳಿದರು.
44. ಕಬೀರ್ ದಾಸ್ ಜಾತಿವ್ಯವಸ್ಥೆ, ಮೂರ್ತಿ ಪೂಜೆ, ತೀರ್ಥಯಾತ್ರೆ, ಉಪವಾಸ, ಹರಕೆ ಮತ್ತು ಮತೀಯ ಆಚರಣೆಗಳನ್ನು ಖಂಡಿಸಿದರು.
45. ತುಳಸಿ ದಾಸರ ಪ್ರಸಿದ್ದ ಕಾವ್ಯ "ರಾಮಚರಿತಮಾನಸ".
46. ಸೂರ್ ದಾಸ್ ಇವರು ಹುಟ್ಟು ಕುರುಡರಾದರೂ ಓರ್ವ ಸಂತ ಕವಿ . "ಸೂರ್ ಸಾಗರ್" ಇವರ ಖ್ಯಾತ ಕೃತಿ.
47. ಸೂಫಿ ಪಂಥವು ಅರೇಬಿಯಾ ದಲ್ಲಿ ಉದಯಿಸಿತು. ಇವರು ಒರಟು ಉಣ್ಣೆಯ ಬಟ್ಟೆಗಳನ್ನು (ಸೂಫ್) ಧರಿಸುತ್ತಿದ್ದರು ಹಾಗಾಗಿ ಇವರನ್ನು ಸೂಫಿಗಳೆಂದು ಕರೆಯಲಾಯಿತು.
48. ನಿಜಾಮುದ್ದೀನ್ ಔಲಿಯಾ ಭಾರತದ ಪ್ರಮುಖ ಸೂಫಿ ಸಂತ ಇವರು ದಿಲ್ಲಿಯಲ್ಲಿ ನೆಲೆಸಿ ಭಕ್ತರಿಗೆ ಸಂದೇಶ ನೀಡುತಿದ್ದರು.
49. ಬಂದೇನವಾಜ್ ಕರ್ನಾಟಕದ ಖ್ಯಾತ ಸೂಫಿ ಸಂತರು. ಇವರ ದರ್ಗಾ ಕಲಬುರುಗಿಯಲ್ಲಿದೆ.
50. ಸೂಫಿ ಪಂಥದಲ್ಲಿ ಚಿಸ್ತಿ ಪಂಗಡ ಪ್ರಮುಖವಾದದ್ದು. ಇದರ ಸ್ಥಾಪಕ ಮೂಯೀನುದ್ದೀನ್ ಚಿಸ್ತಿ.
51. ವರಾಹ ವಿಜಯನಗರದ ರಾಜಲಾಂಛನ ಕುಲ ದೇವರು ಶ್ರೀ ವಿರೂಪಾಕ್ಷ.
52. ಸಂಗಮ ವಂಶದ ಪ್ರಸಿದ್ದ ದೊರೆ ಪ್ರೌಡದೇವರಾಯ."ಇಡೀ ಭಾರತದಲ್ಲಿ ದೇವರಾಯನಂತ ಅರಸನಿಲ್ಲ" ಎಂದು ಪರ್ಷಿಯಾ ದೇಶದ ರಾಯಭಾರಿ ಅಬ್ದುರ್ ರಜಾಕ್ ಹೇಳಿದ್ದಾನೆ. ಹಂಪಿಯ ಹಜಾರ ರಾಮಸ್ವಾಮಿ ದೇವಾಲಯವನ್ನು ಕಟ್ಟಿಸಿದವನು ಇವನೇ.
53. ವಿಜಯನಗರದ ಅರಸರಲ್ಲಿ ಅತ್ಯಂತ ಪ್ರಸಿದ್ದ ನಾದವನು ತುಳುವ ವಂಶದ ಕೃಷ್ಣದೇವರಾಯ. ಇವನು ತೆಲುಗು ಮತ್ತು ಸಂಸ್ಕೃತದಲ್ಲಿ ವಿದ್ವಾಂಸನಾಗಿದ್ದ. ತೆಲುಗಿನಲ್ಲಿ "ಆಮುಕ್ತ ಮಾಲ್ಯದ" ಮತ್ತು ಸಂಸ್ಕೃತದಲ್ಲಿ "ಜಾಂಬವತೀ ಕಲ್ಯಾಣ" ಎಂಬ ಕೃತಿಯನ್ನು ರಚಿಸಿರುವನು. ಕನ್ನಡರಾಜ್ಯ ರಮಾರಮಣ ಎಂಬುದು ಈತನ ಬಿರುದು.
54. 1565 ರಲ್ಲಿ ಸುಲ್ತಾನರ ಒಕ್ಕೊಟ ಹಾಗೂ ವಿಜಯನಗರದ ನಡುವೆ ನಡೆದ ಯುದ್ದವನ್ನು "ರಕ್ಕಸತಂಗಡಿ ಕದನ" ಎನ್ನುವರು
55. ಉತ್ತರದಲ್ಲಿ ಕೃಷ್ಣಾ ಮತ್ತು ದಕ್ಷಿಣದಲ್ಲಿ ತುಂಗ ಭದ್ರಾ ನದಿಗಳ ನಡುವಿನ ಪ್ರದೇಶವೇ ಫಲವತ್ತಾದ "ದೋಆಬ್ " .ಈ ದೋ ಆಬ್ ಗಾಗಿ ಉತ್ತರದಲ್ಲಿ ಮುಸ್ಲಿಂ ಸಾಮ್ರಾಜ್ಯ ಮತ್ತು ದಕ್ಷಿಣದಲ್ಲಿ ವಿಜಯನಗರಗಳಿಗೆ ನಿರಂತರ ಯುದ್ದಗಳು ನಡೆಯುತ್ತಿದ್ದವು.
56. ಬಹಮನಿ ವಂಶದಲ್ಲಿ ಫಿರೂಜ್ಶಾ ಬಹಮನಿ ಶ್ರೇಷ್ಟನಾದ ಅರಸನಾಗಿದ್ದ.
57. ಮುಹಮ್ಮದ್ ವಿಜಯಪುರದ ಗೋಲಗುಮ್ಮಟ ವನ್ನು ಕಟ್ಟಿಸಿದನು , ಆಸಾರ್ ಮಹಲ್ ಇವನ ಇನ್ನೊಂದು ಸುಂದರ ರಚನೆ.
58. ಶಿವಾಜಿಯು ಪುಣೆಯ ಶಿವನೇರಿ ದುರ್ಗದಲ್ಲಿ ಜನಿಸಿದನು. ಇವನ ತಂದೆ ಷಹಾಜಿ ಭೋಸ್ಲೆ ತಾಯಿ ಜೀಜಾಬಾಯಿ.
59. ಶಿವಾಜಿಯ ಗುರುಗಳು ದಾದಾಜಿ ಕೊಂಡದೇವ ಮತ್ತು ತಾನಾಜಿ ಮಾಲಸುರೆ ಶಿವಾಜಿಗೆ ಶಸ್ತ್ರಾಸ್ತ್ರ ವಿದ್ಯೆ ಕಳಿಸಿದರು.
60. ಶಿವಾಜಿಯು ತನ್ನ 19ನೇ ವರ್ಷದಲ್ಲಿ ವಿಜಯಪುರದ ಆದಿಲ್ ಷಾ ನಾ ಅಧೀನದಲ್ಲಿದ್ದ ತೋರಣ ದುರ್ಗವನ್ನು ವಶಪಡಿಸಿಕೊಂಡನು.
61. ಶಿವಾಜಿಯ ಆಡಳಿತದಲ್ಲಿ ಸಹಕರಿಸಲು "ಅಷ್ಟಪ್ರಧಾನರು" ಎಂಬ 8 ಮಂತ್ರಿಗಳಿದ್ದರು. ಮತ್ತು ಪ್ರಧಾನಮಂತ್ರಿಯನ್ನು "ಪೇಶ್ವೆ" ಎಂದು ಕರೆಯಲಾಗುತಿತ್ತು.
62. ಚಿಕ್ಕದೇವರಾಜನು ಒಡೆಯರ ವಂಶದ ಪ್ರಾರಂಭದ ಪ್ರಸಿದ್ದ ಅರಸ ಶೂರನಾಗಿದ್ದ ಇವನು ರಾಜ್ಯವನ್ನು ವಿಸ್ತರಿಸಿದನು.
ಚಿಕ್ಕದೇವರಾಜನ ಜನಮುಖಿ ಸಾಧನೆಗಳು ಅನೇಕ ಅದರಲ್ಲಿ ರಾಜಧಾನಿಯಲ್ಲಿ ಸ್ಥಾಪಿಸಿದ ಹದಿನೆಂಟು ಶಾಖೆಗಳುಳ್ಳ ಮುಖ್ಯ ಆಡಳಿತ ಕಛೇರಿಯಾದ "ಅಠಾರಾ ಕಚೇರಿ".
63. ಚಿಕ್ಕದೇವರಾಜನು ಮೊಘಲರಿಗೆ ಮೂರು ಲಕ್ಷ ವರಹಗಳನ್ನು ತೆತ್ತು ಬೆಂಗಳೂರನ್ನು ಗುತ್ತಿಗೆಗೆ ಪಡೆದಿದ್ದನು.
64. ಶ್ರೀರಂಗಪಟ್ಟಣದ ಬಳಿ ಕಾವೇರಿಗೆ ಅಣೆಕಟ್ಟು ಕತ್ತಿ ಕೃಷಿಗೆ ನೀರೊದಗಿಸಿದಲ್ಲದೆ ಆಡಳಿತದಲ್ಲಿ ಮಿತವ್ಯಯ ಸಾಧಿಸಿ ಭಾರೀ ನಿಧಿಯನ್ನು ಕೂಡಿ "ನವಾಕೊಟೀ ನಾರಾಯಣ" ಎಂಬ ಬಿರುದನ್ನು ಪಡೆದ. ಸರ್ಕಾರದ ಕಾಗದ ಪತ್ರಗಳ ವಿತರಣೆಗೆ "ಅಂಚೆ" ವ್ಯವಸ್ತೆಯನ್ನು ಸ್ಥಾಪಿಸಿದ.
65. ಚಿಕ್ಕದೇವರಾಜನ ಆಸ್ಥಾನದಲ್ಲಿದ್ದ ಸಿಂಗರಾರ್ಯನು ಕನ್ನಡದ ಮೊಟ್ಟಮೊದಲ ನಾಟಕ "ಮಿತ್ರವಿಂದ ಗೋವಿಂದ" ರಚಿಸಿದನು. ಹಾಗೂ ಸಾಂಚಿಯ ಹೊನ್ನಮ್ಮ "ಹದಿಬದೆಯ ಧರ್ಮ" ಎಂಬ ಕೃತಿಯನ್ನು ರಚಿಸಿದಳು.
5,200 ಕಿ ಮೀ ಭೂಗಡಿ ಪ್ರದೇಶವನ್ನು ಮತ್ತು 7516.5 ಕಿ ಮೀ ಜಲಗಡಿ ಪ್ರದೇಶವನ್ನು ಹೊಂದಿದೆ.
2. ರಾಷ್ಟ್ರೀಯ ರಕ್ಷಣಾ ಕಾಲೇಜು - ನವದೆಹಲಿ
3. ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕೇಂದ್ರ - ಉದಕಮಂಡಲ
4. ಭಾರತೀಯ ಮಿಲಿಟರಿ ಅಕಾಡೆಮಿ - ಡೆಹ್ರಾಡೂನ್
5. ರಾಷ್ಟ್ರೀಯ ರಕ್ಷಣಾ ಅಕಾಡೆಮಿ - ಖಡಕ್ ವಾಸ್ಲಾ , ಪುಣೆ.
6. ಕರ್ನಾಟಕ ಸರ್ಕಾರವು 1964 ರಲ್ಲಿ ಪಶು ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದೆ.
7. ಮಕ್ಕಳ ಸಹಾಯವಾಣಿ 1098.
8. ಭೂ ಸೇನೆಯ ಮುಖ್ಯಸ್ಥರನ್ನು ಜನರಲ್ ಎನ್ನುವರು ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.
9. ನೌಕಾದಳದ ಮುಖ್ಯಸ್ಥರನ್ನು ಆಡ್ಮಿರಲ್ ಎನ್ನುವರು
10. ಕರ್ನಾಟಕದ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆಯಿದೆ.
11. ವಾಯುಪಡೆಯ ಮುಖ್ಯಸ್ಥರನ್ನು ಏರ್ ಚೀಫ್ ಮಾರ್ಷಲ್ ಎನ್ನುವರು, ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.
12. ಆಡಳಿತ ಅನುಕೂಲಕ್ಕಾಗಿ ವಾಯುಪಡೆಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ.
13. ಭಾರತದಲ್ಲಿ ಸುಮಾರು 47000 ಕ್ಕೂ ಹೆಚ್ಚು ಸಸ್ಯವರ್ಗಗಳನ್ನು ಗುರುತಿಸಲಾಗಿದೆ.
14. ಸುಮಾರು 90000 ಬಗೆಯ ವೈವಿದ್ಯಮಯ ಪ್ರಾಣಿಗಳಿವೆ ಅವುಗಳಲ್ಲಿ 1232 ಬಗೆಯ ಪಕ್ಷಿವಾರ್ಗ ಮತ್ತು 2546 ಬಗೆಯ ಮೀನುವಾರ್ಗ ಒಳಗೊಂಡಿದೆ.
15. ಭಾರತದ ರಾಷ್ಟ್ರ ದ್ವಜದಲ್ಲಿ ಮಧ್ಯದಲ್ಲಿ ನೀಲಿಬಣ್ಣದ ಚಕ್ರವಿದೆ ಅದರಲ್ಲಿ 24 ಗೆರೆಗಳಿವೆ.
16. ರಾಷ್ಟ್ರ ದ್ವಜದ ಉದ್ದಗಲಗಳ ಅನುಪಾತ 3:2.
17. ರಾಷ್ಟ್ರ ದ್ವಜದ ಚಕ್ರವು ಸಾರಾನಾಥದ ಅಶೋಕ ಸ್ತಂಬದದಲ್ಲಿರುವ ಚಕ್ರದ ಪ್ರತಿರೂಪವಾಗಿದೆ.
18. ರಾಷ್ಟ್ರ ಲಾಂಛನವು ಸಾರಾನಾಥದ ಅಶೋಕ ಸ್ತಂಬದದಲ್ಲಿರುವ ಮೇಲುಬಾಗದ ರೂಪಾಂತರವಾಗಿದೆ.
19. ಮೂಲ ಶಿಲ್ಪಕೃತಿಯಲ್ಲಿ ನಾಲ್ಕು ಸಿಂಹಗಳು ನಾಲ್ಕು ದಿಕ್ಕುಗಳಿಗೆ ಮುಖಮಾಡಿ ಒಂದಕ್ಕೊಂದು ಬೆನ್ನು ಮಾಡಿ ಗುಂಡಾಗಿರುವ ಪೀಠವೊಂದರ ಮೇಲೆ ನಿಂತಿದೆ. ಅದರ ನಾಲ್ಕು ದಿಕ್ಕಿನಲ್ಲಿ ಒಂದೊಂದು ಚಕ್ರವಿದೆ. ಆ ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹಗಳ ಚಿತ್ರವಿದೆ.
20. ಭಾರತವು ನಮ್ಮ ರಾಷ್ಟ್ರ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಿತು.
21. ರಾಷ್ಟ್ರ ಲಾಂಛನದ ಪೀಟದ ಕೆಳಗೆ ದೇವನಾಗರಿ ಲಿಪಿಯಲ್ಲಿ "ಸತ್ಯಮೇವ ಜಯತೇ" ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.
22. ರವೀಂದ್ರ ನಾಥ್ ಟಾಗೋರ್ ಬರೆದ (1911) ರಾಷ್ಟ್ರ ಗೀತೆಯನ್ನು (ನ್ಯಾಶನಲ್ ಆಂತಮ್)ಸಂವಿಧಾನ ಸಭೆಯು 24 23. ಜನವರಿ 1950 ರಂದು ಅಂಗೀಕರಿಸಿತು .
23. ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಅವಧಿ 52 ಸೆಕೆಂಡುಗಳು.
24. ಸಂವಿಧಾನದಲ್ಲಿ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಪಡೆದಿರುವ ವಂದೇಮಾತರಂ (ನ್ಯಾಶನಲ್ ಸಾಂಗ್) ಅನ್ನು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರವರ "ಆನಂದ ಮಠ" ಕಾದಂಬರಿ ಇಂದ ಆರಿಸಿಕೊಂಡಿದೆ.
25. ರಾಷ್ಟ್ರೀಯ ಪ್ರಾಣಿ - ಹುಲಿ
26. ರಾಷ್ಟ್ರೀಯ ಪಕ್ಷಿ - ನವಿಲು
27. ರಾಷ್ಟ್ರೀಯ ಹೂ - ತಾವರೆ
28. ಭಾರತ ಸರ್ಕಾರವು 1957 ಮಾರ್ಚ್ 22 ರಂದು "ರಾಷ್ಟ್ರೀಯ ಪಂಚಾಂಗ" ವನ್ನು ಆಚರಣೆಗೆ ತಂದಿತು.
29. ಪಂಚಾಂಗವನ್ನು ರೂಪಿಸುವಲ್ಲಿ ವಿಜ್ಞಾನಿ ಮೇಘನಾದ ಸಹ ಪ್ರಮುಖ ಪಾತ್ರ ವಹಿಸಿದ್ದರು.
30. ರಾಷ್ಟ್ರೀಯ ಪಂಚಾಂಗವು ಶಕವರ್ಷವನ್ನು ಅಳವಡಿಸಿಕೊಂಡಿದೆ ಅಂದರೆ ಇದು ಕ್ರೈಸ್ತ ವರ್ಷಕ್ಕಿಂತ 78 ವರ್ಷ ನಂತರ ಪ್ರಾರಂಭವಾಗುತ್ತದೆ. ವರ್ಷಾರಂಭ ಸಾಮಾನ್ಯವಾಗಿ ಮಾರ್ಚ್ 22 ಅಧಿಕ ವರ್ಷದಲ್ಲಿ ಅದು ಮಾರ್ಚ್ 21.
31. ಗಾಂಧಿ ಜಯಂತಿ ಆಕ್ಟೋಬರ್-2
32. ಅಂಬೇಡ್ಕರ್ ಜಯಂತಿ ಏಪ್ರಿಲ್ - 14
33. ಎರಡನೆಯ ರಾಷ್ಟ್ರಪತಿ ರಾಧಾಕೃಷ್ಣನ್ ಜನ್ಮದಿನ ಹಾಗೂ ಶಿಕ್ಷಕರ ದಿನ ಸೆಪ್ಟೆಂಬರ್ - 5
34. ಪ್ರಥಮ ಪ್ರದಾನಿ ಜವಾಹರ್ಲಾಲ್ ನೆಹರು ಜನ್ಮದಿನ ಹಾಗೂ ಮಕ್ಕಳ ದಿನ ನವೆಂಬರ್ - 14
35. ಕನ್ನಡ ರಾಜ್ಯ (ಮೈಸೂರು ರಾಜ್ಯ) ಒಂದುಗೂಡಿದ ದಿನ 1956 ನವೆಂಬರ್ 1 ಕನ್ನಡ ರಾಜ್ಯೋತ್ಸವ.
36. ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ್ದು ದೇವರಾಜ ಅರಸು 1973 ನವೆಂಬರ್ 1 ರಂದು.
37. ಸ್ವಾಮಿ ವಿವೇಕಾನಂದ ರವರು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಇವರ ಜನ್ಮ ದಿನವನ್ನು ರಾಷ್ಟ್ರೀಯ ಯುವಜನದಿನವೆಂದು ಅಂದರೆ ಜನವರಿ 12 ರಂದು ಆಚರಿಸಲಾಗುತ್ತದೆ.
38. ಯೂರೋಪ್ ಒಟ್ಟೂ ದೇಶಗಳ ಸಂಖ್ಯೆ 56.
39. ಯೂರೋಪ್ 10 ಪಶ್ಚಿಮದಿಂದ 60 ಪೂರ್ವ ರೇಖಾಂಶ ಹಾಗೂ ಉತ್ತರದಿಂದ 72 ಉತ್ತರ ಅಕ್ಷಾಂಶಗಳಲ್ಲಿ ನೆಲೆಗೊಂಡಿದೆ.
40. ಯೂರೋಪ್ ಪ್ರಪಂಚದ ಎರಡೆನೆಯ ಚಿಕ್ಕ ಭೂಖಂಡ. ಅದರ ಒಟ್ಟೂ ವಿಸ್ತೀರ್ಣ 10.4 ಮಿಲಿಯನ್ ಚ. ಕಿ . ಮೀ.
41. ಯೂರೋಪ್ನ ಮೂರು ಕಡೆ ನೀರಿನಿಂದ ಆವೃತ್ತವಾಗಿದೆ. ಉತ್ತರದಲ್ಲಿ ಬೇರೆಂಟ್ ಸಮುದ್ರ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ದಕ್ಷಿಣದಲ್ಲಿ ಮೆಡಿಟರೆನಿಯನ್ ಸಮುದ್ರ.
42. ಯೂರೋಪಿನ ಪೂರ್ವ ಭಾಗದಲ್ಲಿ ಏಷ್ಯಾ ಖಂಡವಿದ್ದು ಅದನ್ನು ಯುರಲ್ಸ್ ಪರ್ವತ, ಕಕಾಸಸ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರಗಳು ಯೂರೋಪಿನಿಂದ ಬೇರ್ಪಡಿಸುತ್ತದೆ. ದಕ್ಷಿಣಕ್ಕೆ ಆಫ್ರಿಕಾ ಖಂಡವಿದೆ.
43. ಯೂರೋಪಿನ ಅತಿ ಎತ್ತರದ ಬಿಂದು ಕಕಾಸಸ್ ಪರ್ವತ ಸರಣಿಯ ಮೌಂಟ್ ಎಲ್ ಬ್ರೂಸ್ (5633).ಅತ್ಯಂತ ತಗ್ಗಾದ ಸ್ಥಳ ಕ್ಯಾಸ್ಪಿಯನ್ ಸಮುದ್ರ.
44. ಆಫ್ರಿಕಾ ಖಂಡವು ಏಷ್ಯಾದ ನಂತರ ಪ್ರಪಂಚದ ಎರಡನೆಯ ದೊಡ್ಡ ಖಂಡವಾಗಿದೆ.
45. ಆಫ್ರಿಕಾ ಖಂಡವು 52 ದೇಶಗಳನ್ನು ಒಳಗೊಂಡಿದೆ.
46. ಆಫ್ರಿಕಾ ಖಂಡವು 37 ಉತ್ತರ ಮತ್ತು 35 ಡಿಗ್ರಿ ದಕ್ಷಿಣ ಅಕ್ಷಾಂಶ ಹಾಗೂ 17 ಡಿಗ್ರಿ ಪಶ್ಚಿಮ ಮತ್ತು 50 ಡಿಗ್ರಿ ಪೂರ್ವ ರೇಖಾಂಶಗಳ ನಡುವೆ ನೆಲೆಸಿದೆ.
47. ಭೂಮದ್ಯ ರೇಖೆಯು ಹೆಚ್ಚ್ಹು ಕಡಿಮೆ ಈ ಖಂಡದ ಮದ್ಯ ಭಾಗದಲ್ಲಿ ಹಾಯ್ದು ಹೋಗುವುದರಿಂದ ಇದನ್ನು "ಕೇಂದ್ರೀಯ ಖಂಡ" ಎಂದು ಕರೆಯುತ್ತಾರೆ.
48. ಆಫ್ರಿಕಾದ ಒಟ್ಟೂ ವಿಸ್ತೀರ್ಣ 30.4 ಮಿಲಿಯನ್ ಚ. ಕಿ. ಮೀ ಮತ್ತು ದಕ್ಷಿನೂತ್ತರವಾಗಿ 8000 ಕಿ. ಮೀ ಹಾಗೂ ಪೂರ್ವ- ಪಸ್ಚಿಮವಾಗಿ 7400 ಕಿ. ಮೀ ಅಗಲವಾಗಿದೆ.
49. ಅಲ್ ಘಿರಮ್ (ಟುನಿಸಿಯ) ಆಫ್ರಿಕಾದ ಉತ್ತರದ ತುದಿಯಾದರೆ ಆಗುಲ್ಹಾಸ್ ದಕ್ಷಿಣದ ತುದಿಯಾಗಿದೆ.
50. ಆಫ್ರಿಕಾದ ಬಹುತೇಕ ಭೂ ಭಾಗವು ಒಂದಿಲ್ಲೊಂದು ಸಮುದ್ರ ಅಥವಾ ಮಹಾಸಾಗರಗಳಿಂದ ಸುತ್ತುವರಿಯಲ್ಪಟ್ಟಿದೆ. ಉತ್ತರದಲ್ಲಿ ಮೆಡಿಟರೇನಿಯನ್, ಪಶ್ಚಿಮಕ್ಕೆ ಅಟ್ಲಾಂಟಿಕ್, ಪೂರ್ವಕ್ಕೆ ಕೆಂಪು ಸಮುದ್ರ ಹಾಗೂ ಹಿಂದೂ ಮಹಾಸಾಗರಗಳು ಸುತ್ತು ವರಿದಿದೆ.
51. ಜೀಬ್ರಾಲ್ಟರ್ ಜಲಸಂದಿಯೂ ಯೂರೋಪ್ ಖಂಡದಿಂದ ಕೆಂಪು ಸಮುದ್ರದಿಂದ ಅರೇಬಿಯಾ ಪರ್ಯಾಯ ದ್ವೀಪದಿಂದ ಆಫ್ರಿಕಾವನ್ನು ಪ್ರತ್ಯೇಕಿಸುತ್ತದೆ.
52. ಸುಡಾನ್ ತಗ್ಗು ಪ್ರದೇಶವು ಬಿಳಿ ಮತ್ತು ನೀಲಿ ನೈಲ್ ನದಿಗಳು ಹರಿಯುವ ಮತ್ತು ಪ್ರಪಂಚದಲ್ಲೇ ಅತಿ ವಿಸ್ತಾರವಾಗಿರುವ ಜವುಗು ಭೂಮಿಯನ್ನು ( ಸಡ್, Sudd) ಹೊಂದಿದೆ.
53. ಆಫ್ರಿಕಾದ ಟಾಂಗ ನಿಕ ಸರೋವರವು ಪ್ರಪಂಚದ ಎರಡನೆಯ ಅತಿ ಆಳದ ಸರೋವರವಾಗಿದೆ. ಇದು ಸುಮಾರು 1436 ಮೀ ಆಳವಾಗಿದೆ.
54. ಆಫ್ರಿಕಾದ ಸೀಳು ಕಣಿವೆಯ ಎರಡು ಸಾಲಿನ ನಡುವೆ ಇರುವ ವಿಕ್ಟೋರಿಯಾ ಸರೋವರವು ಆಫ್ರಿಕಾದ ಬಹು ದೊಡ್ಡ ಸರೋವರವಾಗಿದೆ. ಇದು ಸುಮಾರು 69481 ಚ. ಕಿ. ಮೀ ವಿಸ್ತಾರವಾಗಿದೆ. ಇಲ್ಲಿಂದ ನೈಲ್ ನದಿ ಉಗಮವಾಗುತ್ತದೆ.
55. ಆಫ್ರಿಕಾದ ಖಂಡದ ಅತ್ಯಂತ ಎತ್ತರವಾದ ಶಿಖರಗಳು ಕಿಲಿಮಂಜಾರೋ ಪರ್ವತಗಳು. ಎತ್ತರ ಸುಮಾರು 5895 ಮೀ ಗಳು.
56. ಆಫ್ರಿಕಾದ ಅತ್ಯಂತ ತಗ್ಗು ಪ್ರದೇಶ ಅಸಲ್ (ಜಿಬೋಟಿ) ಸರೋವರವಾಗಿದೆ.
57. ಸೂಯೆಜ್ ಕಾಲುವೆಯು ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರವನ್ನು ಸಂಪರ್ಕಿಸುತ್ತದೆ ಮತ್ತು ಇದು ಪ್ರಪಂಚದಲ್ಲೇ ಹೆಚ್ಚು ಹಡಗು ಸಂಚರಿಸುವ ಸಾಗರ ಮಾರ್ಗವಾಗಿದ್ದು ಯುರೋಪ್ ಮತ್ತು ಏಷ್ಯಾಗಳ ನ್ನು ಕಡಿಮೆ ಅಂತರದಿಂದ ಸಂಪರ್ಕಿಸುತ್ತದೆ.
58. ನೈಲ್ ನದಿಯು ಪ್ರಪಂಚದ ಅತ್ಯಂತ ಉದ್ದವಾದ ನದಿ ಇದು 6650 ಕಿ ಮೀ ಉದ್ದ ಹರಿಯುತ್ತದೆ. ವಿಕ್ಟೋರಿಯಾ ಸರೋವರದಲ್ಲಿ ಉಗಮ ಗೊಂಡು ಮೆಡಿಟರೇನಿಯನ್ ಸಮುದ್ರದಲ್ಲಿ ಸಂಗಮವಾಗುತ್ತದೆ.
59. ಕ್ಯಾಮರೂನ್ ಆಫ್ರಿಕಾದ ಅತ್ಯಂತ ತೇವದ ಪ್ರದೇಶವಾಗಿದ್ದು 1016 ಸೆಂ. ಮೀ ವಾರ್ಷಿಕ ಮಳೆಯನ್ನು ಪಡೆಯುತ್ತದೆ.
60. ಪ್ರಪಂಚದ ಒಟ್ಟೂ ವಜ್ರದ ನಿಕ್ಷೇಪದಲ್ಲಿ ಶೇ 80 ಭಾಗವು ಆಫ್ರಿಕಾ ಒಂದರಲ್ಲೇ ಕಂಡುಬರುತ್ತದೆ. ಬೋನ್ಸ್ ವಾನ , ಜೈರೆ , ಮತ್ತು ದಕ್ಷಿಣ ಆಫ್ರಿಕಾಗಲು ಹೆಚ್ಚು ವಜ್ರ ಉತ್ಪಾದಿಸುವ ದೇಶಗಳು.
61. ಲಿಬಿಯಾದ ಇಲ್ ಅಜಿಜಿಯಾದಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಉಷ್ಣಾಂಶ 50 ಡಿಗ್ರೀ ಸೆಲ್ಷಿಯಸ್ ಧಾಕಲಾಗುತ್ತದೆ.
62. ಅಡ್ಡಾಕ್ಷ ಎಂಬ ಪ್ರಾಣಿ ನೀರು ಕುಡಿಯುವುದಿಲ್ಲ ಬದಲಾಗಿ ತನಗೆ ಬೇಕಾದ ನೀರನ್ನು ತಾನು ತಿನ್ನುವ ಹುಲ್ಲು ಮತ್ತು ಸಸ್ಯಗಳಿಂದ ಪಡೆಯುತ್ತದೆ.
63. ಪಿಗ್ಮಿಗಳು ಪ್ರಪಂಚದಲ್ಲೇ ಅತಿ ಗಿಡ್ಡ ಜನರಾಗಿದ್ದು ಇವರು ಕಾಂಗೊ ಕಣಿವೆಯಲ್ಲಿ ವಾಸಿಸುತ್ತಾರೆ.
ಕನ್ನಡದ ಪ್ರಸಿದ್ದ ಕಾದಂಬರಿಗಳು
ಕವಿ ಕಾದಂಬರಿಗಳು
ಗಿರೀಶ್ ಕಾರ್ನಾಡ್ ನಾಗಮಂಡಲ ,ಅಗ್ನಿ ಮತ್ತು ಮಳೆ
ಬಿ ಜಿ ಎಲ್ ಸ್ವಾಮಿ ಕಾಲೇಜು ರಂಗ
ಗೋರೂರು ರಾಮಸ್ವಾಮಿ ಅಯ್ಯಂಗಾರ್ ಭೂತಯ್ಯನ ಮಗ ಅಯ್ಯು
ಜೆ ಬಿ ಜೋಶಿ ಧರ್ಮಸೆರೆ
ಕೆ ವಿ ಅಯ್ಯರ್ ಶಾಂತಲ
ಅ ನ ಕೃ ಸಂಧ್ಯಾರಾಗ
ನಾ ಕಸ್ತೂರಿ ರಂಗನಾಯಕಿ
ಪೂರ್ಣಚಂದ್ರ ತೇಜಸ್ವಿ ಅಬಚೂರಿನ ಪೋಸ್ಟ್ ಆಫೀಸು
ಶಂಕರ ಮೊಕಾಶಿ ಪುಣೇಕರ ಗಂಗವ್ವ ಗಂಗಾಮಾಯಿ
ಯಶವಂತ ಚಿತ್ತಾಲ ಮೂರು ದಾರಿಗಳು ,ಶಿಕಾರಿ ,ಕಥೆಯಾದಳು ಹುಡುಗಿ ,ಅಬೋಲಿನ
ಯು ಅರ್ ಅನಂತಮೂರ್ತಿ ಸಂಸ್ಕಾರ
ಶ್ರೀಕೃಷ್ಣ ಆಲನಹಳ್ಳಿ ಕಾಡು
ಯಂ ಕೆ ಇಂದಿರಾ ಪಣಿಯಮ್ಮ
ಮ ನ ಜ ಮಾಗಿ
ಬಿ ಟಿ ಲಲಿತಾನಾಯಕ್ ಗತಿ
ವೀಣಾ ಶಾಂತೇಶ್ವರ ಗಂಡಸರು
ನಿರಂಜನ ಮೃತ್ಯುಂಜಯ
ಬರಗೂರು ರಾಮಚಂದ್ರಪ್ಪ ಸೂರ್ಯ ಶಿಕಾರಿ
ತ ರಾ ಸು ದುರ್ಗಾಸ್ತಮಾನ , ಮಸಣದ ಹೂವು , ತಿರುಗುಬಾಣ
ಬಸವರಾಜ ಕಟ್ಟಿಮನಿ ಮಾಡಿ ಮಾಡಿದವರು
ತ್ರಿವೇಣಿ ಶರಪಂಜರ ,ಅಪಸ್ವರ,ಬೆಳ್ಳಿಮೋಡ
ಕೃಷ್ಣಮೂರ್ತಿ ಪುರಾಣಿಕ್ ಸನಾದಿ ಅಪ್ಪಣ್ಣ
ಚಂದ್ರಶೇಕರ ಕಂಬಾರ ಸಿಂಗಾರವ್ವ ಮತ್ತು ಅರಮನೆ ,ಜಡಭರತ ,ಆಊರು ಈ ಊರು
ಭಾರತದ ಪ್ರಮುಖ ಸಂಸ್ಥೆಗಳು ಮತ್ತು ಆಕಾಡೆಮಿಗಳು
ಸಂಸ್ಥೆ ಸ್ಥಳ
ಅಡ್ಮಿನಿಸ್ಟ್ರೇಷನ್ ಸ್ಟಾಫ್ ಕಾಲೇಜ್ ಹೈದರಾಬಾದ್
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನವದೆಹಲಿ
ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ಟ್ರಾಬೆ
ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಚೆನ್ನೈ
ಸೆಂಟ್ರಲ್ ಲೋಕೋ ಮೋಟಿವ್ ವರ್ಕ್ ಶಾಪ್ ಚಿತ್ತರಂಜನ್
ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಡೆಹ್ರಾಡೂನ್
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿ
ಭಾರತೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮುಂಬೈ
ಇಂಡಿಯನ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಕಾರ್ನಲ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೆಷನ್ ನವದೆಹಲಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಡೆಹ್ರಾಡೂನ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು
ಇಂಡಿಯನ್ ಮಿಲಿಟರಿ ಅಕಾಡಮಿ ಡೆಹ್ರಾಡೂನ್
ಇಂಡಿಯನ್ ನಾವೆಲ್ ಅಕಾಡಮಿ ಕೊಚ್ಚಿ
ಇಸ್ರೋ ಬೆಂಗಳೂರು
ಇಂಡಿಯನ್ ಟೆಕ್ಸ್ಟೈಲ್ ಇನ್ಸ್ಟಿಟ್ಯೂಟ್ ಕಾನ್ಪುರ
ನ್ಯಾಷನಲ್ ಅಕಾಡಮಿ ಆಫ್ ಪೋಲಿಸ್ ಹೈದರಾಬಾದ್
ನ್ಯಾಷನಲ್ ಡಿಫೆನ್ಸ್ ಅಕಾಡಮಿ ಖಡಕ್ ವಾಸ್ಲಾ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ನವದೆಹಲಿ
ಪೈಲೆಟ್ ಟ್ರೈನಿoಗ್ ಎಸ್ಟಾಬ್ಲಿ ಷ್ಮೆಂಟ್ ಅಲಹಾಬಾದ್
ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಪುಣೆ
ವಿಸ್ತೀರ್ಣದಲ್ಲಿ ಕರ್ನಾಟಕ ದೇಶದಲ್ಲಿ 7 ನೇ ಸ್ಥಾನ ಒಟ್ಟು 1,91,791 km.
ವಿಸ್ತೀರ್ಣದಲ್ಲಿ ರಾಜಸ್ಥಾನ ಇಡೀ ದೇಶದಲ್ಲೇ ದೊಡ್ಡದು ಒಟ್ಟು 3,42,240 km.
2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 6,11,30,704 ಮತ್ತು ಪ್ರತಿ 1೦೦೦ ಪುರುಷರಿಗೆ 968 ಮಹಿಳೆಯರು ಮತ್ತು ಪ್ರತಿ 1km ವಿಸ್ತೀರ್ಣಕ್ಕೆ 319 ಜನಸಾಂದ್ರತೆ .
ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 30 ಜಿಲ್ಲೆಗಳು ಮತ್ತು 220 ತಾಲ್ಲುಕುಗಳಿವೆ .
ಸಾಮಾನ್ಯ ಮನುಷ್ಯನ ಹೃದಯ ನಿಮಿಷಕ್ಕೆ ೭೦ ಬಾರಿ ಬಡಿಯುತ್ತದೆ.
ಮನುಷ್ಯನ ಅಸ್ಥಿಪಂಜರದಲ್ಲಿ ಒಟ್ಟು ಮೂಳೆಗಳ ಸಂಖ್ಯೆ 206.
ಅಸಹಕಾರ ಚಳುವಳಿ ೧೯೨೦
ಕ್ವಿಟ್ ಇಂಡಿಯಾ ಚಳುವಳಿ ೧೯೪೨
*☀ ವಿಷಯ : ಸಾಮಾನ್ಯ ವಿಜ್ಞಾನ :~* (Whatsup Notes)
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*
2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*
3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*
5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*
7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*
8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*
10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*
11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*
13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*
15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*
16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*
17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*
18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*
20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*
21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*
23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*
24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*
25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*
26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*
28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*
29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*
30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*
31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*
32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*
33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*
34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*
35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*
39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*
40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*
41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*
43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*
44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*
45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*
46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*
48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*
49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*
51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*
53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*
54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*
55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*
58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*
60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*
✌ಪ್ರಮುಖ100 ಪಿತಾಮಹರುಗಳು✌
1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್
1. ಭಾರತದ ಸಂವಿಧಾನವನ್ನು "ಸಂವಿಧಾನ ಸಭೆ " ಎಂಬ ವಿಶೇಷ ಸಭೆಯು ಸಿದ್ಧಪಡಿಸಿತು .
2. ಅದರ ಪ್ರಥಮ ಅಧಿವೇಶನದಲ್ಲಿ ಡಾ. ರಾಜೇಂದ್ರ ಪ್ರಸಾದರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
3. ಸಂವಿಧಾನ ಸಭೆಯಲ್ಲಿ 299 ಮಂದಿ ಸದಸ್ಯರಿದ್ದರು 1946 ರಲ್ಲಿ ಅದರ ಪ್ರಥಮ ಸಧಿವೇಶನ ನಡೆಯಿತು.
4. ಸಂವಿಧಾನ ಸಭೆಯು ತನ್ನ ಕಾರ್ಯವನ್ನು ಚುರುಕುಗೊಳಿಸಲು ಕೆಲವು ಸಮಿತಿಗಳನ್ನು ರಚಿಸಿತು ಹಾಗೆ ಸಂವಿಧಾನ ಕರಡು 5. ಪ್ರತಿಯನ್ನು ಸಿದ್ಧಪಡಿಸಲು "ಸಂವಿದಾನ ಕರಡು ಸಮಿತಿ" ಯನ್ನು ನೇಮಿಸಿ ಅದಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ರವರನ್ನು ಅಧ್ಯಕ್ಷರನ್ನಾಗಿಸಿತು.
6. ಸಂವಿಧಾನದ ಕರಡು ಪ್ರತಿಯನ್ನು ಪರಿಶೀಲಿಸಿದ ಸದಸ್ಯರು 2473 ತಿದ್ದುಪಡಿಯನ್ನು ಸೂಚಿಸಿದರು.
7. ಕರಡು ಸಂವಿಧಾನ ಮತ್ತು ತಿದ್ದುಪಡಿಗಳನ್ನು ಸಂವಿಧಾನ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಅಂತಿಮ ರೂಪ ನೀಡಲು ಸುಮಾರು 3 ವರ್ಷಗಳು ಬೇಕಾದವು.
8. ಡಾ. ಬಿ. ಆರ್. ಅಂಬೇಡ್ಕರ್ ರವರು 15-08-1947 ರಿಂದ 26-01-1950 ರವರೆಗೆ ಕಾನೂನು ಮಂತ್ರಿಯಾಗಿದ್ದರು.
9. 26 ಜನವರಿ 1950 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು.
10. ಭಾರತ ಸಂವಿಧಾನವು 444 ವಿಧಿಗಳನ್ನು 12 ಪರಿಛೇದಗಳನ್ನು ಹೊಂದಿದೆ.
11. ಭಾರತ ಸಂವಿಧಾನವು ಪೌರರಿಗೆ 6 ಮೂಲಭೂತ ಹಕ್ಕುಗಳನ್ನು ನೀಡಿದೆ.ಅವುಗಳನ್ನು ಮೊಟಕು ಗೊಳಿಸುವ ಶಾಸನ,ನಿಯಮ ಅಥವಾ ಉಪಕ್ರಮಗಳನ್ನು ಕೈಗೊಳ್ಳಲ್ಲು ಯಾವುದೇ ರಾಜ್ಯವು ಮಾಡುವಂತಿಲ್ಲ.
12. ಅವು a .ಸಮಾನತೆಯಹಕ್ಕೂ b . ಸ್ವಾತಂತ್ರ್ಯದ ಹಕ್ಕು c . ಶೋಷಣೆಯ ವಿರುದ್ದದ ಹಕ್ಕು
d .ಧಾರ್ಮಿಕ ಸ್ವಾತಂತ್ರ್ಯದ ಹಕ್ಕು e . ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು f . ಸಂವಿಧಾನಬದ್ಧ ಪರಿಹಾರದ ಹಕ್ಕು.
13. ಮೂಲಭೂತ ಹಕ್ಕು ಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ಇಲ್ಲವೇ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಅರ್ಜಿಗಳನ್ನು "ರಿಟ್ ಅರ್ಜಿ " ಎನ್ನುವರು.
14. ಲೋಕಸಭೆಯನ್ನು ಸಂಸತ್ತಿನ "ಕೆಳಮನೆ" ಎನ್ನುವರು. ಸದಸ್ಯರ ಗರಿಷ್ಟ ಸಂಖ್ಯೆ 552.
15. ಲೋಕಸಭೆಯ ಸದಸ್ಯರ ಅಧಿಕಾರಾವಧಿ 5 ವರ್ಷಗಳು.ಲೋಕಸಭೆಯ ಸದಸ್ಯರಾಗಲು ಭಾರತದ ಪ್ರಜೆಯಾಗಿರಬೇಕು, ಕನಿಷ್ಟ 25 ವರ್ಷ ವಯಸ್ಸಾಗಿರಬೇಕು, ಜೈಲು ಶಿಕ್ಷೆಗೆ ಒಳಗಾಗಿರಬಾರದು, ಮತ್ತು ದಿವಾಳಿಯಾಗಿರಬಾರದು.
16. ಲೋಕಸಭೆಯ ಸದಸ್ಯರು ತಮ್ಮೊಳಗೆ ಒಬ್ಬರನ್ನು ಲೋಕಸಭೆಯ ಅಧ್ಯಕ್ಷರನ್ನಾಗಿ (ಸ್ಪೀಕರ್) ಆಯ್ಕೆ ಮಾಡುವರು.
17. ರಾಜ್ಯಸಭೆಯು ಸಂಸತ್ತಿನ ಮೇಲ್ಮನೆಯಾಗಿದೆ. ಇದರ ಗರಿಷ್ಟ ಸಂಖ್ಯೆ 250. ಇದರಲ್ಲಿ 238 ಸದಸ್ಯರನ್ನು ಎಲ್ಲಾ ರಾಜ್ಯಗಳ ವಿಧಾನಸಭಾ ಸದಸ್ಯರು ಆಯ್ಕೆ ಮಾಡುವರು. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುವರು.
18. ರಾಜ್ಯಸಭಾ ಸದಸ್ಯರಾಗುವವರು ಕನಿಷ್ಟ 30 ವರ್ಷ ವಯಸ್ಸಾಗಿರಬೇಕು. ಇವರ ಅಧಿಕಾರಾವಧಿ 6 ವರ್ಷಗಳು.
19. ಭಾರತದ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರು.
20. ಭಾರತದ ರಾಷ್ಟ್ರಪತಿಯನ್ನು ಸಂಸತ್ತಿನ ಎರಡು ಸದನಗಳ ಚುನಾಯಿತ ಸದಸ್ಯರು ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ.
21. ಭಾರತದ ರಾಷ್ಟ್ರಪತಿ ಯಾಗಲು ಕನಿಷ್ಟ 35 ವರ್ಷ ವಯಸ್ಸಾಗಿರಬೇಕು ಮತ್ತು ಲೋಕಸಭೆಯ ಸದಸ್ಯರಿಗೆ ಇರುವ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು.ಇವರ ಅಧಿಕಾರಾವಧಿ 5 ವರ್ಷ.
22. ಭಾರತದ ಉಪ ರಾಷ್ಟ್ರಪತಿಯನ್ನು ಸಂಸತ್ತಿನ ಎರಡು ಸದನಗಳ ಸದಸ್ಯರು ಚುನಾಯಿಸುವರು ಹಾಗೂ ರಾಷ್ಟ್ರಪತಿಯಾಗಲು ಇರಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು.
23. 1-2-1992 ರಿಂದ ದಿಲ್ಲಿ ಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಕರೆಯಲಾಗಿದೆ.
24. ಸಂವಿಧಾನದ 8 ನೇ ಅನುಸೂಚಿಯಲ್ಲಿ ಸೇರ್ಪಡೆಯಾದ ಭಾಷೆಗಳು 22.
25. ಭಾರತದ 6 ರಾಜ್ಯಗಳಲ್ಲಿ ಮಾತ್ರ ಶಾಸಕಾಂಗವು "ವಿಧಾನಸಭೆ" ಮತ್ತು "ವಿಧಾನಪರಿಷತ್ತು" ಎಂಬ ಎರಡು ಸದನಗಳನ್ನು ಒಳಗೊಂಡಿದೆ.
26. ಸರ್ವೋಚ್ಚ ನ್ಯಾಲಯವು ದೇಶದ ಅತ್ಯುನ್ನತ ನ್ಯಾಯಾಲಯವಾಗಿದೆ ಹಾಗೂ ಇದು ನವದೆಹಲಿಯಲ್ಲಿದೆ.
27. ಇದರಲ್ಲಿ ಮುಖ್ಯ ನ್ಯಾಯಾಧೀಶರು ಹಾಗೂ ಇತರ 25 ನ್ಯಾಯಾಧೀಶರು ಇರುವರು.
ಇವರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
28. ರಾಜ್ಯ ಮಟ್ಟದಲ್ಲಿ ಉಚ್ಚ ನ್ಯಾಯಾಲಯವೇ ಅತ್ಯುನ್ನತ ನ್ಯಾಯಾಲಯ.
29. ದೇಶದಲ್ಲಿ ಒಟ್ಟೂ 24 ಉಚ್ಚ ನ್ಯಾಯಾಲಯಗಳಿವೆ.
30. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು ಭಾರತದ ಪ್ರಜೆ ಯಾಗಿರಬೇಕು , ಕನಿಷ್ಟ ಹತ್ತು ವರ್ಷಗಳ ಕಾಲ ಭಾರತದ ನ್ಯಾಯಾಂಗದಲ್ಲಿ ಸೇವೆ ಸಲ್ಲೀಸಿರಬೇಕುಅಥವಾ ಹತ್ತು ವರ್ಷಗಳ ಕಾಲ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲೀಸಿರಬೇಕು.
31. ರಾಷ್ಟ್ರಪತಿಯವರು ರಾಜ್ಯದ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ರಾಜ್ಯಪಾಲರೊಡನೆ ಸಮಾಲೋಚಿಸಿ ನೇಮಕ ಮಾಡುವರು.
32. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ 62 ವರ್ಷ.
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:12/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
No comments:
Post a Comment